Close Menu
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
What's Hot

ಸಾರಿಗೆ ನೌಕರರಿಗೆ ಹೈಕೋರ್ಟ್ ತರಾಟೆ; ಮುಷ್ಕರ ಮುಂದುವರೆದರೆ ಬಂಧನದ ಎಚ್ಚರಿಕೆ

ವಾಣಿವಿಲಾಸ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ

ಮುನ್ನಾ ಬಾಯ್ MBBS ಸಿನಿಮಾ ನೋಡಿ ವೈದ್ಯನಾಗಿ ಮಾಡಿದ್ದು 50 ಅಪರೇಷನ್..!

Facebook X (Twitter) Instagram
  • ಪ್ರಮುಖ ಸುದ್ದಿ
  • ನಮ್ಮ ಚಿತ್ರದುರ್ಗ
  • ಬಯಲುಸೀಮೆ ನೋಟ
Facebook X (Twitter) Instagram
Bayaluseeme Times | ಬಯಲುಸೀಮೆ ಟೈಮ್ಸ್
  • ಪ್ರಮುಖ ಸುದ್ದಿ
    • ಅಡಿಕೆ ರೇಟ್‌
    • ಮಾರುಕಟ್ಟೆ ಧಾರಣೆ
  • ಅಪರಾಧ ಸುದ್ದಿ
  • ದಿನದ ವಿಶೇಷ
  • ನಮ್ಮ ಚಿತ್ರದುರ್ಗ
    • ಬಯಲುಸೀಮೆ ನೋಟ
Subscribe
Bayaluseeme Times | ಬಯಲುಸೀಮೆ ಟೈಮ್ಸ್
Home»ದಿನದ ವಿಶೇಷ»ರಾತ್ರಿಯಲ್ಲಿ ಕಾಲು ಸೆಳೆತ ಉಂಟಾಗುವುದೇಕೆ..?
ದಿನದ ವಿಶೇಷ

ರಾತ್ರಿಯಲ್ಲಿ ಕಾಲು ಸೆಳೆತ ಉಂಟಾಗುವುದೇಕೆ..?

Times of bayaluseemeBy Times of bayaluseemeAugust 4, 2025No Comments2 Mins Read
Share WhatsApp Facebook Twitter Telegram Copy Link
Follow Us
Google News Flipboard
Share
Facebook Twitter LinkedIn Pinterest Email Copy Link

ರಾತ್ರಿ ಮಲಗಿದಾಗ ಹಲವರಿಗೆ ಕಾಲಿನ ನೋವು, ಸ್ನಾಯುಗಳು ಬಿಗಿಯಾಗಿ ಒಂದು ರೀತಿಯ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದರಿಂದ ಇಡೀ ರಾತ್ರಿಯ ನೆಮ್ಮದಿಯ ನಿದ್ರೆ ಕಳೆದುಕೊಳ್ಳಬೇಕಾಗುತ್ತದೆ. ಕಾಲು ಹಾಗೂ ತೊಡೆಯ ಸ್ನಾಯುಗಳಲ್ಲಿ ಹೆಚ್ಚಾಗಿ ಈ ನೋವು ಕಾಣಿಸಿಕೊಳ್ಳುತ್ತದೆ. 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.40% ರಷ್ಟು ಜನರಲ್ಲಿ ಈ ರೀತಿಯ ಕಾಲು ನೋವು ರಾತ್ರಿ ಸಮಯದಲ್ಲಿ ಕಂಡುಬರುತ್ತವೆ.ಈ ರೀತಿಯ ಕಾಲು ನೋವು ಯಾಕೆ ರಾತ್ರಿಯ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ? ಇದು ಯಾವುದಾದರೂ ಆರೋಗ್ಯ ಸಮಸ್ಯೆಯ ಲಕ್ಷಣವೇ ಅಥವಾ ಕೇವಲ ಸ್ನಾಯುಗಳು ಸೋತಾಗ ಉಂಟಾಗುವ ನೋವೇ..? ಇಲ್ಲಿದೆ ಮಾಹಿತಿ

ಸ್ನಾಯು ಸೆಳೆತಕ್ಕೆ ಕಾರಣವೇನು?

ಅಧಿಕ ವಾಕಿಂಗ್ ಅಥವಾ ಓಟದಿಂದ ಕಾಲಿನ ಕೆಳ ಸ್ನಾಯುಗಳ ಮೇಲೆ ಒತ್ತಡ ಬೀಳುವುದರಿಂದ ಈ ರೀತಿಯ ನೋವು ಕಾಣಿಸಿಕೊಳ್ಳಬಹುದು.ಸಾಮಾನ್ಯವಾಗಿ ವಾರದಲ್ಲಿ ಕನಿಷ್ಠ ಮೂರು ಬಾರಿ ಈ ರೀತಿ ಸೆಳೆತದ ನೋವು ಉಂಟಾಗುತ್ತದೆ. ಕೆಲವರಲ್ಲಿ ನಿತ್ಯ ಕಾಲು ಸೆಳೆತ ಉಂಟಾಗುವುದು ಕೂಡ ಸಾಧ್ಯ. ಸ್ನಾಯುಗಳಿಗೆ ಕೊಂಚ ವ್ಯಾಯಾಮ ನೀಡಿದಾಗ, ಸ್ಟ್ರೆಂಚಿಂಗ್‌ ನಿಂದ ನೋವು ಕಡಿಮೆಯಾಗಬಹುದು. ಆದರೆ ಈ ರೀತಿ ಕಾಡುವ ಕಾಲಿನ ಸೆಳೆತ ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಯ ಕಾರಣವೂ ಆಗಿರುತ್ತದೆ.

ಯಾವಾಗ ವೈದ್ಯರನ್ನ ಕಾಣಬೇಕು? 

ರಾತ್ರಿಯಲ್ಲಿ ಕಾಡುವ ಕಾಲು ಸೆಳೆತ ಸಾಮಾನ್ಯವಾಗಿ ಗಂಭೀರ ಸಮಸ್ಯೆಯಾಗಿರುವುದಿಲ್ಲ. ಆದರೆ ಕೆಲವು ಆರೋಗ್ಯ ಸಮಸ್ಯೆಯ ಲಕ್ಷಣಗಳ ಜೊತೆ ಗೋಚರಿಸುತ್ತವೆ. ಮೊಟಾರ್ ನ್ಯೂರೊನ್‌ ಹಾಗೂ ಕೆಲವು ವಿಧದ ಪೆರಿಫೆರಲ್ ನ್ಯೂರೊಪತಿ ಸಮಸ್ಯೆ ಇದ್ದಾಗಲೂ ರಾತ್ರಿ ಸಮಯದಲ್ಲಿ ಕಾಲಿನ ಸಮಸ್ಯೆ ಉಂಟಾಗುತ್ತದೆ. ಆದರೆ ಇದು ಪ್ರಾಥಮಿಕ ರೋಗ ಲಕ್ಷಣವಾಗಿರುವುದಿಲ್ಲ. ಪೆರಿಫೆರಲ್‌ ನ್ಯೂರೊಪಥಿಯಲ್ಲಿ ಕಾಲುಗಳು ಅಶಕ್ತಗೊಳ್ಳುತ್ತವೆ ಅಥವಾ ಸಂವೇದನೆ ಕಳೆದುಕೊೆಳ್ಳುತ್ತವೆ. ಇದರಿಂದ ನಡೆದಾಡುವಾಗ ಸಮತೋಲನ ತಪ್ಪುವ ಸಮಸ್ಯೆ ಉಂಟಾಗುತ್ತದೆ. ಮೊಟಾರ್ ನ್ಯೂರಾನ್ ರೋಗದಲ್ಲಿ ಕಾಲುಗಳು ಸಣ್ಣದಾಗುವ ಹಾಗೂ ಸ್ನಾಯುಗಳಲ್ಲಿ ಸೆಳೆತ ಕಂಡುಬರುತ್ತದೆ. ಪಿಎಲ್ಎಮ್‌ಎಸ್ ನಂತಹ ನಿದ್ರಾಹೀನತೆ ಸಮಸ್ಯೆಯಲ್ಲೂ ಕಾಲು ನೋವು ಕಾಣಿಸಿಕೊಳ್ಲುತ್ತದೆ. ಹೀಗಾಗಿ ರೋಗಿಯ ಸಂಪೂರ್ಣ ಆರೋಗ್ಯ ಮಾಹಿತಿ ಹಾಗೂ ಪರೀಕ್ಷೆಯ ಬಳಿಕ ಸಮಸ್ಯೆಯನ್ನು ಖಚಿತವಾಗಿ ಪತ್ತೆಹಚ್ಚಬಹುದು.

ಯಾವೆಲ್ಲ ರೀತಿಯ ವೈದ್ಯಕೀಯ ಪರೀಕ್ಷೆ ಅಗತ್ಯ*

ರೋಗಿಯ ನಿದ್ರೆಯ ವಿಧಾನವನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಜೊತೆಗೆ ಕ್ಯಾಲ್ಶಿಯಮ್‌, ಮ್ಯಾಗ್ನೇಶಿಯಮ್‌ ಪ್ರಮಾಣವನ್ನು ಮತ್ತು ಥೈರಾಯ್ಡ್‌ ಹಾರ್ಮೋನ್‌ನ್ನು ಕೂಡ ಪರೀಕ್ಷಿಸಲಾಗುತ್ತದೆ.

ಚಿಕಿತ್ಸೆ ಹೇಗೆ…?

ಆರಂಭಿಕ ಹಂತದಲ್ಲಿ ಕೆಲವು ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುವಂತೆ ಸೂಚಿಸಲಾಗುತ್ತದೆ. ಜೊತೆಗೆ ಆಲ್ಕೋಹಾಲ್ ಮತ್ತು ಕೆಫೆನ್‌ ಸೇವನೆಯನ್ನು ನಿಲ್ಲಿಸುವಂತೆ ಸಲಹೆ ನೀಡಲಾಗುತ್ತದೆ. ವಿಟಮಿನ್‌ ಇ, ಗಬಾಪೆನ್‌ಟಿನ್ , ಕಾರ್ಬಾಮಜೆಪೈನ್ ಡ್ರಗ್‌ಗಳಿಗೆ ಸ್ಪಂದಿಸದ ರೋಗಿಗಳಿಗೆ ಲಿಯೊಫೆನ್‌ ಬಳಕೆ ಮಾಡಲಾಗುತ್ತದೆ. ಚಿಕಿತ್ಸೆಯು ರೋಗಿಯ ನರವೈಜ್ಞಾನಿಕ ಸಮಸ್ಯೆಯನ್ನು ಆಧರಿಸಿರುತ್ತದೆ. ಆದರೆ ಈ ರೀತಿ ಕಾಲು ಸೆಳೆತ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯು ಕಳಪೆ ಗುಣಮಟ್ಟದ ನಿದ್ರೆಯನ್ನು ಹೊಂದಿರುತ್ತಾನೆ. ಹೀಗಾಗಿ ಪದೇ ಪದೇ ಈ ರೀತಿ ರಾತ್ರಿ ಸಮಯದಲ್ಲಿ ಕಾಲು ನೋಉ ಕಾಡುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಪರೀಕ್ಷೆಗೆ ಒಳಪಡುವುದು ಮುಖ್ಯ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ಹೌದು, ನಿಮ್ಮ ಊರಿನಲ್ಲಿ ಜಾತ್ರೆ, ಸಭೆ, ಸಮಾರಂಭಗಳು ನಡೆದರೆ ಅದನ್ನು ಬಯಲುಸೀಮೆಟೈಮ್ಸ್.ಕಾಂ ಮೂಲಕ ನಾಡಿಗೆ ತಿಳಿಸಿ. ಅಷ್ಟೇ ಅಲ್ಲ ನಿಮ್ಮೂರಿ‌ನ ರಸ್ತೆ, ಚರಂಡಿ, ಆಸ್ಪತ್ರೆ , ಶಾಲೆ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳ ಕಣ್ಣು ತೆರೆಯುವಂತೆ ಸುದ್ದಿ ಮಾಡಿ. ನೀವು ಜಸ್ಟ್ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಸುದ್ದಿ ಕಳುಹಿಸಿ ಉಳಿದದ್ದನ್ನು ಬಯಲುಸೀಮೆಟೈಮ್ಸ್.ಕಾಂ ಮಾಡಲಿದೆ. ನಮ್ಮ ವಾಟ್ಸ್ ಆಪ್ ಸಂಖ್ಯೆ: +91 96201 39796

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

bayaluseeme times ads (2)
have leg night On pain why
Follow on Google News Follow on Instagram
Share. Facebook Twitter Telegram WhatsApp
Previous Articleಜೈಲಿನಲ್ಲಿ ಪ್ರಜ್ವಲ್ ರೇವಣ್ಣಗೆ ಸಮವಸ್ತ ಹಾಗೂ ಖೈದಿ ಸಂಖ್ಯೆ ನೀಡಿದ ಜೈಲಾಧಿಕಾರಿಗಳು
Next Article ವಿಷಕಾರಿ ಹಣ್ಣು ಸೇವನೆ; 8 ಮಕ್ಕಳು ತೀವ್ರ ಅಸ್ವಸ್ಥ
Times of bayaluseeme
  • Website

Related Posts

ಸಾರಿಗೆ ನೌಕರರಿಗೆ ಹೈಕೋರ್ಟ್ ತರಾಟೆ; ಮುಷ್ಕರ ಮುಂದುವರೆದರೆ ಬಂಧನದ ಎಚ್ಚರಿಕೆ

August 6, 2025

ಹೆಬ್ಬಾಳದ ಹೊಸ ಮೇಲ್ಸೇತುವೆ ಮೇಲೆ ಡಿಕೆ ಶಿವಕುಮಾರ್ ಜಾಲಿ ರೈಡ್

August 6, 2025

ರೂಟ್ ಕೆನಾಲ್ ಚಿಕಿತ್ಸೆ ಹಲ್ಲಿನ ಸದೃಢತೆ ಸುಲಭ ವಿಧಾನ

August 6, 2025
Add A Comment
Leave A Reply Cancel Reply

Advertisement
Latest Posts

ಸಾರಿಗೆ ನೌಕರರಿಗೆ ಹೈಕೋರ್ಟ್ ತರಾಟೆ; ಮುಷ್ಕರ ಮುಂದುವರೆದರೆ ಬಂಧನದ ಎಚ್ಚರಿಕೆ

ವಾಣಿವಿಲಾಸ ಸಾಗರ ಜಲಾಶಯದ ಇಂದಿನ ನೀರಿನ ಮಟ್ಟ

ಮುನ್ನಾ ಬಾಯ್ MBBS ಸಿನಿಮಾ ನೋಡಿ ವೈದ್ಯನಾಗಿ ಮಾಡಿದ್ದು 50 ಅಪರೇಷನ್..!

ಹೆಬ್ಬಾಳದ ಹೊಸ ಮೇಲ್ಸೇತುವೆ ಮೇಲೆ ಡಿಕೆ ಶಿವಕುಮಾರ್ ಜಾಲಿ ರೈಡ್

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2025 Bayaluseeme Time. Designed by Bayaluseeme time
  • Privacy Policy
  • Terms
  • Accessibility

Type above and press Enter to search. Press Esc to cancel.