ಡಿಜಿಟಲ್ ಜನಗಣತಿ; ನ್ಯಾಯಾಧೀಶರಿಂದ ಚಾಲನೆಗೆ ಸಿದ್ಧತೆ
ಟಿಒಬಿ ನ್ಯೂಸ್ ಚಿತ್ರದುರ್ಗ
ಬರೋಬ್ಬರಿ 15 ವರ್ಷದ ನಂತರ ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಪ್ರತಿ 10 ವರ್ಷಕ್ಕೊಮ್ಮೆ ನಡೆಯಬೇಕಿದ್ದ ಜನಗಣತಿ 2011ರ ಬಳಿಕ 2026 ಏ.1 ರಿಂದ (2027 ರ ಜನಗಣತಿ) ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಗಣತಿ ಡಿಜಿಟಲ್ ಜನಗಣತಿ ಪ್ರಾರಂಭವಾಗಿದೆ.
ಈ ವಿಶೇಷ ಕಾರ್ಯದ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಸಾಕಷ್ಟು ಪ್ರಚಾರ ನಡೆಸಿದೆ. ಏ.1 ರಂದು ಬೆಳಿಗ್ಗೆ 9.15ಕ್ಕೆ
ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯ ತೋಟಗಾರಿಕೆ ಇಲಾಖೆ ಕಚೇರಿ ಪಕ್ಕದ ಜಿಲ್ಲಾ ನ್ಯಾಯಾಧೀಶರ ನಿವಾಸದ ಬಳಿ ಜನಗಣತಿ – 2027ರ ಮೊದಲ ಹಂತದ ಮನೆ ಪಟ್ಟಿ ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶರಾದ ರೋಣ ವಾಸುದೇವ್ ಚಾಲನೆ ನೀಡಲಿದ್ದಾರೆ.
ಮೊದಲ ಬಾರಿಗೆ ಜನಗಣತಿ ಡಿಜಿಟಲ್ ವಿಧಾನದಲ್ಲಿ ನಡೆಯಲಿದೆ. ಗಣತಿಕಾರರು ಕೂಡ ಮಾಹಿತಿಯನ್ನು ನೇರವಾಗಿ ತಮ್ಮ ಸ್ಮಾರ್ಟ್ ಫೋನ್ ಬಳಸಿ ನೇರವಾಗಿ ಆಪ್ ಲೋಡ್ ಮಾಡುತ್ತಾರೆ.
ಸ್ವಯಂ ಗಣತಿಗೂ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ ಎ.1ರಿಂದ ಏ.15ರವರೆಗೆ ಸ್ವಯಂ ಗಣತಿ ಹಾಗೂ ಏ.16ರಿಂದ ಮೇ 15ರವರೆಗೆ ಮನೆ ಪಟ್ಟಿ ಮಾಡುವುದು ಮತ್ತು ಮನೆ ಸೆನ್ಸಸ್ ನಡೆಯಲಿದೆ. ಈ ಹಿಂದೆ 2011ರಲ್ಲಿ ಜನಗಣತಿ ನಡೆದಿತ್ತು. 2021ರಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಗಣತಿಯನ್ನು ಮುಂದೂಡಲಾಗಿತ್ತು.
ಗಣತಿ ಮೊದಲ ಹಂತದಲ್ಲಿ ಸೆಪ್ಟೆಂಬರ್ 30ರವರೆಗೂ ವಿವಿಧ ರಾಜ್ಯಗಳಲ್ಲಿ ಸ್ವಯಂ ಗಣತಿ ಮತ್ತು ಮನೆಮನೆಗೆ ಸೆನಸ್ ಕಾರ್ಯ ನಡೆಯಲಿದೆ. ಜನರಿಂದ ಮಾಹಿತಿಯನ್ನು ಸಂಗ್ರಹಿಸುವ ಪ್ರಮುಖ ಹಂತ ಮುಂದಿನ ವರ್ಷದ ಫೆಬ್ರವರಿಯಲ್ಲಿ ಶುರುವಾಗುತ್ತದೆ.
ಇದು ದೇಶದ ಮೊದಲ ವೆಬ್ ಆಧಾರಿತ ಸ್ವಯಂ ಗಣತಿಯಾಗಿದ್ದು, ಆನ್ಲೈನ್ನಲ್ಲಿ ಜನರು ತಮ್ಮ ವಿವರಗಳನ್ನು ತಾವೇ ತುಂಬಬೇಕು. ಹದಿನಾರು ಭಾಷೆಗಳಲ್ಲಿ ಮಾಹಿತಿ ತುಂಬಲು ಜನರಿಗಿದೆ ಅವಕಾಶ
ಮೊದಲು se.census.gov.in ಗೆ ಲಾಗಿನ್ ಆಗಬೇಕು. ಆನಂತರ ‘ಎಸ್ ಇ’ ಪೋರ್ಟಲ್ ನಲ್ಲಿ ಮೊಬೈಲ್ ನಂ. ಹಾಕಬೇಕು. ಮೂಲಭೂತ ಮಾಹಿತಿ ಒದಗಿಸಿ ಗಣತಿ ನಿಗದಿಪಡಿಸಿಕೊಳ್ಳಬೇಕು.
