ಚಿತ್ರದುರ್ಗ: ಧರ್ಮಸ್ಥಳದ ವಿಚಾರದಲ್ಲಿ ನಡೆದಂತಹ ಅಪಪ್ರಚಾರದ ಹಿಂದೆ ದೊಡ್ಡ ಮಟ್ಟದ ಷಡ್ಯಂತರ ನಡೆದಿದೆ.ಇದಕ್ಕೆ ವಿದೇಶಗಳಿಂದ ಹಾಗೂಕ್ರಿಶ್ಚಿಯನ್ಮಿಷನರಿಗಳಿಂದ ಹಣದ ನೆರವು ಬಂದಿದೆ.ಇದರಿಂದ ಹಿಂದೂಗಳ ಧಾರ್ಮಿಕ ಹಾಗೂ ಭಾವನೆ ಕ್ಷೇತ್ರವಾದ ಧರ್ಮಸ್ಥಳದಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಇದನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಖಂಡಿಸುತ್ತದೆ.ಈ ಪ್ರಕರಣವನ್ನುಎನ್ಐಎ ಹಾಗೂ ಇಡಿ ತನಿಖೆಗೆ ವಯಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಪ್ರಧಾನಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ನ ದಕ್ಷಿಣ ಪ್ರಾಂತ್ಯದ ಸಂಚಾಲಕರಾದ ಪ್ರಭಂಜನ್ ತಿಳಿಸಿದ್ದಾರೆ.ಚಿತ್ರದುರ್ಗ ನಗರದ ಹಿಂದೂ ಮಹಾ ಗಣಪತಿಯ ಮಹಾ ಮಂಟಪದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಕ್ಷೇತ್ರಹಲವಾರು ವರ್ಷಗಳಿಂದ ಹಿಂದೂಗಳ ಧಾರ್ಮಿಕ ಕೇಂದ್ರವಾಗಿದೆ.. ಇಲ್ಲಿಗೆ ದೇಶ/ ವಿದೇಶಗಳಿಂದಲೂ ಭಕ್ತಾದಿಗಳು ಆಗಮಿಸುವಮೂಲಕ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ… ಆದರೆ ಭಕ್ತಿ ಭಾವನೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ತರುವಂತಹ ಷಡ್ಯಂತರನಡೆಯುತ್ತಿದೆ. ಧರ್ಮಸ್ಥಳ ಕ್ಷೇತ್ರವು ರಾಜ್ಯದಲ್ಲಿ ಜನೋಪಕಾರಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಜನತೆಗೆಹತ್ತಿರವಾಗುತ್ತಿದೆ ಇದನ್ನು ಸಹಿಸದ ಕೆಲವು ಸಂಘಟನೆಗಳು ಹಾಗೂ ಕ್ರಿಶ್ಚಿಯನ್ ಮಿಷನರಿಗಳು ಇದಕ್ಕೆ ಧಕ್ಕೆ ತರುವಂತಹ ಕೆಲಸಮಾಡಲು ಮುಂದಾಗಿವೆ ಇದನ್ನು ಹಿಂದೂಗಳಾದ ನಾವು ಸಹಿಸುವುದಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಈ ಪ್ರಕರಣದಲ್ಲಿ ಪಿಎಫ್ಐ ಸಂಘಟನೆಯ ಪ್ರತಿರೂಪವಾಗಿರುವ ಎಸ್ಡಿಪಿಐ ಸಂಘಟನೆಯೂ ಕುಮ್ಮಕ್ಕು ನೀಡುತ್ತಿದೆ. ಅಲ್ಲಿ ಏನುಆಗದಿದ್ದರೂ ಸಹ ಏನೋ ಆಗಿದೆ ಎನ್ನುವ ರೀತಿಯಲ್ಲಿ ವಾತಾವರಣವನ್ನು ನಿರ್ಮಿಸಿ ಯಾರೋ ಅನಾಮಿಕ ವ್ಯಕ್ತಿಯಿಂದ ದೂರನ್ನುಕೊಡಿಸಿವೆ. ಇದನ್ನು ಪರಿಗಣಿಸಿದ ಸರ್ಕಾರ ಎಸ್ಐಟಿಗೆ ನೀಡಿ ತನಿಖೆ ನಡೆಸುತ್ತಿದ್ದರು ಸಹ ಅಲ್ಲಿ ಏನೂ ಸಹ ಸಿಕ್ಕಿಲ್ಲ ಇದರಿಂದಲೇತಿಳಿಯುತ್ತೆ ಇದೊಂದು ಷಡ್ಯಂತರ ಎಂದು ಗೊತ್ತಾಗುತ್ತದೆ. ಈ ಪ್ರಕರಣದ ಹಿಂದೆ ಮಹೇಶ್ ಶೆಟ್ಟಿ ತಿಮ್ಮರೋಡಿರವರ ಹೆಸರು ಸಹಇದ್ದು ಧರ್ಮಸ್ಥಳ ಅಪಪ್ರಚಾರ ನಡೆದ ಘಟನೆಯಲ್ಲಿ ಪಾಲುದಾರನೆಂದು ಕಾಣುತ್ತಿದೆ.. ಇವರ ಬಗ್ಗೆನೂ ಸಹ ತನಿಖೆ ನಡೆಸಿ ಕ್ರಮವಹಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.ಗೋಷ್ಟಿಯಲ್ಲಿ 2025ರ ಹಿಂದೂ ಮಾಹಾ ಗಣಪತಿಯ ಸಮಿತಿಯ ಅಧ್ಯಕ್ಷರಾದ ಶರಣ್ ಕುಮಾರ್, ವಿಶ್ವ ಹಿಂದು ಪರಿಷತ್ನ ಜಿಲ್ಲಾಧ್ಯಕ್ಷರಾದ ಷಡಾಕ್ಷರಪ್ಪ, ಕಾರ್ಯದರ್ಶಿ ಕೇಶವ ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







