ಗುವಾಹಟ: ನಾಗರಹಾವು ಮತ್ತು ಕಟ್ಟುಹಾವುಗಳು ಸತ್ತ ಬಳಿಕವೂ ಅವುಗಳು ವಿಷಪೂರಿತವಾಗಿರುತ್ತವೆ. ಅವುಗಳು ಕಚ್ಚುವ ಸಾಮರ್ಥ್ಯಹೊಂದಿರುತ್ತವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.ಈ ಬಗ್ಗೆ ಐವರು ವೈದ್ಯರು ಹಾವಿನ ಕುರಿತು ನಡೆಸಿದ ಅಧ್ಯಯನದಲ್ಲಿ ಈ ಅಂಶ ಪತ್ತೆಯಾ ಗಿದೆ. ಹಾವುಗಳು ಶೀತ ರಕ್ತ ಪ್ರಾಣಿಗಳಾಗಿರುವ ಕಾರಣ ಅವುಗಳನ್ನು ಕೊಂದಾಗ ಅಥವಾ ಅವುಗಳ ತಲೆ ಕಡಿದ ಬಳಿಕವೂ ಹಾವುಗಳ ಮೆದುಳು ಸಕ್ರಿಯವಾಗಿರುತ್ತದೆ. ಅವು ತನ್ನ ಸುತ್ತಮುತ್ತಲು ನಡೆವ ಪ್ರಕ್ರಿಯೆಗಳನ್ನು ಗಮನಿಸುತ್ತಿರುತ್ತವೆ. ಸ್ಪರ್ಶದಅನುಭವವಾದಾಗ ತಕ್ಷಣವೇ ಪ್ರತಿಕ್ರಿಯಸಿ ಕಚ್ಚುತ್ತವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಇದಕ್ಕೆ 3 ಉದಾಹರಣೆ ನೀಡಿರುವ ವರದಿ, ಅಸ್ಸಾಂನಲ್ಲಿ ಇಬ್ಬರು ನಾಗರ ಹಾವು ಸತ್ತ ಬಳಿಕ ಸ್ಪರ್ಶಿಸಿ ಕಚ್ಚಿಸಿಕೊಂಡಿದ್ದರು. ಮತ್ತೊಂದು ಘಟನೆಯಲ್ಲಿ ಕಟ್ಟು ಹಾವನ್ನು ಕೊಂದು ಹೊರ ಹಾಕುವ ವ್ಯಕ್ತಿಗೆ ಅದರ ಹಲ್ಲು ಚುಚ್ಚಿತ್ತು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.







