ನಾಟಕ ನಿರ್ದೇಶಕರು, ಸಹಾಯಕ ನಿರ್ದೇಶಕರ ಆಯ್ಕೆಗೆ ಅರ್ಜಿ ಆಹ್ವಾನ
ಚಿಕ್ಕಮಗಳೂರು: ಇಲ್ಲಿನ ಬಸವ ತತ್ವ ಪೀಠದ ಡಾ. ಮರುಳಸಿದ್ಧ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಮಕ್ಕಳಿಗಾಗಿ ದಾಸೋಹಂ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಮಕ್ಕಳಿಗೆ ಮುಖ್ಯವಾಗಿ ವಚನ ಗಾಯನ, ನಾಟಕ, ರಂಗಗೀತೆ, ವಚನ ಮತ್ತು ಜನಪದ ನೃತ್ಯ, ಪೇಂಟಿಂಗ್, ಕುಂಬಾರಿಕೆ, ವನ ವಿಹಾರ, ಜಲ ವಿಹಾರ, ಕತೆ, ಮುಖವಾಡ ತಯಾರಿಕೆ, ಮಕ್ಕಳ ಚಲನಚಿತ್ರ ಪ್ರದರ್ಶನ, ಓರೆಗಾಮಿ, ಗಮನ ಕೇಂದ್ರೀಕರಣ ತರಬೇತಿ ಮುಂತಾದ ಚಟುವಟಿಕೆಗಳು ನಡೆಯಲಿವೆ.
ಏಪ್ರಿಲ್ ನಲ್ಲಿ 17ದಿನ ಶಿಬಿರ ನಡೆಯಲಿದ್ದು, ಶಿಬಿರದ ಮಕ್ಕಳಿಗೆ ನಾಟಕ ನಿರ್ದೇಶನ ಮಾಡಲು ರಂಗಭೂಮಿ ಪರಿಣಿತರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕ ಕಾರ್ಯ ನಿರ್ವಹಿಸಲು ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ.
ರಂಗಭೂಮಿಯಲ್ಲಿ ತರಬೇತಿ ಹೊಂದಿದವರು ಹಾಗೂ ಮಕ್ಕಳ ರಂಗಭೂಮಿಯಲ್ಲಿ ಕೆಲಸ ಮಾಡಿರುವ ಅನುಭವ ಅಪೇಕ್ಷಣೀಯ.
ಆಯ್ಕೆಯಾದವರಿಗೆ ಗೌರವ ಸಂಭಾವನೆ, ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಆಸಕ್ತರು ಅರ್ಜಿಯಲ್ಲಿ ತಮ್ಮ ರಂಗಾನುಭವದ ವಿವರ ಬರೆದ ಅರ್ಜಿಗಳನ್ನು ಮಾರ್ಚ್ 30ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9448138183 ಕರೆ ಮಾಡಬಹುದು ಎಂದು ಆರ್.ಎಸ್. ಹಾಲಸ್ವಾಮಿ ತಿಳಿಸಿದ್ದಾರೆ.
