Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

03/06/2026 ಬುಧವಾರದ ನಿತ್ಯ ಭವಿಷ್ಯ

ಬಡ್ತಿ ಸಿಕ್ಕ ಮರುದಿನವೇ ನಿವೃತ್ತಿ..! ಚಿತ್ರದುರ್ಗದ ಅಧಿಕಾರಿಯ ಅಪರೂಪದ ಸೇವಾ ಪಯಣ

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಸಿನಿಮಾ»ಬದುಕಿನ ಜಂಜಡಗಳಿಗೆ ಸಂಗೀತದ ಸಂಜೀವಿನಿ: ಆಶಾ ಭೋಸ್ಲೆ ಎಂಬ ಸ್ವರದೇವತೆ
ಸಿನಿಮಾ

ಬದುಕಿನ ಜಂಜಡಗಳಿಗೆ ಸಂಗೀತದ ಸಂಜೀವಿನಿ: ಆಶಾ ಭೋಸ್ಲೆ ಎಂಬ ಸ್ವರದೇವತೆ

Times Of Bayaluseeme StaffBy Times Of Bayaluseeme StaffApril 13, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
Legendary singer Asha Bhosle portrait with musical wave background representing the philosophy of music.
Share
WhatsApp Twitter Facebook Telegram

ಸಂಗೀತವೆಂದರೆ ಕೇವಲ ಧ್ವನಿಯೇ ಅಥವಾ ಭಾವನೆಗಳ ಸಮ್ಮಿಲನವೇ? ಸುಮಾರು 12,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾದ ಆಶಾ ಭೋಸ್ಲೆ ಅವರ ಸ್ವರಯಾನ ಮತ್ತು ಬದುಕಿನ ಸಾರ್ಥಕತೆಯ ಬಗ್ಗೆ ವಿವೇಕಾನಂದ ಎಚ್. ಕೆ. ಅವರ ವಿಶೇಷ ಲೇಖನ ಇಲ್ಲಿದೆ.

ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ……

ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ – ಶಿಸ್ತುಬದ್ಧತೆಯ ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ?
ಅಥವಾ,
ಆ ಶಬ್ದಗಳ ಸುಶ್ರಾವ್ಯತೆ ಮಾತ್ರ ಸಂಗೀತವೇ ?
ಅಥವಾ,
ಧ್ವನಿ ಮತ್ತು ವಾದ್ಯಗಳ ಸಮ್ಮಿಲನದ ಭಾಷೆಗೆ ಸಂಗೀತ ಎನ್ನಬಹುದೇ……
ಅಥವಾ,
ಸಾಹಿತ್ಯ ಧ್ವನಿ ವಾದ್ಯಗಳ ಮಿಲನದ ಪ್ರಕ್ರಿಯೆಯೇ ಸಂಗೀತವೇ……
ಅಥವಾ,
ಧ್ವನಿಯ ಸ್ವರ, ಲಯ ತಾಳಗಳ ರೂಪವೇ ಸಂಗೀತ ಸೃಷ್ಟಿಸುತ್ತದೆಯೇ…..

ಭಾವನೆಗಳು ಅಕ್ಷರ ರೂಪದ ಸಾಹಿತ್ಯವಾಗಿ ಮೂಡಿದ ಮೇಲೆ ಆ ಅಕ್ಷರಗಳು ಮತ್ತೆ ಭಾವನೆಗಳಾಗಿ ಹಾಡಿನ ಮೂಲಕ ಪರಿವರ್ತನೆ ಹೊಂದಿ ಕೆಲವೊಮ್ಮೆ ಮತ್ತೆ ಅಕ್ಷರಗಳಾಗಿ ಮತ್ತೆ ಭಾವನೆಗಳಾಗುವ ಸರಪಳಿಯ ಕೊಂಡಿಯೊಂದು ಕಳಚಿದೆ……

ಸುಮಾರು ಮುಕ್ಕಾಲು ಶತಮಾನದ ಮನರಂಜನಾ ಮಾಧ್ಯಮದ ಲೋಕದಲ್ಲಿ ಮಿನುಗಿ ಜನಪ್ರಿಯರಾಗಿದ್ದ , ಎಷ್ಟೋ ಜನರ ಪಾಲಿನ ನೋವು ನಲಿವುಗಳ, ನೀರವ ರಾತ್ರಿಗಳ, ಬೆಳದಿಂಗಳ ಕಲರವದ, ಪ್ರೀತಿ ಪ್ರೇಮ ಪ್ರಣಯ ವಿರಹಗಳಲ್ಲಿ , ಕೆಲವೊಮ್ಮೆ ಭಕ್ತಿ ವೈರಾಗ್ಯಗಳೊಂದಿಗೆ ಸದಾ ಜೊತೆಯಾಗಿದ್ದ ಧ್ವನಿಯೊಂದು ಹಾಡುವುದನ್ನು ನಿಲ್ಲಿಸಿದೆ….

ಕೆಲವು ಅಪರೂಪದ ಸ್ವಾಭಾವಿಕ ಪ್ರತಿಭೆಗಳು ಎಲ್ಲಾ ಕ್ಷೇತ್ರಗಳಲ್ಲೂ ಉದಯಿಸಿವೆ. ಹೆಚ್ಚು ಶ್ರಮವಿಲ್ಲದೆ, ( ಅವರ ಪ್ರತಿಭೆಯ ಕಾರಣದಿಂದಾಗಿ ) ಆದರೆ ಶ್ರದ್ಧೆ ಮತ್ತು ಸಮರ್ಪಣಾ ಮನೋಭಾವದಿಂದ ತುಂಬಾ ಸರಳವಾಗಿ ಆ ಪ್ರತಿಭೆಯನ್ನು ದುಡಿಸಿಕೊಂಡಿದ್ದಾರೆ.

ಹಾಡುಗಳ ನಿಜವಾದ ಅರ್ಥ ಏನೇ ಇರಲಿ ಮನುಷ್ಯ ಜೀವಿಯ ಬದುಕಿನಲ್ಲಿ ಅತಿಹೆಚ್ಚು ಆಕರ್ಷಕ ಧ್ವನಿ ಎಂದರೆ ಅದು ಸಾಮಾನ್ಯವಾಗಿ ಹಾಡುಗಳು ಎಂದು ಕರೆಯಲ್ಪಡುವ ಧ್ವನಿ ತರಂಗಗಳು…….

ಬಹುಶಃ ಹುಟ್ಟಿದ ಮಗುವಿನಿಂದ ವೃದ್ದರವರೆಗೆ ಒಂದಲ್ಲ ಒಂದು ರೀತಿಯ ಹಾಡುಗಳ ಮೋಹ ಅವರ ಮನಸ್ಸುಗಳ ಮೇಲೆ ಪ್ರಭಾವ ಬೀರುವುದನ್ನು ಕಾಣಬಹುದು……

ಕೇವಲ ಭಾರತ ದೇಶ ಮಾತ್ರವಲ್ಲ, ಇಡೀ ಸೃಷ್ಟಿಯ ಮನುಷ್ಯ ಪ್ರಾಣಿಯ ಎಲ್ಲರಿಗೂ ಇದು ಅನ್ವಯಿಸುತ್ತದೆ. ಭಾಷೆಗಳನ್ನು ಮೀರಿ ಅನೇಕ ವೈವಿಧ್ಯಮಯ ಪ್ರಕಾರಗಳಲ್ಲಿ ಇದು ಅಸ್ತಿತ್ವದಲ್ಲಿದೆ…..

ಜಾನಪದವೇ ಇರಲಿ, ಶಾಸ್ತ್ರೀಯವೇ ಆಗಿರಲಿ, ಪಾಶ್ಚಿಮಾತ್ಯವೇ ಇರಲಿ, ಮಧ್ಯಪ್ರಾಚ್ಯದ ಅಥವಾ ಆಫ್ರಿಕಾದ ಸಂಗೀತವೇ ಇರಲಿ ಒಟ್ಟಿನಲ್ಲಿ ಹಾಡುಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ಎಲ್ಲಾ ಕಾಲಮಾನಗಳನ್ನು ಮೀರಿ ಬೆಳೆದಿದೆ……

ಆಧುನಿಕತೆ ಮತ್ತು ತಂತ್ರಜ್ಞಾನ ಬೆಳೆದಂತೆ ಮುಖ್ಯವಾಗಿ ಸಿನಿಮಾ ರಂಗದ ಅಭಿವೃದ್ಧಿಯೊಂದಿಗೆ ಈ ಕ್ಷಣದಲ್ಲಿ ಹಾಡುಗಳು ಉತ್ತುಂಗಕ್ಕೇರಿದೆ……

ಸಂಕೀರ್ಣ ಬದುಕಿನ ಜಂಜಡಗಳಿಂದ ನರಳುತ್ತಿರುವ ಮನುಷ್ಯ ಮನರಂಜನೆ ಅಥವಾ ಮನಸ್ಸುಗಳ ಪುನಶ್ಚೇತನಕ್ಕಾಗಿ ಸಂಗೀತದ ಮೊರೆ ಹೋಗುವುದು ಸಾಮಾನ್ಯವಾಗಿ ನಾವು‌ ಗಮನಿಸಿದ್ದೇವೆ ಮತ್ತು ಅನುಭವಿಸಿದ್ದೇವೆ…….

ಸಪ್ತ ಸ್ವರಗಳ ಸಹಾಯದಿಂದ ನವರಸಗಳನ್ನು ಹೊಮ್ಮಿಸುವ ಸಂಗೀತ ನಮ್ಮ ಭಾವನೆಗಳೊಂದಿಗೆ ಅಲೆಅಲೆಯಾಗಿ ತೇಲುತ್ತಾ ಸಾಗುವ ಪರಿ ಅನನ್ಯ….

ಅಂತಹ ಸಂಗೀತ – ಹಾಡುಗಳ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಆಶಾ ಬೋಸ್ಲೆ ಸುಮಾರು 12000 ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದವರು. ಅವರಿಗೆ ‌ಭಾವಪೂರ್ಣ ಶ್ರದ್ಧಾಂಜಲಿ……

ಎಷ್ಟೋ ಪ್ರೇಮಿಗಳಿಗೆ, ಎಷೋ ವಿರಹಿಗಳಿಗೆ, ಎಷ್ಟೋ ನೋವುಂಡವರಿಗೆ, ಎಷ್ಟೋ ಕನಸುಗಾರರಿಗೆ, ಎಷ್ಟೋ ನಿರಾಶಾವಾದಿಗಳಿಗೆ, ಎಷ್ಟೋ ಹೃದಯಹೀನರಿಗೆ ತಮ್ಮ ಒಂದು ಹಾಡಿನ ಮೂಲಕ ಆ ಕ್ಷಣ ಒಂದು ಪ್ರತಿಕ್ರಿಯೆಯಾದ ಆಶಾ ಅವರ ಧ್ವನಿ ಹಾಡುವುದನ್ನು ನಿಲ್ಲಿಸಿದೆ.

ಬದುಕಿನ ಪಯಣದಲ್ಲಿ ಅನೇಕರಿಗೆ ಲಲಿತ ಕಲೆಗಳು ಸ್ಪೂರ್ತಿ ಪ್ರೇರಣೆ ಪ್ರಭಾವವನ್ನು ಹೊಂದುವ ಬಗೆಯನ್ನು ನೆನೆಯುತ್ತಾ…….

ಸಾವಿನ ನೆರಳಲ್ಲಿ ಬದುಕು….

ಒಬ್ಬ ಹೇಳಿದ ಜ್ಞಾನ ಮುಖ್ಯ,
ಇನ್ನೊಬ್ಬ ಹೇಳಿದ ಧ್ಯಾನ ಮುಖ್ಯ,
ಮತ್ತೊಬ್ಬ ಹೇಳಿದ ಭಕ್ತಿ ಮುಖ್ಯ,
ಮಗದೊಬ್ಬ ಹೇಳಿದ ಯೋಗ ಮುಖ್ಯ,

ಅಲ್ಲೊಬ್ಬ ಹೇಳಿದ ನಂಬಿಕೆ ಮುಖ್ಯ,
ಇಲ್ಲೊಬ್ಬ ಹೇಳಿದ ಕರ್ಮ ಮುಖ್ಯ,
ಹಿಂದೊಬ್ಬ ಹೇಳಿದ ತತ್ವ ಮುಖ್ಯ,
ಯಾವಾಗಲೋ ಒಬ್ಬ ಹೇಳಿದ ಸಿದ್ಧಾಂತ ಮುಖ್ಯ,

ಆಗೊಬ್ಬ ಅಂದ ಜೀವನ ಪವಿತ್ರವಾದುದು,
ಈಗೊಬ್ಬ ಅಂದ ಜೀವನ ನಶ್ವರ,
ಮತ್ತೊಬ್ಬ ಅಂದ ಜೀವನ ಅದ್ಭುತವಾದುದು,

ಮಗದೊಬ್ಬ ಅಂದ ಬದುಕು ಮಾಯೆ,
ಅಲ್ಲೊಬ್ಬ ಹೇಳಿದ ಬದುಕು ಭ್ರಮೆ,
ಇಲ್ಲೊಬ್ಬ ಅಂದ ಬದುಕು ಸುಂದರ,
ಹಿಂದೊಬ್ಬ ಹೇಳಿದ ದೇಹ ಮೂಳೆ ಮಾಂಸದ ತಡಿಕೆ,

ಆಗೊಬ್ಬ ಅಂದ ದೇಹವೇ ದೇಗುಲ,
ಯಾವಾಗಲೋ ಒಬ್ಬ ಹೇಳಿದ ಮೋಕ್ಷವೇ ಜೀವನದ ಅಂತಿಮ,

ಆದರೆ,
ಸಾಮಾನ್ಯನೊಬ್ಬ ಏನೂ ಹೇಳಲಿಲ್ಲ, ಜೀವಿಸಿದ,
ಬದುಕು ಬದುಕಷ್ಟೇ,ಉಳಿದದ್ದೂ ಬದುಕಷ್ಟೇ,
ಸಹಜವಾಗಿ ಬದುಕಿ,
ಬೇರೇನೂ ಇಲ್ಲ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

Follow on Facebook Follow on Instagram
Share. Facebook Twitter WhatsApp Telegram
Previous Articleನಿತ್ಯ ಭವಿಷ್ಯ – 13/04/2026 (ಸೋಮವಾರ)
Next Article Hassan: ಪತಿ–ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ವಿವಾಹ
Times Of Bayaluseeme Staff
  • Website

Related Posts

ಗಾನ ಕೋಗಿಲೆ ಆಶಾ ಭೋಂಸ್ಲೆ ಇನ್ನಿಲ್ಲ: 92ನೇ ವಯಸ್ಸಿನಲ್ಲಿ ಸಂಗೀತ ಸಾಮ್ರಾಜ್ಞಿ ವಿಧಿವಶ

April 12, 2026

ರಶ್ಮಿಕಾ ಮಂದಣ್ಣಗೆ ತಮ್ಮ ಮನೆ ಉಡುಗೊರೆಯಾಗಿ ನೀಡಿದ ತಂದೆ

April 7, 2026

ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ

March 30, 2026
Add A Comment
Leave A Reply Cancel Reply

Advertisement
Latest Posts

ಅರ್ಹ ಮತದಾರರು ವಂಚಿತರಾಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

03/06/2026 ಬುಧವಾರದ ನಿತ್ಯ ಭವಿಷ್ಯ

ಬಡ್ತಿ ಸಿಕ್ಕ ಮರುದಿನವೇ ನಿವೃತ್ತಿ..! ಚಿತ್ರದುರ್ಗದ ಅಧಿಕಾರಿಯ ಅಪರೂಪದ ಸೇವಾ ಪಯಣ

02/06/2026 ರ ನಿತ್ಯ ಭವಿಷ್ಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.