ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಸೇ ಗೆಲ್ಲೋದು: ಸುರ್ಜೇವಾಲಾ
ಅಸಮಾಧಾನ ಸರಿ ಹೋಗುತ್ತೆ: ಕಾಂಗ್ರೆಸ್ ಉಸ್ತುವಾರಿ
ಕನ್ನಡಪ್ರಭ ವಾರ್ತೆ ಬೆಂಗಳೂರು ದಾವಣಗೆರೆ, ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಲಿದೆ. ಮುಸ್ಲಿಂ ಮತಗಳ ಬಗೆಗಿನ ನಿಮ್ಮ ಅನುಮಾನಕ್ಕೆ ಫಲಿತಾಂಶದ ದಿನ ಉತ್ತರ ತಿಳಿಯಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇ ಶಿಸಿ ಮಾತ ನಾಡಿ, ಅಸಮಾಧಾನಗೊಂಡಿ ರುವ ಅಲ್ಪಸಂಖ್ಯಾತ ನಾಯಕರ ನಿಲುವು ಬದಲಾಗುವ ಸಮಯಕ್ಕೆ ಕಾಯಿರಿ. ಮತದಾರರು ಬುದ್ದಿವಂತರಿದ್ದಾರೆ. ರಾಜ್ಯ ಸರ್ಕಾರದ ಸಾಧನೆ, ಪಂಚಗ್ಯಾ ರಂಟಿ, ಅಭಿವೃದ್ಧಿ ಯೋಜನೆ ಹಾಗೂ ಕೇಂದ್ರದ ವಂಚನೆ ಬಗ್ಗೆ ಅವರಿಗೆ ಅರಿವಿದೆ. ನಿಮ್ಮ ಸಂದೇಹಕ್ಕೆ ಮತದಾರರು ಉತ್ತರ ನೀಡುತ್ತಾರೆ ಎಂದರು. 5.5 ಕೋಟಿ ಕನ್ನಡಿಗರಿಗೆ ಮೋದಿ ಸರ್ಕಾರದ ಅನ್ಯಾ ಯದ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಮೌನವಾಗಿ ದ್ದಾರೆ. ಆದರೆ, ರಾಜ್ಯದ ₹1,31,000 ಕೋಟಿ ತಲುಪಿಸಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿಯಂಥ ಗ್ಯಾರಂಟಿಗಳನ್ನು ವಿರೋಧಿಸುತ್ತಿದ್ದಾರೆ. ಕೇಂದ್ರದ ನಿರ್ಲಕ್ಷ್ಯ ಧೋರಣೆ ಪ್ರಶ್ನಿಸದೆ ರಾಜ್ಯದ ಪಂಚ ಗ್ಯಾರಂಟಿ ಪ್ರಶ್ನಿಸುವ ಬಿಜೆಪಿಯ ವರಿಗೆ ಕನ್ನಡಿಗರ ಮತ ಕೇಳುವ ನೈತಿಕತೆ ಇಲ್ಲ ಎಂದರು
