Close Menu
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
What's Hot

ಸಾರಿಗೆ ನೌಕರರಿಗೆ ಹೈಕೋರ್ಟ್ ತರಾಟೆ; ಮುಷ್ಕರ ಮುಂದುವರೆದರೆ ಬಂಧನದ ಎಚ್ಚರಿಕೆ

ವಾಣಿವಿಲಾಸ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ

ಮುನ್ನಾ ಬಾಯ್ MBBS ಸಿನಿಮಾ ನೋಡಿ ವೈದ್ಯನಾಗಿ ಮಾಡಿದ್ದು 50 ಅಪರೇಷನ್..!

Facebook X (Twitter) Instagram
  • ಪ್ರಮುಖ ಸುದ್ದಿ
  • ನಮ್ಮ ಚಿತ್ರದುರ್ಗ
  • ಬಯಲುಸೀಮೆ ನೋಟ
Facebook X (Twitter) Instagram
Bayaluseeme Times | ಬಯಲುಸೀಮೆ ಟೈಮ್ಸ್
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
Subscribe
Bayaluseeme Times | ಬಯಲುಸೀಮೆ ಟೈಮ್ಸ್
Home»ನಮ್ಮ ಚಿತ್ರದುರ್ಗ»ನಾಗಮೋಹನ್ ದಾಸ್ ವರದಿ ಬಗ್ಗೆ ನಮಗೆ ಸಂಶಯ ಇದೆ – ಬಸವನಾಗಿದೇವ ಸ್ವಾಮೀಜಿ
ನಮ್ಮ ಚಿತ್ರದುರ್ಗ

ನಾಗಮೋಹನ್ ದಾಸ್ ವರದಿ ಬಗ್ಗೆ ನಮಗೆ ಸಂಶಯ ಇದೆ – ಬಸವನಾಗಿದೇವ ಸ್ವಾಮೀಜಿ

Times of bayaluseemeBy Times of bayaluseemeAugust 5, 2025No Comments1 Min Read
Share WhatsApp Facebook Twitter Telegram Copy Link
Follow Us
Google News Flipboard
Share
Facebook Twitter LinkedIn Pinterest Email Copy Link

ಚಿತ್ರದುರ್ಗ: ಸದಾಶಿವ ಆಯೋಗದ ವರದಿಯನ್ನು ಬೇಡ ಎಂದು ಸರ್ಕಾರ ಹೇಳಿದ ಮೇಲೆ, ಸರ್ಕಾರ ನಾಗಮೋಹನ್ ದಾಸ್ ಕಮಿಟಿ ಮಾಡಿದ್ರು, ಎರಡು ಆಯೋಗಕ್ಕೆ ಸರ್ಕಾರ ಸಾರ್ವಜನಿಕರ ಹಣ ದುರ್ಬಳಕೆ ಮಾಡಿದೆ. ಇಂದಿನ ಪತ್ರಿಕೆಗಳನ್ನು ನೋಡಿದಾಗ ವರದಿಯ ಕೆಲವೊಂದು ಅಂಶಗಳು ಬಹಿರಂಗ ಆಗಿವೆ. ಈಗ ನೀಡಿರುವ ವರದಿ ಜಾರಿಯಾದಾಗ ಏನು ಆಗುತ್ತೆ ಅಂತ ನಾನು ಈಗ ಹೇಳುವುದಿಲ್ಲ ಎಂದು ಛಲವಾದಿ ಮಠದ ಸ್ವಾಮೀಜಿ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈಗ ನೀಡಿರುವ ವರದಿಯ ಬಗ್ಗೆ ಸಂಶಯ ಇದೆ. ಪರಿಶಿಷ್ಟರಿಗೆ ಇರುವ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ರೆ ಸಾಕಾಗಿತ್ತು. ಆದ್ರೆ ಅವರು ಸರಿಯಾಗಿ ಈ ವರದಿ ನೀಡಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು. ವರದಿಯ ತಪ್ಪುಗಳು ಯಾವ ಹಂತದಲ್ಲಿ ಇದ್ರೂ ನಮ್ಮ ಸಮುದಾಯ ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದರು. ನಮ್ಮ ಗುರುಪೀಠ ಯಾವ ಪಕ್ಷವನ್ನು ಪರ ವಿರೋಧ ತೆಗೆದುಕೊಳ್ಳುವುದಿಲ್ಲ. ಸಂವಿಧಾನದ ಹಿತಾಸಕ್ತಿಗೆ ಗೌರವ ನೀಡುತ್ತೇವೆ ಎಂದರು. ನ್ಯಾ. ನಾಗ ಮೋಹನ್ ದಾಸ್ ನಿವೃತ್ತ ನ್ಯಾಯಮೂರ್ತಿಗಳಿಗೆ ಎಲ್ಲ ತಿಳಿದಿರುತ್ತದೆ. ಪರಿಶಿಷ್ಟರಿಗೆ ಎಷ್ಟೇ ಶ್ರೀಮಂತರು ಆಗಿದ್ರು, ಅವರನ್ನು ಹೊರಗಡೆ ಇಡುತ್ತಾರೆ. ನಮ್ಮ ದೇಶದಲ್ಲಿ ಇನ್ನು ಅಸ್ಪೃಶ್ಯತೆ ಇದೆ. ನನಗೂ ಯಾವುದೇ ಗುಡಿಗಳಿಗೆ ಅವಕಾಶ ಏನು ಬೇಡ ಎಂದು ಹೇಳಿದರು.

ಇದೆ ವೇಳೆ ಛಲವಾದಿ ಸಮುದಾಯದ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಸಮುದಾಯಕ್ಕೆ ಸದಾಶಿವ ಆಯೋಗದಲ್ಲಿ ಶೇಕಡ 5.5 ರಷ್ಟು ಮೀಸಲಾತಿ ನೀಡಿತ್ತು, ಆದ್ರೆ ಈಗ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿದ ವರದಿಯಲ್ಲಿ ಶೇ.5ರಷ್ಟು ನೀಡಿರುವುದು ಪತ್ರಿಕೆಗಳಲ್ಲಿ ಮಾಹಿತಿ ಸೋರಿಕೆ ಆಗಿದೆ. ಕಾಂಗ್ರೆಸ್ ನಂಬಿಕೊಂಡು ಮತ ಹಾಕಿದ್ದಕ್ಕೆ ಸರ್ಕಾರ ಒಳಮೀಸಲಾತಿಯಲ್ಲಿ ಅನ್ಯಾಯ ಮಾಡುತ್ತಿದೆ. ಇದೇ ವರದಿಯನ್ನು ಜಾರಿ ಮಾಡಿದರೆ ಛಲವಾದಿ ಸಮುದಾಯದಿಂದ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. 18 ಜಿಲ್ಲೆಗಳಲ್ಲಿ ಮತ ಹಾಕಿ ಸರ್ಕಾರವನ್ನು ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ನಮ್ಮ ಸಮುದಾಯ ಮುಖ್ಯ ಪಾತ್ರ ವಹಿಸಿದೆ. ಆಗಸ್ಟ್ 7ರಂದು ಈ ವರದಿಯನ್ನು ಜಾರಿ ಮಾಡಿದ್ರೆ ರಾಜ್ಯ ಕ್ರಾಂತಿ ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿ‌ನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

bayaluseeme times ads (2)
abot Basavanagideva swamiji doubt naga mohandas report we have
Follow on Google News Follow on Instagram
Share. Facebook Twitter Telegram WhatsApp
Previous Articleಆಗಸ್ಟ್ 10ರಂದು ಕೋಟೆ ನಾಡಿನಲ್ಲಿ ಬಸವ ನಾಡಿನಲ್ಲಿ ಬುದ್ಧನ ಸ್ಮರಣೆ ಬೃಹತ್ ಕಾರ್ಯಕ್ರಮ
Next Article ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಇಂದೇ ವಾಪಸ್ ಆಗುತ್ತಾ..?
Times of bayaluseeme
  • Website

Related Posts

ವಾಣಿವಿಲಾಸ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ

August 6, 2025

ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸಿ – ಬಿ.ಟಿ ಕುಮಾರಸ್ವಾಮಿ

August 6, 2025

ಆಗಸ್ಟ್ 10ರಂದು ಡಾ. ಜಿ. ಪಿ.ರಕ್ಷಿತಾ ಭರತನಾಟ್ಯ ರಂಗಪ್ರವೇಶ

August 5, 2025
Add A Comment
Leave A Reply Cancel Reply

Advertisement
Latest Posts

ಸಾರಿಗೆ ನೌಕರರಿಗೆ ಹೈಕೋರ್ಟ್ ತರಾಟೆ; ಮುಷ್ಕರ ಮುಂದುವರೆದರೆ ಬಂಧನದ ಎಚ್ಚರಿಕೆ

ವಾಣಿವಿಲಾಸ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ

ಮುನ್ನಾ ಬಾಯ್ MBBS ಸಿನಿಮಾ ನೋಡಿ ವೈದ್ಯನಾಗಿ ಮಾಡಿದ್ದು 50 ಅಪರೇಷನ್..!

ಹೆಬ್ಬಾಳದ ಹೊಸ ಮೇಲ್ಸೇತುವೆ ಮೇಲೆ ಡಿಕೆ ಶಿವಕುಮಾರ್ ಜಾಲಿ ರೈಡ್

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2025 Bayaluseeme Time. Designed by Bayaluseeme time
  • Privacy Policy
  • Terms
  • Accessibility

Type above and press Enter to search. Press Esc to cancel.