ಎದೆನೋವು: ಸಚಿವ ತಂಗಡಗಿಗೆ ಸೆಂಟ್
ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಾಗ ತುಮಕೂರು ಬಳಿ ಎದೆನೋವು ಕಾಣಿಸಿ ಕೊಂಡಿದ್ದರಿಂದ ಸಿದ್ದಗಂಗಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ, ಪಡೆದಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧ ವಾರ ಸ್ಟೆಂಟ್ ಅಳವಡಿ ಸಲಾಗಿದ್ದು ಗುಣಮುಖವಾಗಿದ್ದಾರೆ.
ಪ್ರಾಥಮಿಕ ಚಿಕಿತ್ಸೆಯಲ್ಲಿ ಸಮಸ್ಯೆ ಏನು ಇಲ್ಲ ಎನ್ನಲಾಗಿತ್ತು. ಆದರೆ, ಆಪ್ತರು ಮತ್ತು ಸಂಬಂಧಿಕರು ಒತ್ತಾಯದ ಮೇರೆಗೆ ಬೆಂಗ ಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೆಕ್ ಮಾಡಿ ಸಿದಾಗ ಒಂದು ಬ್ಲಾಕೇಜ್ ಇರುವುದು ಪತ್ತೆ ಯಾಗಿತ್ತು. ಸ್ಟೆಂಟ್ ಅಳವಡಿಸ ಲಾಗಿದ್ದು ಆರೋಗ್ಯವಾಗಿದ್ದಾರೆ ಎಂದು ಅವರ ಆಪ್ತ ಮುಲಗಳಿಂದ ಮಾಹಿತಿ ದೊರೆತಿದೆ . ಗುರುವಾರದಿಂದ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗಿದೆ.
