ಭಾರತದಲ್ಲಿ ಸಕ್ಕರೆ ರೋಗಿಗಳ ಸಂಖ್ಯೆ ಅತ್ಯಧಿಕವಾಗಿದ್ದು, ಈ ದೇಶವನ್ನು ಸಕ್ಕರೆ ಕಾಯಿಲೆಯ ರಾಜಧಾನಿ ಎಂದೇ ಕರೆಯಲಾಗುತ್ತದೆ. ಪ್ರತೀ ಮನೆಯಲ್ಲಿ ಕನಿಷ್ಠ ಒಬ್ಬ ಮಧುಮೇಹ ರೋಗಿಯಾದರೂ ಇರುತ್ತಾರೆ. ಈ ಕಾಯಿಲೆ ಇಷ್ಟು ವ್ಯಾಪಕವಾಗಿ ಹರಡಲು ಮುಖ್ಯ ಕಾರಣ, ಇದು ಅನುವಂಶಿಕವಾಗಿ ಬರುವಂಥದ್ದು. ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ, ಅವರ ಮುಂದಿನ ಪೀಳಿಗೆಗೂ ಇದು ವರ್ಗವಾಗುವ ಅಪಾಯ ಹೆಚ್ಚಿರುತ್ತದೆ. ಅನುವಂಶಿಕವಾಗಿ ಬರುವ ಈ ಮಧುಮೇಹ ಕಾಯಿಲೆ ಇದ್ದರೆ ಅದು ಡಯಾಬಿಟಿಸ್ 1 ಎಂದು ಪರಿಗಣಿತವಾಗುತ್ತದೆ. ಜೀವನಶೈಲಿ ವ್ಯತ್ಯಯ, ಬೊಜ್ಜು ಇತ್ಯಾದಿ ಕಾರಣಕ್ಕೆ ಬರುವಂಥದ್ದು ಡಯಾಬಿಟಿಸ್ 2.ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಅದನ್ನು ನಿಯಂತ್ರಿಸಬಹುದು. ಇದಕ್ಕಾಗಿ ಪ್ರತಿದಿನ ಸರಿಯಾದ ಆಹಾರ ಮತ್ತು ಔಷಧಿ ಸೇವನೆಯ ಅಗತ್ಯವಿದೆ. ಆದರೆ ಇತ್ತೀಚೆಗೆ ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮಧುಮೇಹವನ್ನು ನಿಯಂತ್ರಿಸುವ ಬಗ್ಗೆ ಹೇಳಿದ್ದಾರೆ.
ಹಣ್ಣುಗಳು ಮತ್ತು ಅವುಗಳ ಬೀಜಗಳು
ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ನೇರಳೆ ಹಣ್ಣು ಮತ್ತು ಅದರ ಬೀಜಗಳನ್ನು ಮಧುಮೇಹ ರೋಗಿಗಳಿಗೆ ಶಿಫಾರಸು ಮಾಡುತ್ತಾರೆ. ಈ ಹಣ್ಣು ಮತ್ತದರ ಬೀಜಗಳು ಬೇರೆ ಯಾವುದೇ ಉತ್ತಮ ಡಯಾಬಿಟಿಸ್ ಔಷಧಕ್ಕಿಂತಲೂ ಸಾಟಿಯಲ್ಲಿ ಕಡಿಮೆ ಇಲ್ಲ ಎಂಬುದು ಅವರ ಅನಿಸಿಕೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು. ದೇಹದ ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂದು ಬಾಬಾ ರಾಮದೇವ್ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಹಣ್ಣುಗಳನ್ನು ಹೀಗೆ ಸೇವಿಸಿ
ಮಧುಮೇಹ ರೋಗಿಗಳು ಕೆಲವು ಹಣ್ಣುಗಳನ್ನು ಒಟ್ಟಿಗೆ ತಿನ್ನಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಇದಲ್ಲದೆ, ಉತ್ತಮ ಫಲಿತಾಂಶಕ್ಕಾಗಿ, ನೇರಳೆ ಬೀಜಗಳನ್ನು ಪುಡಿಮಾಡಿ ಸೇವಿಸಬಹುದು. ಮೊದಲು ನೇರಳೆ ಬೀಜಗಳನ್ನು ಚೆನ್ನಾಗಿ ತೊಳೆಯಬೇಕು. ನಂತರ, ಅವುಗಳನ್ನು ಬಿಸಿಲಿನಲ್ಲಿಟ್ಟು ಒಣಗಿಸಬೇಕು. ಹಾಗಲಕಾಯಿಯನ್ನು ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಣಗಿಸಲು ಬಿಸಿಲಿನಲ್ಲಿ ಇರಿಸಿ. ನೇರಳೆ ಮತ್ತು ಹಾಗಲಕಾಯಿಯ ಬೀಜಗಳು ಒಣಗಿದ ನಂತರ, ಕಪ್ಪು ಜೀರಿಗೆ, ಚಿರೈತಾ ಮತ್ತು ಕುಟ್ಕಿಯನ್ನು ಚೆನ್ನಾಗಿ ಒಣಗಿಸಿ. ಈಗ ಇವೆಲ್ಲವನ್ನೂ ನುಣ್ಣಗೆ ಪುಡಿಮಾಡಿ. ಇದರಿಂದ ಪುಡಿ ಸಿದ್ಧವಾಗುತ್ತದೆ.ಈ ಪುಡಿ ಮೇದೋಜ್ಜೀರಕ ಗ್ರಂಥಿಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಎಂದು ಯೋಗ ಗುರು ಹೇಳುತ್ತಾರೆ. ಇದು ಜೀರ್ಣಕ್ರಿಯೆಗೆ ಸಹ ಪ್ರಯೋಜನಕಾರಿಯಾಗಿದೆ. ಮಾವು ಮತ್ತು ನೇರಳೆ ಎರಡೂ ಒಂದೇ ಋತುವಿನಲ್ಲಿ ಬರುತ್ತವೆ. ಮಾವು ಜೀರ್ಣಿಸಿಕೊಳ್ಳಲು ಸ್ವಲ್ಪ ಭಾರವಾಗಿರುತ್ತದೆ, ಆದರೆ ನೇರಳೆ ಈ ಮಾವನ್ನು ಸಹ ಜೀರ್ಣಿಸಿಕೊಳ್ಳಬಲ್ಲದು. ಇದು ಜೀರ್ಣಕ್ರಿಯೆಗೆ ಒಳ್ಳೆಯದು.ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ, ಪ್ರತಿದಿನ ವ್ಯಾಯಾಮ ಮಾಡುವ ಮೂಲಕ ಮತ್ತು ಅನೇಕ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗಲಕಾಯಿ ಮತ್ತು ಆಮ್ಲಾ ರಸವನ್ನು ಮಧುಮೇಹಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇತರ ಕೆಲವು ಮನೆಮದ್ದುಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಯಾವುದೇ ಮನೆಮದ್ದನ್ನು ಅಳವಡಿಸಿಕೊಳ್ಳುವ ಮೊದಲು, ನೀವು ನಿಮ್ಮ ತಜ್ಞರನ್ನು ಸಂಪರ್ಕಿಸಬೇಕು. ಏಕೆಂದರೆ ಪ್ರತಿಯೊಬ್ಬರ ದೇಹದ ಅಗತ್ಯಗಳು ವಿಭಿನ್ನವಾಗಿರುತ್ತವೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







