Close Menu
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
What's Hot

ಮೋದಿ ಬಂದ ಮೇಲೆ ರಕ್ಷಣಾ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಆಗಿದೆ ಗೊತ್ತೇ; ಶಾಸಕ ಎಂ.ಚಂದ್ರಪ್ಪ

ಪ್ರತಿದಿನ ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು – ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಕಾಂತರಾಜ್ ವರದಿಯನ್ನು ಮೇಲ್ಜಾತಿಯವರು ಮೂಲೆಯಲ್ಲಿ ಕೂರಿಸಿದ್ದಾರೆ – ರಾಮಚಂದ್ರಪ್ಪ

Facebook X (Twitter) Instagram
  • ಪ್ರಮುಖ ಸುದ್ದಿ
  • ನಮ್ಮ ಚಿತ್ರದುರ್ಗ
  • ಬಯಲುಸೀಮೆ ನೋಟ
Facebook X (Twitter) Instagram
Bayaluseeme Times | ಬಯಲುಸೀಮೆ ಟೈಮ್ಸ್
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
Subscribe
Bayaluseeme Times | ಬಯಲುಸೀಮೆ ಟೈಮ್ಸ್
Home»ಪ್ರಮುಖ ಸುದ್ದಿ»ಸಮುದಾಯದವರಿಗೆ ಹಚ್ಚಿನ ಸೇವೆಯನ್ನು ನೀಡಲಾಗುವುದೆಂದು ಸಂಘದ ಅಧ್ಯಕ್ಷರಾದ ಷಡಾಕ್ಷರಯ್ಯ ಎಸ್.
ಪ್ರಮುಖ ಸುದ್ದಿ

ಸಮುದಾಯದವರಿಗೆ ಹಚ್ಚಿನ ಸೇವೆಯನ್ನು ನೀಡಲಾಗುವುದೆಂದು ಸಂಘದ ಅಧ್ಯಕ್ಷರಾದ ಷಡಾಕ್ಷರಯ್ಯ ಎಸ್.

Times of bayaluseemeBy Times of bayaluseemeJune 24, 2025No Comments2 Mins Read
Share WhatsApp Facebook Twitter Telegram Copy Link
Follow Us
Google News Flipboard
Share
Facebook Twitter LinkedIn Pinterest Email Copy Link

ಮುಂದಿನ ದಿನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ
ಸಹಕಾರ ಸಂಘ, ನಿಯಮಿತವನ್ನು ಜಿಲ್ಲೆಯ ವಿವಿಧ
ತಾಲ್ಲೂಕುಗಳಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಾಪನೆ ಮಾಡುವುದರ
ಮೂಲಕ ನಮ್ಮ ಸಮುದಾಯದವರಿಗೆ ಹಚ್ಚಿನ ಸೇವೆಯನ್ನು
ನೀಡಲಾಗುವುದೆಂದು ಸಂಘದ ಅಧ್ಯಕ್ಷರಾದ ಷಡಾಕ್ಷರಯ್ಯ
ಎಸ್. ತಿಳಿಸಿದರು.

ಚಿತ್ರದುರ್ಗ ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ
ಭಾನುವಾರ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ
(ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ, ನಿಯಮಿತದ ಸರ್ವ ಸದಸ್ಯರ
ಪ್ರಥಮ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ
ಸಮುದಾಯದವತಿಯಿಂದ ಸಹಕಾರ ಸಂಸ್ಥೆಯನ್ನು
ಮಾಡಬೇಕೆಂದು ಬಹು ದಿನದ ಕನಸಾಗಿತ್ತು ಅದರ ಬಗ್ಗೆ
ನಿರಂತರವಾಗಿ ಶ್ರಮವನ್ನು ಹಾಕುವುದರ ಮೂಲಕ ಇಂದಿಗೆ
ನನಸಾಗಿದೆ. ಕಳೆದ ವರ್ಷ ಇದೆ ವೇದಿಕೆಯಲ್ಲಿ ಮುಂದಿನ ವರ್ಷ
ನಾವುಗಳು ಸಹಕಾರ ಸಂಸ್ಥೆಯನ್ನು ಆರಂಭಿಸುವುದಾಗಿ ಮಾತು
ನೀಡಿತ್ತು ಅದರಂತೆ ಸಹಕಾರ ಸಂಸ್ಥೆಯನ್ನು ಎಲ್ಲರ ಸಹಕಾರದಿಂದ
ಪ್ರಾರಂಭಿಸಲಾಗಿದೆ.

ಸೊಸೈಟಿಗೆ ಆಡಳಿತ ಮಂಡಳಿಗ ಚುನಾವಣೆಯನ್ನು ನಡೆಸಿ ಹಣವನ್ನು ವ್ಯಯ ಮಾಡುವ ಬದಲು 11
ಜನರನ್ನು ಅವಿರೋಧವಾಗಿ ಆಯ್ಕೆಯನ್ನು ಮಾಡುವುದರ
ಮೂಲಕ ಚುನಾವಣಾ ವೆಚ್ಚವನ್ನು ಉಳಿಸಲಾಯಿತು ಎಂದರು.
ನಮ್ಮ ಸಹಕಾರ ಸಂಘವನ್ನು ಈಗ ಚಿತ್ರದುರ್ಗದಲ್ಲಿ ಸ್ಥಾಪನೆ
ಮಾಡಲಾಗಿದೆ ಮುಂದಿನ ದಿನದಲ್ಲಿ ಈ ಸಹಕಾರ ಸಂಘವನ್ನು ಬ್ಯಾಂಕ್
ಆಗಿ ಮಾರ್ಪಡಿಸಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ
ಸಹಾ ಶಾಖೆಗಳನ್ನು ಸ್ಥಾಪನೆ ಮಾಡಲಾಗುವುದು. ಇದ್ದಲ್ಲದೆ
ಚಿತ್ರದುರ್ಗದಲ್ಲಿ ಜಿಲ್ಲಾ ಶಾಖೆಯನ್ನು ಪ್ರಾರಂಭ
ಮಾಡಲಾಗುವುದು ಇಂದು ನಮ್ಮ ಷೇರುದಾರರಿಗೆ ಷೇರು ಪತ್ರ
ಹಾಗೂ ಗುರುತಿನ ಚೀಟಿಯನ್ನು ವಿತರಣೆ ಮಾಡುವ
ಕಾರ್ಯಕ್ರಮ ಇತ್ತು ಆದರೆ ತಾಂತ್ರಿಕ ಕಾರಣದಿಂದಾಗಿ ನಡೆದಿಲ್ಲ
ಮುಂದಿನ ದಿನದಲ್ಲಿ ಷೇರುದಾರರಿಗೆ ಷೇರಿನ ಪ್ರಮಾಣ ಪತ್ರ ಹಾಗೂ
ಗುರುತಿನ ಚೀಟಿಯನ್ನು ವಿತರಣೆ ಮಾಡಲಾಗುವುದು. ನಮ್ಮ
ಸಹಕಾರ ಸಂಘದಲ್ಲಿ ಹಣ ಇಲ್ಲ ಹಣ ಇದ್ದವರಿಂದ ಠೇವಣಿಯಾಗಿ
ಸಂಗ್ರಹ ಮಾಡಿ ಅದನ್ನು ಅಗತ್ಯ ಇರುವವರೆಗೆ ಸಾಲದ ರೂಪದಲ್ಲಿ
ನೀಡಲಾಗುವುದು ನಮ್ಮ ಸಹಕಾರ ಸಂಘದ ನಿದೇಶಕರಿಂದಲೂ

ಸಹಾ ಠೇವಣಿಯನ್ನು ಸಂಗ್ರಹ ಮಾಡಲಾಗಿದೆ. ಮುಂದಿನ
ದಿನಮಾನದಲ್ಲಿ ಬೇರೆಯವರಿಂದಲೂ ಸಹಾ ಠೇವಣಿ ಯನ್ನು
ಸಂಗ್ರಹ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ
ಷಡಾಕ್ಷರಯ್ಯ ಎಸ್. ತಿಳಿಸಿದರು.
ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ,
ನಿಯಮಿತದ ಉಪಾಧ್ಯಕ್ಷರಾದ ಜಿ.ಎಸ್,ಕಲ್ಲೇಶಯ್ಯ ಮಾತನಾಡಿ, ಈ
ಸಹಕಾರ ಸಂಘವನ್ನುನ ಪ್ರಾರಂಭ ಮಾಡಲು ನಮ್ಮ
ಸಮುದಾಯದ ಎಲ್ಲರು ಸಹಾ ಸಹಕಾರವನ್ನು ನೀಡಿದ್ದೀರಾ, ಸಹಕಾರ
ಸಂಘವನ್ನು ಪ್ರಾರಂಭ ಮಾಡಬೇಕೆಂಬುದು ಬಹು ದಿನದ
ಕನಸಾಗಿತ್ತು ಅದು ಈಗ ಈಡೇರಿದೆ. ನಮ್ಮ ಸಮುದಾಯವರಿಂದ
ಷೇರು ಹಣವನ್ನು ಸಂಗ್ರಹ ಮಾಡುವುದರ ಮೂಲಕ ಇದನ್ನು
ಸ್ಥಾಪನೆ ಮಾಡಲಾಗಿದೆ. ಅಗತ್ಯ ಇರುವವರೆಗೆ ಸಾಲ ನೀಡುವುದು ಹಣ
ಇರುವವರಿಂದ ಠೇವಣಿ ಸಂಗ್ರಹ ಮಾಡುವುದು ಸಕಾಲಕ್ಕೆ ಸರಿಯಾಗಿ
ಮರು ಪಾವತಿಯಾಗುವಂತೆ ನೋಡುವುದು ಮುಖ್ಯವಾಗಿದೆ.
ಸಂಘದ ಬೆಳವಣಿಗೆಯಲ್ಲಿ ಎಲ್ಲರ ಪಾತ್ರ ಬಹು ಮುಖ್ಯವಾಗಿದೆ
ಎಂದರು.

ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ,
ನಿಯಮಿತದ ನಿದೇಶಕರಾದ ಬಿ,ವಿಜಯಕುಮಾರ್ ಮಾತನಾಡಿ, ನಮ್ಮ
ಜಂಗಮ ಸಮಾಜದವತಿಯಿಂದ ಈಗ ಸಹಕಾರ ಸಂಘವನ್ನು ಸ್ಥಾಪನೆ
ಮಾಡಲಾಗಿದೆ ಮುಂದಿನ ವರ್ಷ ನಮ್ಮ ಜಂಗಮ ಸಮಾಜದವತಿಯಿಂದ
ಜಿಲ್ಲಾ ಜಂಗಮ ಭವನ ನಿರ್ಮಾಣಕ್ಕೆ ನಿವೇಶನವನ್ನು ಖರೀದಿ
ಮಾಡಲಾಗುವುದು ಇದರ ಪ್ರಕ್ರಿಯೇ ನಡೆಯುತ್ತಿದೆ.
ಇದ್ದಲ್ಲದೆ ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಂತಹ ಮತ್ತು
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ವಸತಿ
ಮತ್ತು ಪ್ರಸಾದ ನಿಲಯವನ್ನು ಪ್ರಾರಂಭ ಮಾಡುವ ಉದ್ದೇಶ
ಇದೆ. ಇಂದಿನ ದಿನಮಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ
ಇದರಿಂದ ಈ ಕಾರ್ಯವನ್ನು ಕೈಗ್ಗೆತ್ತಿಕೊಳ್ಳಲಾಗಿದೆ ಎಂದು
ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ
(ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ, ನಿಯಮಿತದ
ನಿದೇಶಕರುಗಳಾದ ಡಾ.ಎಂ.ಕೆ.ಪ್ರಭುದೇವ್,
ಕೆ.ಎನ್.ವಿಶ್ವನಾಥಯ್ಯ, ಬಿ.ಎಂ.ಶರಣಯ್ಯ, ಎಂ.ಶಶಿಧರ್ ಬಾಬು,
ಜಿ.ಎಂ.ವಿರೇಶ್, ಎಂ.ವಿ.ಚನ್ನಯ್ಯ, ಬಿ.ಟಿ.ಲೀಲಾವತಿ ಹಾಗೂ ಕೆ.ಪಿ.ನಂದಿನಿ
ಭಾಗವಹಿಸಿದ್ದರು.

ಬಸವಶಾಸ್ತ್ರಿ ವೇದ ಘೋಷ ವಾಚಿಸಿದರೆ. ಗಣೇಶಯ್ಯ ಪ್ರಾರ್ಥಿಸಿದರು,
ಪ್ರಭುದೇವ ಸ್ವಾಗತಿಸಿದರೆ, ನಂದಿನಿ ಸಂಘದ ವಾರ್ಷಿಕ

ವರದಿಯನ್ನು ವಾಚಿಸಿದರು, ವಿಶ್ವನಾಥಯ್ಯ 2024-25ನೇ ಸಾಲಿನ
ಆಡಳಿತ ವರದಿಯನ್ನು ವಾಚಿಸಿದರು. ಚನ್ನಯ್ಯ ಕಾರ್ಯಕ್ರಮ
ನಿರೂಪಿಸಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿ‌ನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

bayaluseeme times ads (2)
cast chitradurga shadashraiya
Follow on Google News Follow on Instagram
Share. Facebook Twitter Telegram WhatsApp
Previous Articleಯಾವ ಪಂಚಾಯತಿಯಲ್ಲಿ ಎಷ್ಟು ಅವ್ಯವಹಾರ ನಡೆದಿದೆ ಅನ್ನೋದನ್ನ ಹೇಳಿದ್ದೇನೆ – ಶಾಸಕ ಬಿ.ಆರ್ ಪಾಟೀಲ್
Next Article ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
Times of bayaluseeme
  • Website

Related Posts

ಕಾಂತರಾಜ್ ವರದಿಯನ್ನು ಮೇಲ್ಜಾತಿಯವರು ಮೂಲೆಯಲ್ಲಿ ಕೂರಿಸಿದ್ದಾರೆ – ರಾಮಚಂದ್ರಪ್ಪ

July 27, 2025

ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ – ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

July 27, 2025

ಪತ್ರಿಕೋದ್ಯಮ ಯಾರ ಪರವಾಗಿ ಕನ್ನಡಿ ಹಿಡಿಯುತ್ತಿದೆ ಎಂಬುದನ್ನು ಅರಿಯಬೇಕು – ಕೆ.ವಿ.ಪ್ರಭಾಕರ್

July 27, 2025
Add A Comment
Leave A Reply Cancel Reply

Advertisement
Latest Posts

ಮೋದಿ ಬಂದ ಮೇಲೆ ರಕ್ಷಣಾ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆ ಆಗಿದೆ ಗೊತ್ತೇ; ಶಾಸಕ ಎಂ.ಚಂದ್ರಪ್ಪ

ಪ್ರತಿದಿನ ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು – ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಕಾಂತರಾಜ್ ವರದಿಯನ್ನು ಮೇಲ್ಜಾತಿಯವರು ಮೂಲೆಯಲ್ಲಿ ಕೂರಿಸಿದ್ದಾರೆ – ರಾಮಚಂದ್ರಪ್ಪ

ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಿ – ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2025 Bayaluseeme Time. Designed by Bayaluseeme time
  • Privacy Policy
  • Terms
  • Accessibility

Type above and press Enter to search. Press Esc to cancel.