ದಾವಣಗೆರೆ: ಗುರು ಮಹಿಮೆ ಅಪಾರವಾದದ್ದು,ಕಲಿಯುಗದಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು
ಭಕ್ತಿ ಮಾರ್ಗವು ಸುಲಭವಾದ ದಾರಿ ಅರ್ಥಾತ್ ನಮಗೆ ಸದಾ ದಾರಿದೀಪವಾಗಿ ಸರಿದಾರಿಗೆ ಕೊಂಡೊಯ್ಯುವ ಗುರುವಿನ
ಮಾರ್ಗದರ್ಶನ ಅತ್ಯಗತ್ಯವಾಗಿದೆ. ಆದ್ದರಿಂದ ನಾವು ಸದಾಗುರು ಭಕ್ತಿಯನ್ನು ಹೊಂದಬೇಕು. ನಮಗೆ
ಗುರುಕಾರುಣ್ಯವು ಒಂದಿದ್ದರೆ ಸಾಕು ನಮ್ಮ ಜೀವನಸಾರ್ಥಕವಾಗುವುದು ಎಂದು ಕುಶಾಲನಗರದ
ಉದಯೋನ್ಮುಖ ಹಿನ್ನೆಲೆ ಗಾಯಕಿ, ರಂಗಕರ್ಮಿ, ಯೋಗಮತ್ತು ಭರತನಾಟ್ಯ ಕಲಾವಿದೆ ಸಂವೇದಿತಾ ಸುಭಾಷ್
ಅಭಿಪ್ರಾಯ ವ್ಯಕ್ತಪಡಿಸಿದರು.ಇಂದು ಬೆಳಿಗ್ಗೆ ನಗರದ ದೇವರಾಜ್ ಅರಸ್ಲೇಔಟ್ ‘ಸಿ’ ಬ್ಲಾಕ್ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ),ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂಯೋಗ ಚಿಕಿತ್ಸಾ ಕೇಂದ್ರ ದಾವಣಗೆರೆ ಇಲ್ಲಿ ಗುರುಪೂರ್ಣಿಮಾಪೂಜಾ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದಗುರುಭಜನೆ-ಭಕ್ತಿ ಸುಧೆ’ ಸಂಗೀತ ಕಾರ್ಯಕ್ರಮದಲ್ಲಿ
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನಿಸಿಕೆಯನ್ನುವ್ಯಕ್ತಪಡಿಸಿದರು.
ಗುರು ಎಂದರೆ ನಮ್ಮೊಳಗಿರುವ ಕತ್ತಲೆಯನ್ನುದೂರಗೊಳಿಸಿ ಹೊಸ ಬೆಳಕಿನೊಂದಿಗೆ ಚೈತನ್ಯವನ್ನುಕರುಣಿಸುವ ಕರುಣಾಸಾಗರ. ನಾವು ಭಕ್ತಿ, ಶ್ರದ್ಧೆ,ನಂಬಿಕೆ, ಶಿಸ್ತು ಇವೆಲ್ಲವನ್ನು ನಿತ್ಯ ಜೀವನದಲ್ಲಿಅಳವಡಿಸಿಕೊಂಡು ಗುರುತೋರಿದ ಸನ್ಮಾರ್ಗದಲ್ಲಿ ನಡೆದರೆನಮಗೆ ಖಂಡಿತವಾಗಿಯೂ ಯಶಸ್ಸು ಸಿಗುವುದು. ಇದುಗುರುಮಹಿಮೆಯ ಶಕ್ತಿ ಎಂದು ಗುರುಪೂರ್ಣಿಮಾದವಿಶೇಷತೆಯ ಬಗ್ಗೆ ತಿಳಿಸಿದರು.ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮವನ್ನು
ಶಾಸ್ತ್ರೋಕ್ತವಾಗಿ ಮಂತ್ರ ಪಠಣಗಳೊಂದಿಗೆಸಾಮೂಹಿಕವಾಗಿ ಮಾಡಲಾಯಿತು. ಹಿರಿಯ ಪುರೋಹಿತರಾದ
ಪೂಜ್ಯ ಶ್ರೀ ಗುರುನಾಥ ಭಟ್ ಇವರಮಾರ್ಗದರ್ಶನದೊಂದಿಗೆ ಗುರು ಪಾದುಕಾಪೂಜೆಯನ್ನುಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.ನಂತರ ಉದಯೋನ್ಮುಖ ಹಿನ್ನೆಲೆ ಗಾಯಕಿ ಕು|| ಸಂವೇದಿತಾ
ಸುಭಾಷ್ ಇವರಿಂದ ‘ಗುರುಭಜನೆ-ಭಕ್ತಿ ಸುಧೆ’ ಸಂಗೀತಕಾರ್ಯಕ್ರಮ ನಡೆಯಿತು. ದಾವಣಗೆರೆ ವಿ.ವಿ.
ಸ್ನಾತಕೋತ್ತರ ಯೋಗ ವಿಜ್ಞಾನ ವಿಭಾಗದ ವಿದ್ಯಾರ್ಥಿರಾಹುಲ್ ವಿ.ಕೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶ್ರೀಮತಿ ಜ್ಯೋತಿಲಕ್ಷ್ಮೀ ವಾಸುದೇವ್ ಮತ್ತು ಸಂಧ್ಯಾಮಂಗಳೂರು ಇನ್ನಿತರರು ಸಹಕರಿಸಿದಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಮಹಂತೇಶ್,ಚಂದ್ರ ಎಸ್., ಜಿಲ್ಲಾಧಿಕಾರಿ ಕಛೇರಿಯ ಉದ್ಯೋಗಿ ಸಂತೋಷ್ಹೆಚ್., ಪ್ರತಿಷ್ಠಾನದ ಯೋಗ ಸಾಧಕರು ಇನ್ನಿತರರುಭಾಗವಹಿಸಿದ್ದ ಕಾರ್ಯಕ್ರಮದ ಕೊನೆಯಲ್ಲಿಮಹಾಮಂಗಳಾರತಿ ನಂತರ ತೀರ್ಥಪ್ರಸಾದವಿನಿಯೋಗದೊಂದಿಗೆ ಗುರುಪೂರ್ಣಿಮಾ ಮಹೋತ್ಸವಸಂಪನ್ನಗೊಂಡಿತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



