ವಯಸ್ಸಾದವರಲ್ಲಿ ಶ್ರವಣದೋಷವು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಆರಂಭದಲ್ಲಿ ಸೌಮ್ಯ ಗಾತ್ರದಿಂದ ಹಿಡಿದು ತೀವ್ರ – ಆಳವಾದ ಮಟ್ಟಗಳವರೆಗೆ ಶ್ರವಣದೋಷ ಸಮಸ್ಯೆ ಇರುತ್ತದೆ. ವಯಸ್ಸಾದವರು ಕಿವಿ ಕೇಳಿಸದಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಅವರ ಕುಟುಂಬದವರು ಸಹ ಅಸಡ್ಡೆ ಮಾಡುತ್ತಾರೆ. ಮನುಷ್ಯನಿಗೆ ದೃಷ್ಟಿಹೀನತೆ ಸಮಸ್ಯೆ ಬಂದರೆ ಅದನ್ನು ಹೊಂದಿರುವ ವ್ಯಕ್ತಿ ಕಡೆಗೆ ತಕ್ಷಣದ ಗಮನ ನೀಡುತ್ತಾರೆ. ಆದರೆ ವಯಸ್ಸಾದವರಲ್ಲಿ ಶ್ರವಣ ನಷ್ಟವನ್ನು ತಡವಾಗಿ ಅಥವಾ ಎಂದಿಗೂ ಪರಿಹರಿಸುವುದಿಲ್ಲ.
ವ್ಯಕ್ತಿಗೆ ಶ್ರವಣ ದೋಷ ಉಂಟಾದಾಗ ಸಾಮಾಜಿಕ ಕೌಶಲ್ಯ ಕೂಡ ಕಡಿಮೆಯಾಗುತ್ತದೆ. ಬೇರೆಯವರು ಅವರನ್ನು ಅಷ್ಟಾಗಿ ಮಾತನಾಡಿಸುವುದಿಲ್ಲ, ಹೀಗಾದಾಗ ಅವರು ಪ್ರತ್ಯೇಕವಾಗುತ್ತಾರೆ. ಶ್ರವಣದೋಷವುಳ್ಳ ಹಿರಿಯರೊಂದಿಗೆ ಸಂಭಾಷಣೆ ನಡೆಸುವಾಗ, ಸಂಭಾಷಣೆಯಲ್ಲಿ ಸ್ಪಷ್ಟತೆಯನ್ನು ಹೊಂದಲು ಸಾಧ್ಯವಾಗದಿದ್ದಾಗ ಅಥವಾ ವಿಭಿನ್ನವಾಗಿ ಉತ್ತರಿಸಲು ಸಾಧ್ಯವಾಗದಿದ್ದಾಗ ಅವರು ನಗುವುದನ್ನು ನಾವು ಅನೇಕ ಬಾರಿ ಗಮನಿಸುತ್ತೇವೆ. ದಿನನಿತ್ಯದ ಚಟುವಟಿಕೆಗಳಿಗೆ ಮಾತನಾಡುವ ಭಾಷೆ ಮತ್ತು ಸಕ್ರಿಯ ಸಂಭಾಷಣೆಗಳನ್ನು ಆಲಿಸುವ ಅಗತ್ಯವಿದೆ, ಇದು ಅವರನ್ನು ಮಾನಸಿಕವಾಗಿ ತೊಡಗಿಸಿಕೊಳ್ಳುತ್ತದೆ ಮತ್ತು ಉತ್ತಮ ಸ್ಮರಣೆಯನ್ನು ಹೊಂದಲು ಸಹಾಯ ಮಾಡುತ್ತದೆ.ಶ್ರವಣ ನಷ್ಟದ ಸ್ವರೂಪ ಮತ್ತು ಸಂಭವನೀಯ ಪರಿಹಾರಗಳನ್ನು ಅವರು ಅರ್ಥಮಾಡಿಕೊಳ್ಳಲು ನಿರಂತರ ಸೂಕ್ತವಾದ ಶ್ರವಣ ಮೌಲ್ಯಮಾಪನದ ಅಗತ್ಯವಿದೆ. ಶ್ರವಣದ ಪರಿಹಾರಗಳು ಶ್ರವಣ ಸಾಧನದಂತೆ ಸರಳದಿಂದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯವರೆಗೆ ಇರುತ್ತದೆ. ವಯಸ್ಸಾದವರಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ನ್ನು ಅವರು ಶ್ರವಣ ಸಾಧನದಿಂದ ಪ್ರಯೋಜನ ಪಡೆಯದ ಸಂದರ್ಭಗಳಲ್ಲಿ ಮಾಡಲಾಗುತ್ತದೆ.ವಯಸ್ಸಾದವರಲ್ಲಿ ಶ್ರವಣದೋಷದಿಂದಾಗಿ ಬುದ್ಧಿಮಾಂದ್ಯತೆ ಮತ್ತು ಖಿನ್ನತೆಯು ಉಲ್ಬಣಗೊಳ್ಳಬಹುದು. ಶ್ರವಣದೋಷವುಳ್ಳವರಿಗೆ ಸರಿಯಾದ ಸಮಯದಲ್ಲಿ ಸಲಹೆ ನೀಡುವುದು ಹೆಚ್ಚು ಅಗತ್ಯವಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.



