Close Menu
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
What's Hot

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡೋದು ಸರಿಯಲ್ಲ – ಆರ್‌.ಅಶೋಕ್

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಧಿಡೀರ್ ಅಮೇರಿಕಗೆ ಹೊರಟಿದ್ದೇಕೆ ಗೊತ್ತೆ..? ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಧಿಡೀರ್ ಅಮೇರಿಕಗೆ ಹೊರಟಿದ್ದೇಕೆ ಗೊತ್ತೆ..?

ನಗರಸಭೆ ನೂತನ ಉಪಾಧ್ಯಕ್ಷೆಯಾಗಿ ಶಕೀಲಾ ಬಾನು ಆಯ್ಕೆ

Facebook X (Twitter) Instagram
  • ಪ್ರಮುಖ ಸುದ್ದಿ
  • ನಮ್ಮ ಚಿತ್ರದುರ್ಗ
  • ಬಯಲುಸೀಮೆ ನೋಟ
Facebook X (Twitter) Instagram
Bayaluseeme Times | ಬಯಲುಸೀಮೆ ಟೈಮ್ಸ್
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
Subscribe
Bayaluseeme Times | ಬಯಲುಸೀಮೆ ಟೈಮ್ಸ್
Home»ದಿನದ ವಿಶೇಷ»ಶತಾಯುಷಿ ಅಜ್ಜಿ ಬರ್ತಡೇ ಆಚರಿಸಿ ಸಂಭ್ರಮಿಸಿದ ಕುಟುಂಬ
ದಿನದ ವಿಶೇಷ

ಶತಾಯುಷಿ ಅಜ್ಜಿ ಬರ್ತಡೇ ಆಚರಿಸಿ ಸಂಭ್ರಮಿಸಿದ ಕುಟುಂಬ

Times of bayaluseemeBy Times of bayaluseemeJune 24, 2025No Comments1 Min Read
Share WhatsApp Facebook Twitter Telegram Copy Link
Follow Us
Google News Flipboard
Share
Facebook Twitter LinkedIn Pinterest Email Copy Link

ಚಿತ್ರದುರ್ಗ: ಮನುಷ್ಯರಿಗೆ ದೀರ್ಘಾಯಸ್ಸು ಎನ್ನುವುದು ಈಗಿನ ಕಾಲಘಟ್ಟದಲ್ಲಿ ಒಂದು ವರವಿದ್ದಂತೆ,ನೂರು ವರ್ಷ ಬದುಕಿ ಬಾಳಿ ಎಂದು ಹಾರೈಸುವ ಈ ಹಾರೈಕೆಯೂ ಕೂಡ ಮನುಷ್ಯರನ್ನು ನೂರು ವರ್ಷಗಳ ಕಾಲ ಬದುಕಿಸಬಲ್ಲದು ಎನ್ನುವ ನಂಬಿಕೆ ನಮ್ಮ ಹಿರಿಯರದ್ದು.
ವಯಸ್ಸಲ್ಲದ ವಯಸ್ಸಿಗೆ ಹಠಾತ್ ಸಾವು ಮತ್ತು ವಿವಿಧ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಾ ಸಾವಿಗೀಡಾಗುವವರ ಸಂಖ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ,ಆದರೆ ಇಲ್ಲೊಬ್ಬ ಅಜ್ಜಿ ನೂರರ ಗಡಿ ದಾಟಿ ತನ್ನ ಮಕ್ಕಳು ಮತ್ತು ನೂರಾರು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳೊಂದಿಗೆ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾಳೆ.

ಭಾರತದಲ್ಲಿ ಮನುಷ್ಯನ ಸರಾಸರಿ ಆಯಸ್ಸು ಇಳಿಕೆಯಾಗುತ್ತಿದೆ, ಇಂದಿನ ಆಧುನಿಕ ಯುಗದಲ್ಲಿ ನೂರು ವರ್ಷಗಳ ಗಡಿದಾಟಿರುವ ವೃದ್ಧರು ಕಾಣಸಿಗುವುದೇ ಅಪರೂಪ.ಅದರಲ್ಲಿಯೂ ತಂದೆ ತಾಯಿಗಳ ಆಸ್ತಿಯನ್ನು ಕಬಳಿಸಿ 60 ವರ್ಷ ದಾಟಿದ ವಯೋವೃದ್ಧರನ್ನು ಮನೆಯಿಂದ ಹಾಕಿ ವೃದ್ಧಾಶ್ರಮಗಳಿಗೆ ಸೇರಿಸುವ ಎದೆ ಭಾರವಾಗುವಂತಹ ಸುದ್ದಿಗಳು ಕೇಳಿದ್ದೇ ಹೆಚ್ಚು,ಆದರೆ ಇದಕ್ಕೆ ವಿಭಿನ್ನ ಎನ್ನುವಂತೆ ಮಕ್ಕಳು, ಮೊಮ್ಮಕ್ಕಳು,ಮರಿ ಮೊಮ್ಮಕ್ಕಳಿಗೆ ಒಂದು ಕುಟುಂಬದ ವೃಕ್ಷದಂತೆ ಇರುವ ಶತಾಯುಷಿ ಅಜ್ಜಿಗೆ ಕೂಡು ಕುಟುಂಬವೆಲ್ಲ ಸೇರಿ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದೆ. ಸಾಮಾನ್ಯವಾಗಿ ಮದುವೆ, ನಿಶ್ಚಿತಾರ್ಥ ಸೇರಿದಂತೆ ಇನ್ನಿತರ ಸಮಾರಂಭಗಳಿಗಾಗಿ ಕಲ್ಯಾಣ ಮಂಟಪದಲ್ಲಿ ಸಮಾರಂಭ ಮಾಡುತ್ತಾರೆ, ಆದರೆ ಇಂದು ಮಾತ್ರ ವಿಶೇಷವಾಗಿ ಚಿತ್ರದುರ್ಗದ ಕೆಇಬಿ ಕಲ್ಯಾಣ ಮಂಟಪದಲ್ಲಿ ಕಂಡುಬಂದಿದ್ದು ಶತಾಯುಷಿ ಅಜ್ಜಿ ಹುಟ್ಟುಹಬ್ಬದ ಆಚರಣೆ.ಕುಟುಂಬದ ಎಲ್ಲ ಸದಸ್ಯರು ಸೇರಿ ಕಲ್ಯಾಣ ಮಂಟಪದಲ್ಲಿ ಸಂಭ್ರಮದಿಂದ ಅಜ್ಜಿಯ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಿಹಿ ಹಂಚಿ ಅಜ್ಜಿಯ 100 ವರ್ಷಗಳ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಚಿತ್ರದುರ್ಗ ನಗರದ ದೊಡ್ಡಪೇಟೆಯ ಗೌಡ್ರು ವಂಶದ ಶತಾಯುಷಿ ಗೌರಮ್ಮ ಅಜ್ಜಿಗೆ ಮೂರು ಜನ ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳಿದ್ದು ಇವರ ಜೊತೆಯಲ್ಲಿ ಮಕ್ಕಳು,ಮೊಮ್ಮಕ್ಕಳು,ಮರಿ ಮೊಮ್ಮಕ್ಕಳ ಸಂಖ್ಯೆ ನೂರರ ಗಡಿ ದಾಟಿದೆ. ಹಾಗಾಗಿ ಎಲ್ಲರೂ ಒಟ್ಟುಗೂಡಿ ಹುಟ್ಟುಹಬ್ಬ ಆಚರಣೆ ಮಾಡಿ ಹಾರೈಸಿದ್ದಾರೆ.
ಅಜ್ಜಿಯು ಇಂದಿಗೂ ಸರಳ ವ್ಯಾಯಾಮಗಳನ್ನು ಮಾಡುತ್ತಾ ಯಾವ ರೋಗ ರೋಜನೆಗಳಿಲ್ಲದೇ ಕ್ರಮಬದ್ಧವಾದ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಆರೋಗ್ಯವಂತ ಜೀವನ ನಡೆಸುತ್ತಾ ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿ‌ನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

bayaluseeme times ads (2)
ajji birthday chitradurga family
Follow on Google News Follow on Instagram
Share. Facebook Twitter Telegram WhatsApp
Previous Articleಸರ್ಕಾರದ ವಿರುದ್ಧ ಹಿರಿಯ ಶಾಸಕ ಅಸಮಾಧಾನ – ಅನುದಾನ ಸಿಗದಿದ್ದಕ್ಕೆ ಆಕ್ರೋಶ
Next Article ಹಾಡಹಗಲೇ ಯುವಕನ ಬರ್ಬರ ಕೊಲೆ
Times of bayaluseeme
  • Website

Related Posts

ಬಾದಾಮಿ ತಿನ್ನುವುದರಿಂದ ಚರ್ಮ, ಕೂದಲು ಮತ್ತು ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ..? ಇಲ್ಲಿದೆ ಮಾಹಿತಿ

July 28, 2025

ಇತ್ತೀಚಿಗೆ ಹೃದಯಾಘಾತಕ್ಕೆ ಕಾರಣಗಳು ಏನು…? ಸಿನಿಮಾ ನಟ, ನಟಿಯರಿಗೆ ಯಾಕೆ ಹೆಚ್ಚು ಹೃದಯಾಘಾತ ಆಗುತ್ತವೆ ಎಂಬುದಕ್ಕೆ ಇಲ್ಲಿದೆ ಕಾರಣ

July 27, 2025

ಧೂಮಪಾನ ಚಟವಿದ್ದರೆ ಇಂದೇ ಬಿಟ್ಟುಬಿಡಿ…. ಧೂಮಪಾನದಿಂದ ಆಗುವ ಪರಿಣಾಮಗಳು ಏನು..?

July 26, 2025
Add A Comment
Leave A Reply Cancel Reply

Advertisement
Latest Posts

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡೋದು ಸರಿಯಲ್ಲ – ಆರ್‌.ಅಶೋಕ್

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಧಿಡೀರ್ ಅಮೇರಿಕಗೆ ಹೊರಟಿದ್ದೇಕೆ ಗೊತ್ತೆ..? ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಧಿಡೀರ್ ಅಮೇರಿಕಗೆ ಹೊರಟಿದ್ದೇಕೆ ಗೊತ್ತೆ..?

ನಗರಸಭೆ ನೂತನ ಉಪಾಧ್ಯಕ್ಷೆಯಾಗಿ ಶಕೀಲಾ ಬಾನು ಆಯ್ಕೆ

ರಂಭಾಪುರಿ ಶ್ರೀಗಳ ಹೇಳಿಕೆಗೆ ಸಿಡಿದೆದ್ದ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2025 Bayaluseeme Time. Designed by Bayaluseeme time
  • Privacy Policy
  • Terms
  • Accessibility

Type above and press Enter to search. Press Esc to cancel.