ಚಿತ್ರದುರ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಮ್ಮ ದೇಶದ ಪ್ರಧಾನ ಮಂತ್ರಿಯಾದ ಮೇಲೆ ದೇಶದ ಗೌರವ ಹೆಚ್ಚಾಗಿದೆ,
ಮುಖ್ಯಮಂತ್ರಿಗಳಾಗಿ, ಪ್ರಧಾನ ಮಂತ್ರಿಗಳಾಗಿ ಉತ್ತಮವಾದ ಸೇವೆಯನ್ನು ಮಾಡಿದ್ದಾರೆ, ದೇಶದ ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೂ ಮೋದಿಯವರನ್ನು ಕೊಂಡಾಡುತ್ತಿದ್ದಾರೆ ಎಂದು ಸಂಸದರಾದ ಗೋವಿಂದ ಕಾರಜೋಳ ತಿಳಿಸಿದರು.ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದ ಒನಕೆ ಓಬವ್ವ ವೃತ್ತದಲ್ಲಿ ಏರ್ಪಡಿಸಿದ್ದ ಸೇವಾ ಪಾಕ್ಷಿಕ ಅಭಿಯಾನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಆಧಾರಿತ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ದಾಮೋದರದಾಸ್ ಮೋದಿ ಒಬ್ಬ ಭಾರತೀಯ ರಾಜಕಾರಣಿ, ಅವರು 2014 ರಿಂದ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೋದಿ 2001ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದರು ಮತ್ತು ವಾರಣಾಸಿಯ ಸಂಸತ್ ಸದಸ್ಯರಾಗಿದ್ದಾರೆ . ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಬಲಪಂಥೀಯ ಹಿಂದುತ್ವ ಅರೆಸೈನಿಕ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದಾರೆ . ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹೊರಗೆ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ
ಸಲ್ಲಿಸಿದವರು ಎಂದರು. ಮೋದಿ ಬಾಂಬೆ ರಾಜ್ಯದ (ಇಂದಿನ ಗುಜರಾತ್) ವಡ್ನಗರದಲ್ಲಿ ಹುಟ್ಟಿ ಬೆಳೆದರು, ಅಲ್ಲಿ ಅವರು ತಮ್ಮ ಮಾಧ್ಯಮಿಕ ಶಿಕ್ಷಣವನ್ನು
ಪೂರ್ಣಗೊಳಿಸಿದರು. ಅವರನ್ನು ಎಂಟನೇ ವಯಸ್ಸಿನಲ್ಲಿ ಆರ್ಎಸ್ಎಸ್ಗೆ ಪರಿಚಯಿಸಲಾಯಿತು, 1971 ರಲ್ಲಿ ಗುಜರಾತ್ನಲ್ಲಿ ಸಂಘಟನೆಯ ಪೂರ್ಣಾವಧಿ ಕಾರ್ಯಕರ್ತರಾದರು. ಆರ್ಎಸ್ಎಸ್ ಅವರನ್ನು 1985 ರಲ್ಲಿ ಬಿಜೆಪಿಗೆ ನಿಯೋಜಿಸಿತು, ಮತ್ತು ಅವರು ಪಕ್ಷದ ಶ್ರೇಣಿಯ ಮೂಲಕ ಏರಿದರು, 1998 ರಲ್ಲಿ ಪ್ರಧಾನ ಕಾರ್ಯದರ್ಶಿಯಾದರು. 2001 ರಲ್ಲಿ, ಮೋದಿ ಅವರನ್ನು ಗುಜರಾತ್ನ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು ಮತ್ತು ಶೀಘ್ರದಲ್ಲೇ ಶಾಸಕಾಂಗ ಸಭೆಗೆ ಆಯ್ಕೆಯಾದರು. ಮುಖ್ಯಮಂತ್ರಿಯಾಗಿ ಅವರ ನೀತಿಗಳು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದ ಕೀರ್ತಿಗೆ ಪಾತ್ರವಾದರೂ 2014 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ , ಮೋದಿ ಬಿಜೆಪಿಯನ್ನು ಸಂಸತ್ತಿನ ಬಹುಮತಕ್ಕೆ ಕರೆದೊಯ್ದರು, 1984ರ ನಂತರ ಒಂದು ಪಕ್ಷಕ್ಕೆ ಇದು ಮೊದಲ ಬಾರಿ . ಅವರ ಆಡಳಿತವು ನೇರ ವಿದೇಶಿ ಹೂಡಿಕೆಯನ್ನು ಹೆಚ್ಚಿಸಿತು ಮತ್ತು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಿತು ಎಂದು ತಿಳಿಸಿದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರ ಪಕ್ಷ ಗೆದ್ದಿತು . ಅದರ ಎರಡನೇ ಅವಧಿಯಲ್ಲಿ, ಅವರ ಆಡಳಿತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪರಿಚಯಿಸಿತು, ಇದು
ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು ಮೋದಿಯವರ ಸೆ. 22 ರಿಂದ ಜಿ.ಎಸ್.ಟಿ.ಯಲ್ಲಿ ಕಡಿತವನ್ನು ಮಾಡುವುದರ ಮೂಲಕ ಜನರ ಮೇಲಿನ ಹೊರೆಯನ್ನು ಕಡಿತ ಮಾಡಿದೆ ಇದರಿಂದ ದೇಶದ ಜನತೆಯ ದುಬಾರಿ ಜೀವನದ ಪ್ರಮಾಣವನ್ನು ಕಡಿಮೆ ಮಾಡಿದೆ, ಜಿ.ಎಸ್.ಟಿ ಕಡಿತದಿಂದ ಜನತೆಗೆ ಸಹಾಯವಾಗಿದೆ, ಇಂದು ಪೌರ ಕಾರ್ಮಿಕರ ದಿನಾಚರಣೆ ಅವರು ಮಾಡಿದ ಕೆಲಸದಿಂದಾಗಿ ಇಂದು ನಾವುಗಳು ಓಡಾಡುವಂತೆ ಆಗುತ್ತಿದೆ, ಅವರು ಇಲ್ಲದಿದ್ದರೆ ನಾವುಗಳು ಚನ್ನಾಗಿ ಬದುಕಲು ಆಗುತ್ತಿರಲಿಲ್ಲ, ಅವರಿಗೆ ನಾವೆಲ್ಲರೂ ಅಭಿನಂದನೆಯನ್ನು ಸಲ್ಲಿಸಬೇಕಿದೆ, ಅವರನ್ನು ಗೌರಯುತವಾಗಿ ಕಾಣಬೇಕಿದೆ, ಇಂದಿಗೂ ಸಹಾ ಪೌರ ಕಾರ್ಮಿಕರು ಗುತ್ತಿಗೆ ಅಧಾರದ ಮೇಲೆ ಕೆಲಸವನ್ನು ಮಾಡುತ್ತಿದ್ದಾರೆ. ಬೊಮ್ಮಾಯಿ ಮುಖ್ಯ ಮಂತ್ರಿಗಳಾಗಿದ್ದಾಗ ಸುಮಾರು 20 ಸಾವಿರ ಪೌರ ಕಾರ್ಮಿಕರನ್ನು ಖಾಯಂ ಮಾಡಿದರರು ಇದೇ ರೀತಿ ಇಂದಿನ ಸರ್ಕಾರವೂ ಸಹ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರೆಗೂ
ಖಾಯಂ ಮಾಡಬೇಕಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು. ಈ ಪ್ರದರ್ಶನದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್,ಮಾಜಿ ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ, ಎಸ್ಕೆ.ಬಸವರಾಜನ್ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ಕುಮಾರ ಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಹನುಮಂತೆ ಗೌಡ, ಜಿಲ್ಲಾ ಪ್ರಧಾನ
ಕಾರ್ಯದರ್ಶಿ ಸಂಪತ್ ಕುಮಾರ್, ರಾಮದಾಸ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಕೆ.ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಮಲ್ಲೇಶ್, ಜಿ.ಪಂ.ಮಾಜಿ ಅಧ್ಯಕ್ಷ ಲಕ್ಷ್ಮಣ್, ರಾಮರೆಡ್ಡಿ, ಎಂವೈಟಿಸ್ವಾಮಿ, ಮೋಹನ್, ಪಂಡು, ಕವನ,ರಚನಾ, ಭಾರತಿ ವೀಣಾ, ಮಂಜುಳಮ್ಮ, ಕಂಚನ, ದಿಶಾ ಸಮಿತಿ ಸದಸ್ಯರಾದ ಗೋವಿಂದಪ್ಪ, ಭರತ್, ನಗರಸಭಾ ಸದಸ್ಯರಾದ ಹರೀಶ್, ಮಾಜಿ ಸದಸ್ಯರಾದ ಗರಡಿ ಪ್ರಕಾಶ್, ಪ್ರಶಾಂತ್,ಶ್ರೀಧರ್, ಲಿಂಗರಾಜು, ಪ್ರಶಾಂತ್ ಪಾಪೇಶ್ ನಾಯ್ಕ್, ಸಚೀನ್, ಕಿರಣ್, ವಸಂತ್, ಮಲ್ಲಿಕಾರ್ಜನ್, ವಿರೂಪಾಕ್ಷ ಯಾದವ್ ಮಲ್ಲೇಶ್ ಯಾದವ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಮೋರ್ಚಾ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







