ನವದೆಹಲಿ: ಇಲ್ಲಿನ ಕರ್ನಾಟಕ ಭವನವು ಕದನಕಣವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ವಿಶೇಷ ಅಧಿಕಾರಿ ಸಿ. ಮೋಹನ್ ಕುಮಾರ್ ತಮ್ಮ ಮೇಲೆ ಪಾದರಕ್ಷೆಯಿಂದ ದಾಳಿ ಮಾಡಿದ್ದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಶೇಷ ಅಧಿಕಾರಿ ಎಚ್. ಆಂಜನೇಯ ಆರೋಪಿಸಿದ್ದಾರೆ.ಈ ಸಂಬಂಧ ನಿವಾಸಿ ಆಯುಕ್ತ ಇನ್ನೊಂಗ್ಲಾ ಜಮೀರ್ ಅವರಿಗೆ ಔಪಚಾರಿಕ ದೂರು ನೀಡಿರುವ ಆಂಜನೇಯ, ‘ಕುಮಾರ್ ನನಗೆ ಶೂನಿಂದ ಹೊಡೆದಿದ್ದು ನನ್ನ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿದೆ. ನನಗೆ ನ್ಯಾಯ ಕೊಡಿಸಿ’ ಎಂದು ಕುಮಾರ್ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆಗೆಒತ್ತಾಯಿಸಿದ್ದಾರೆ. ‘ಕುಮಾರ್ ನನ್ನ ಕೆಲಸ ಗಳಿಗೆ ಅಡ್ಡಿ ಉಂಟುಮಾಡುತ್ತಿದ್ದು, ಚೇಂಬರ್ನಲ್ಲಿ ಎಲ್ಲರೆದುರು ಪಾದರಕ್ಷೆ ಯಿಂದ ಹೊಡೆಯುವುದಾಗಿ ಬೆದರಿಸಿದ್ದರು. ನನಗೆ ಏನಾದರೂ ಆದರೆ ಅದಕ್ಕೆ ಕುಮಾರ್ ಹೊಣೆ’ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.ಜತೆಗೆ, ಕುಮಾರ್ ಅವರ ಹಿಂದಿನ ವರ್ತ ನೆಗಳಪಟ್ಟಿಯನ್ನೇ ನೀಡಿರುವ ಆಂಜನೇಯ, ‘ಕುಮಾರ್ ಈ ಮೊದಲು ಎಂ.ಎಂ. ಜೋಶಿ ಎಂಬುವರನ್ನು ಹೊಡೆದಿದ್ದರು. ಸಿಎಂ ಅವರ ಕರ್ತವ್ಯದಲ್ಲಿರುವ ವಿಶೇಷ ಅಧಿಕಾರಿ ಎಂದು ಅಹಂಕಾರದಿಂದ ವರ್ತಿಸಿದ್ದರು’ ಎಂದೂ ಉಲ್ಲೇಖಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



