ಪೊಲೀಸರು ಜನಪ್ರತಿನಿಧಿಗಳ ಕರೆ ಸ್ವೀಕರಿಸುವುದು ಕಡ್ಡಾಯ
ದೂರವಾಣಿ ಸಂಖ್ಯೆ ಇಟ್ಟುಕೊಳ್ಳಲೇಬೇಕು: ಡಿಜಿಪಿ ಸುತ್ತೋಲೆ
ಬೆಂಗಳೂರು
ಶಾಸಕರು ಹಾಗೂ ಸಂಸದರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಇಟ್ಟುಕೊಳ್ಳ ಬೇಕು, ಆ ಜನಪ್ರತಿನಿಧಿಗಳ ಕರೆಗಳಿಗೆ ಪ್ರತಿಕ್ರಿಯಿಸಬೇಕು ಎಂದು ಅಧಿಕಾರಿಗಳಿಗೆ ರಾ ಜ್ಯ ಪೊಲೀಸ್ ಮಹಾನಿರ್ದೇ ಶಕ ಡಾ| ಎಂ.ಎ.ಸಲೀಂ ಸೂಚಿಸಿದ್ದಾರೆ.
ಈ ಸಂಬಂಧ ಸುತ್ತೋಲೆ ಹೊರಡಿಸಿ ರುವ ಡಿಜಿಪಿ ಅವರು, ಜನಪ್ರತಿನಿಧಿಗಳ ಕರೆಗಳಿಗೆ ಸ್ಪಂದಿಸುವಂತೆ ಹೇಳಿದ್ದಾರೆ. ಜನಪ್ರತಿನಿಧಿಗಳಾದವಿಧಾನಸಭಾಮತ್ತು ವಿಧಾನಪರಿಷತ್ಸದಸ್ಯರು, ಲೋಕಸಭಾ ಹಾಗೂರಾಜ್ಯ ಸಭಾಸದಸ್ಯರದೂರವಾಣಿ ಯನ್ನುಕಡ್ಡಾಯವಾಗಿಇಟ್ಟುಕೊಳ್ಳುವಂತೆ ಹಾಗೂ ಆ ಜನಪ್ರತಿನಿಧಿಗಳು ಕರೆ
ಮಾಡಿದಾಗ ಕರೆಯನ್ನು ಸ್ವೀಕರಿಸುವಂತೆ ಹಿರಿಯ ಪೊಲೀಸ್ ಅಧಿಕಾರಿ ಗಳಿಗೆ ಕಟ್ಟಪ್ಪಣೆ ಮಾಡಿ ದ್ದಾರೆ.
ಜನಪ್ರತಿನಿಧಿಗಳು ಕರೆ ಮಾಡಿದಾಗ ಒಂದು ವೇಳೆ ಅನ್ಯ ಕರ್ತವ್ಯ ದಲ್ಲಿನಿರತರಾಗಿ ದ್ದಲ್ಲಿ ಕರ್ತವ್ಯ ಮುಗಿದ ಬಳಿಕ ಮರು ಕರೆ ಮಾಡಬೇಕು. ಈ ಮೂಲಕ ಸಮಸ್ಯೆಗಳ ಕುರಿತು ಸ್ಪಂದಿಸು ವಂತೆ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
ಇತ್ತೀಚೆಗೆ ಪೊಲೀಸ್ ಅಧಿಕಾರಿಗಳು ತಮ್ಮ ಕರೆ ಸ್ವೀಕರಿಸದೆ ಉದಾಸೀನತೆ ತೋರುತ್ತಿದ್ದಾರೆ ಎಂದು ಕೆಲ ಶಾಸಕರು ಹಾಗೂ ಸಂಸದರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವು ಡಿಜಿಪಿ
ಅವರ ಗಮನಕ್ಕೆ ಬಂದಿತ್ತು.
