ಬೆಂಗಳೂರು: ಇಡೀ ದೇಶದಲ್ಲಿ ವೋಟ್ ಚೋರಿ ಆಗಿರೋದು ಸತ್ಯ. ನರೇಂದ್ರ ಮೋದಿ ಅಕ್ರಮ ಮಾಡಿಯೇ ಚುನಾವಣೆಗಳನ್ನು ಗೆದ್ದಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಆರೋಪ ಮಾಡಿದ್ದಾರೆ.ರಾಹುಲ್ ಗಾಂಧಿ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮತಗಳ್ಳತನ ಆಗಿದೆ. ಆಳಂದ ಚುನಾವಣೆ ಆಗಿ 5-6 ವರ್ಷ ಆಯ್ತು. ಎಸ್ಐಟಿ ಅವರು ಎಲೆಕ್ಷನ್ ಕಮಿಷನ್ಗೆ ಪತ್ರ ಬರೆದಿದ್ದಾರೆ, ಆದರೆ ಇದಕ್ಕೆ ಉತ್ತರ ಕೊಟ್ಟಿಲ್ಲ. ಮೇಲ್ನೋಟದಲ್ಲಿ ಇದು ಸತ್ಯ ಆಗಿದೆ. ಕರ್ನಾಟಕ ಮಾತ್ರ ಅಲ್ಲ ಒರಿಸ್ಸಾ, ಮಹಾರಾಷ್ಟ್ರದಲ್ಲಿ ಮತಗಳ್ಳತನ ಆಗಿದೆ. ಬಿಹಾರದಲ್ಲಿ 3 ಲಕ್ಷ ಮನೆಗೆ 0 ನಂಬರ್ ಕೊಟ್ಟಿದ್ದಾರೆ. ಮೋದಿ ಹೀಗೆ ಅಕ್ರಮ ಮಾಡಿಯೇ ಚುನಾವಣೆಗಳನ್ನ ಗೆದ್ದಿರೋದು ಎಂದು ದೂರಿದ್ದಾರೆ.ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರಿಷ್ಕರಣೆ ಮಾಡಲಿ ಯಾರು ಬೇಡ ಅಂದರು. ಬಿಹಾರ ತರಹ ಆಗುವ ಆತಂಕ ಇದೆ. ಎಲೆಕ್ಷನ್ ಕಮಿಷನರ್ ಅವರನ್ನ ಹೇಗೆ ನೇಮಕ ಆಗಬೇಕು ಅಂತ ಇತ್ತು. ಬಿಜೆಪಿಯವರು ಆ ನಿಯಮವನ್ನೇ ಬದಲಾವಣೆ ಮಾಡಿದರು. ಎಲೆಕ್ಷನ್ ಕಮಿಷನ್ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಸರಿಯಾಗಿ ಉತ್ತರ ಕೊಟ್ಟಿಲ್ಲ. ಇವರೆಲ್ಲ ಒಬ್ಬ ಮನುಷ್ಯನ್ನ ದೇವರು ಮಾಡಿದ್ದಾರೆ. ಈಗ ಇವರದ್ದು ಪಿಕ್ಚರ್ ನೋಡಬೇಕಂತೆ, ತೋರಿಸ್ತಾರೆ ನೋಡಿ. ಯಾರಪ್ಪನದ್ದು ಎಲ್ಲಮ್ಮನ ಜಾತ್ರೆ ಅಷ್ಟೇ. ಇವರಿಗೆ ಕೇವಲ ಒಬ್ಬ ವ್ಯಕ್ತಿ ಪಾಪ್ಯುಲರ್ ಆಗಬೇಕು ಅಷ್ಟೆ. ಕೊಳ್ಳೆ ಹೊಡೆದು ಹೋಗಬೇಕು ಅಷ್ಟೇ. ಮೋದಿ ಅವರೇ ಪಿಕ್ಚರ್ ನಿಮ್ಮದೆ ಓಡಿಸಿ ಎಂದು ಕಿಡಿಕಾರಿದ್ದಾರೆ.ಅದಾನಿಗೆ ಈ ಸರ್ಕಾರ ಒಂದು ರೂಪಾಯಿಗೆ ಒಂದು ಸಾವಿರ ಎಕರೆ ಕೊಟ್ಟಿದ್ದಾರೆ. ಇವರಿಗೆ ಮಾನ ಮರ್ಯಾದೆ, ಸ್ವಾಭಿಮಾನ ಇದೆಯಾ? ಯಾರು ಈ ಅದಾನಿ? ಇವರಿಗೆ ಕೇಳೋರು ಇಲ್ಲ. ಹೇಳೋರು ಇಲ್ಲ. ಮೋದಿ ಸಾಹೇಬ್ರೆ ಮಜಾ ಮಾಡಿ. ನಿಮ್ದೆ ಪಿಕ್ಚರ್ ಹೊಡೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







