Author: Times Of Bayaluseeme Staff

27 ಮೇ 2026 ರ ಇಂದಿನ ರಾಶಿ ಭವಿಷ್ಯ: ಬುಧವಾರದ ದಿನ ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಫಲ ಹೇಗಿದೆ? ಯಾರಿಗೆ ಶುಭ? ಯಾರಿಗೆ ಆರ್ಥಿಕ ಲಾಭ? ನಿಮ್ಮ ರಾಶಿಯ ಶುಭ ಸಂಖ್ಯೆ ಮತ್ತು ಬಣ್ಣ ಇಲ್ಲಿದೆ ಮೇಷ: ಕೆಲಸಗಳಲ್ಲಿ ವೇಗ ಹೆಚ್ಚಾಗುತ್ತದೆ. ಹಳೆಯ ಗೊಂದಲಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಆರ್ಥಿಕ ವಿಚಾರಗಳಲ್ಲಿ ಜಾಗ್ರತೆ ಅಗತ್ಯ. ಕುಟುಂಬದವರೊಂದಿಗೆ ಸಮಯ ಕಳೆಯಿರಿ. ಶುಭ ಬಣ್ಣ: ಕೆಂಪು | ಶುಭ ಸಂಖ್ಯೆ: 9 ವೃಷಭ: ಹೊಸ ಅವಕಾಶಗಳು ಎದುರಾಗಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಣ್ಣ ಪ್ರಗತಿ ಕಾಣಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಶುಭ ಬಣ್ಣ: ಬಿಳಿ | ಶುಭ ಸಂಖ್ಯೆ: 6 ಮಿಥುನ: ಸಂವಹನ ಕೌಶಲ್ಯದಿಂದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತೀರಿ. ಹೊಸ ಪರಿಚಯಗಳು ಲಾಭಕರವಾಗಬಹುದು. ಖರ್ಚಿನಲ್ಲಿ ನಿಯಂತ್ರಣ ಇರಲಿ. ಶುಭ ಬಣ್ಣ: ಹಸಿರು | ಶುಭ ಸಂಖ್ಯೆ: 5 ಕಟಕ: ಮನಸ್ಸಿನಲ್ಲಿ ಚಂಚಲತೆ ಇರಬಹುದು. ಕುಟುಂಬದ ವಿಷಯಗಳಲ್ಲಿ ಸಹನೆ ತಾಳುವುದು…

Read More

ಇಂದಿನ ರಾಶಿ ಭವಿಷ್ಯ (26-05-2026): ಮೇ 26ರ ಮಂಗಳವಾರದಂದು ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಫಲ ಹೇಗಿದೆ? ಇಂದಿನ ಶುಭ ಬಣ್ಣ ಮತ್ತು ಶುಭ ಸಂಖ್ಯೆಯ ಮಾಹಿತಿ ಇಲ್ಲಿದೆ. ಮೇಷ:ಹೊಸ ಕೆಲಸಗಳಿಗೆ ಚಾಲನೆ ನೀಡಲು ಅನುಕೂಲಕರ ದಿನ. ಕುಟುಂಬದಲ್ಲಿ ಸಣ್ಣ ವಿಚಾರಗಳಿಗೆ ಸಹನೆ ಅಗತ್ಯ. ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ವೃಷಭ: ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ಹಳೆಯ ಸ್ನೇಹಿತರ ಸಂಪರ್ಕ ಸಂತಸ ತರಬಹುದು. ಮಿಥುನ: ಮನಸ್ಸಿನಲ್ಲಿ ಗೊಂದಲ ಹೆಚ್ಚಾಗಬಹುದು. ತುರ್ತು ನಿರ್ಧಾರಗಳನ್ನು ತಪ್ಪಿಸಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಉತ್ತಮ ಅವಕಾಶಗಳು ದೊರೆಯಬಹುದು. ಕಟಕ: ಕುಟುಂಬದ ಬೆಂಬಲದಿಂದ ಕೆಲಸಗಳು ಸುಗಮವಾಗಲಿವೆ. ಆಸ್ತಿ ಅಥವಾ ಹಣಕಾಸು ಸಂಬಂಧಿತ ವಿಚಾರಗಳಲ್ಲಿ ಲಾಭದ ಸೂಚನೆ ಇದೆ. ಸಿಂಹ: ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಅನಾವಶ್ಯಕ ವಾದಗಳಿಂದ ದೂರವಿರಿ. ಕನ್ಯಾ: ಕೆಲಸದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸಣ್ಣ ತೊಂದರೆ ಕಾಣಬಹುದು.…

Read More

ಬಳ್ಳಾರಿ:  ನಗರದ ಜೆಸ್ಕಾಂ ಉಪವಿಭಾಗ-2ರ ವ್ಯಾಪ್ತಿಗೆ ಬರುವ ಎಫ್-13 ವಿದ್ಯುತ್ ಲೈನ್‌ಗಳಲ್ಲಿ ಅಗತ್ಯ ದುರಸ್ತಿ ಹಾಗೂ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದಾಗಿ ಮೇ 26ರ ಮಂಗಳವಾರ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ (ಒಟ್ಟು 7 ಗಂಟೆಗಳು) ನಗರದ ಹಲವು ಪ್ರಮುಖ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ. ಸಾರ್ವಜನಿಕರು ಹಾಗೂ ಗ್ರಾಹಕರು ಮುನ್ನೆಚ್ಚರಿಕೆಯಾಗಿ ಸಹಕರಿಸಬೇಕು ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 📍 ವಿದ್ಯುತ್ ವ್ಯತ್ಯಯವಾಗಲಿರುವ ಪ್ರಮುಖ ಪ್ರದೇಶಗಳು: ದೇವಿನಗರ ಹಾಗೂ ಸಿರುಗುಪ್ಪ ರಸ್ತೆ ಇಂದಿರಾ ನಗರ ಮತ್ತು ಸಂಜಯ ಗಾಂಧಿ ನಗರ ಶಿವಲಿಂಗ ನಗರ ಹಾಗೂ ಶಾಸ್ತ್ರಿ ನಗರ ಬಸವನಕುಂಟೆ ಮತ್ತು ಹವಂಬಾವಿ ಕುರಿಹಟ್ಟಿ ಹಾಗೂ ಎಸ್.ಪಿ. ಸರ್ಕಲ್ ವೀರಣ್ಣಗೌಡ ನಗರ ಮತ್ತು ಭುವನಗಿರಿ ಕಾಲೋನಿ ಸಾರ್ವಜನಿಕರಿಗೆ ಸೂಚನೆ: ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸುದೀರ್ಘ 7 ಗಂಟೆಗಳ ಕಾಲ ಪವರ್ ಕಟ್ ಇರುವುದರಿಂದ, ಕುಡಿಯುವ ನೀರು ಹಾಗೂ ದೈನಂದಿನ ಗೃಹ ಬಳಕೆಯ ಅಗತ್ಯ ಕೆಲಸಗಳನ್ನು ಬೆಳಿಗ್ಗೆ 8 ಗಂಟೆಯ…

Read More

ಬಳ್ಳಾರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಬಳ್ಳಾರಿ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ಮೇ 26 ರಂದು ಬೆಳಿಗ್ಗೆ 10.30 ಗಂಟೆಗೆ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರೊ.ಸಿದ್ದು ಪಿ.ಅಲಗೂರ ಸೆಮಿನಾರ್ ಹಾಲ್‌ನಲ್ಲಿ “ಪರಿಸರ ಜಾಗೃತಿ ಹಾಗೂ ವಿಶ್ವ ಭೂ ಮತ್ತು ಜಲ ದಿನಾಚರಣೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜೇಶ್ ಎನ್. ಹೊಸಮನೆ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯನಗರ ವಿಭಾಗೀಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಲೋಕೇಶ, ಕುಲಸಚಿವ(ಮೌಲ್ಯಮಾಪನ) ಪ್ರೊ.ಎನ್.ಎಂ. ಸಾಲಿ ಹಾಗೂ ಹಣಕಾಸು ಅಧಿಕಾರಿ ಸ್ಫೂರ್ತಿ.ಕೆ.ಜಿ ಅವರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳ್ಳಾರಿಯ…

Read More

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ “ಜ್ಞಾನ ಸಾಗರ” ಆವರಣದ ಪ್ರದರ್ಶನ ಕಲೆಗಳ ನಾಟಕ ವಿಭಾಗದ ವತಿಯಿಂದ ದಿವಂಗತ ಶ್ರೀಮತಿ ರಮಣಿಕಾ ಗುಪ್ತಾ ಅವರ ನೆನಪಿನ ಕಾರ್ಯಕ್ರಮದ ಅಂಗವಾಗಿ 10 ದಿನಗಳ ಕಾಲ ರಂಗಭೂಮಿ ಕಾರ್ಯಾಗಾರ ಮತ್ತು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ತರಬೇತಿ ಶಿಬಿರ ಮತ್ತು ಕಾರ್ಯಾಗಾರವು ಜೂನ್ 1 ರಿಂದ ಜೂನ್ 10 ರವರೆಗೆ ವಿಶ್ವವಿದ್ಯಾಲಯದ ನಾಟಕ ವಿಭಾಗದಲ್ಲಿ ಜರುಗಲಿದೆ. 10 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ನಾಟಕ ರಚನೆ, ನಿರ್ದೇಶನ, ಕಿರುಚಿತ್ರಗಳ ನಿರ್ಮಾಣ, ಅಭಿನಯ ಹಾಗೂ ರಂಗಭೂಮಿಗೆ ಸಂಬAಧಿಸಿದ ವಿವಿಧ ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ಕಾರ್ಯಾಗಾರದ ಪ್ರತಿದಿನ ಬೆಳಿಗ್ಗೆ 10 ರಿಂದ 11.30 ರವರೆಗಿನ ಮೊದಲ ಅವಧಿಯಲ್ಲಿ ಪ್ರಮುಖ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ತರಬೇತಿ ನೀಡಲಿದ್ದಾರೆ. ಜೂನ್ 1 ರಂದು ಉದ್ಘಾಟನಾ ಸಮಾರಂಭ, ನಾಟಕ/ಕಿರುಚಿತ್ರ ಹಾಗೂ ನಾಟಕ ತರಬೇತಿ (ಸಂಪನ್ಮೂಲ ವ್ಯಕ್ತಿ: ಎನ್. ಮಹೇಶ್), ಜೂನ್ 2 ರಂದು ಮೊಬೈಲ್ ಚಿತ್ರಗಳನ್ನು…

Read More

ಬಳ್ಳಾರಿ: ನಗರದಲ್ಲಿ ಹಾದುಹೋಗಿರುವ ರಾಷ್ಟಿçÃಯ ಹೆದ್ದಾರಿ 150-ಎ ರಸ್ತೆಯ ತುಂಗಭದ್ರ ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆ (ಸಂ-14, ಕಿ.ಮೀ 4.40) ಮೇಲಿನ ಸೇತುವೆಯ ಮರು ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಮುಂದಿನ 60 ದಿನಗಳ ಕಾಲ ಈ ಮಾರ್ಗದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಿ, ಪರ್ಯಾಯ ಮಾರ್ಗವನ್ನು ಕಲ್ಪಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆದ ನಾಗೇಂದ್ರ ಪ್ರಸಾದ್ ಕೆ. ಅವರು ಆದೇಶ ಹೊರಡಿಸಿದ್ದಾರೆ. ಮೋಟಾರ್ ವಾಹನ ಕಾಯ್ದೆ 1988 ರ ಅಧಿನಿಯಮ 115 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಗಳು 1989 ರ ನಿಯಮ 221 ಎ (5) ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ. ಕಾಲುವೆಗೆ ನೀರು ಹರಿಸುವ ಮುನ್ನವೇ ಈ ಸೇತುವೆ ಕಾಮಗಾರಿಯನ್ನು ಅತೀ ಜರೂರಾಗಿ ಮುಗಿಸಬೇಕಾಗಿರುವುದರಿಂದ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಮತ್ತು ಅಭಿಪ್ರಾಯವನ್ನು ಪರಿಗಣಿಸಿ ಈ ಕೆಳಗಿನಂತೆ ಸಂಚಾರ ಮಾರ್ಗ…

Read More

ಇಂದಿನ ರಾಶಿಭವಿಷ್ಯ (25/05/2026): ಮೇಷ ರಾಶಿಗೆ ಹೊಸ ಅವಕಾಶ, ಮಕರ ರಾಶಿಗೆ ಆರ್ಥಿಕ ಲಾಭದ ಸೂಚನೆ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಫಲಿತಾಂಶ ಇಲ್ಲಿದೆ. ಇಂದಿನ ಶುಭ ಬಣ್ಣ ಮತ್ತು ಸಂಖ್ಯೆಯ ವಿವರಗಳಿಗಾಗಿ ಓದಿ ♈ ಮೇಷ: ಕೆಲಸಗಳಲ್ಲಿ ಚುರುಕು ಹೆಚ್ಚಾಗುತ್ತದೆ. ಹೊಸ ಅವಕಾಶಗಳು ದೊರೆಯಬಹುದು. ಕುಟುಂಬದವರ ಜೊತೆ ಮಾತಿನಲ್ಲಿ ಎಚ್ಚರಿಕೆ ಇರಲಿ. ♉ ವೃಷಭ: ಆರ್ಥಿಕ ವಿಚಾರದಲ್ಲಿ ಶುಭ ಸುದ್ದಿ ಸಿಗುವ ಸಾಧ್ಯತೆ. ಆರೋಗ್ಯದ ಕಡೆ ಸ್ವಲ್ಪ ಗಮನ ಅಗತ್ಯ. ♊ ಮಿಥುನ: ಹೊಸ ಪರಿಚಯಗಳು ಲಾಭಕರವಾಗಬಹುದು. ಉದ್ಯೋಗದಲ್ಲಿ ಮೆಚ್ಚುಗೆ ಸಿಗುವ ದಿನ. ♋ ಕಟಕ: ಮನಸ್ಸಿನಲ್ಲಿ ಗೊಂದಲ ಹೆಚ್ಚಾಗಬಹುದು. ತಾಳ್ಮೆಯಿಂದ ನಿರ್ಧಾರ ಕೈಗೊಂಡರೆ ಒಳಿತು. ♌ ಸಿಂಹ: ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹಳೆಯ ಸ್ನೇಹಿತರ ಭೇಟಿ ಸಂತೋಷ ತರಬಹುದು. ♍ ಕನ್ಯಾ: ಕೆಲಸದ ಒತ್ತಡ ಇದ್ದರೂ ಯಶಸ್ಸು ನಿಮ್ಮದೇ. ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ♎ ತುಲಾ: ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವ ಅವಕಾಶ. ಪ್ರಯಾಣದ ಯೋಗ ಕಂಡುಬರುತ್ತದೆ.…

Read More

ಭಟ್ಕಳ (ಉತ್ತರ ಕನ್ನಡ): ತಾಲ್ಲೂಕಿನ ವೆಂಕಟಾಪುರ ನದಿಯಲ್ಲಿ ಕಪ್ಪೆಚಿಪ್ಪು (ಚಿಪ್ಪು ಮೀನು) ಸಂಗ್ರಹಿಸಲು ಇಳಿದಿದ್ದ ಒಂದೇ ಗ್ರಾಮದ ಹತ್ತು ಮಂದಿ ನೀರಿನ ಭಾರಿ ಸೆಳೆತಕ್ಕೆ ಸಿಲುಕಿ ಜಲಸಮಾಧಿಯಾಗಿರುವ ಭೀಕರ ಘಟನೆ ಸಂಭವಿಸಿದೆ. ಮೃತರೆಲ್ಲರೂ ಶಿರಾಲಿ ಗ್ರಾಮದ ಶಾರದಹೊಳೆ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ದುರಂತದಿಂದಾಗಿ ಇಡೀ ಶಾರದಹೊಳೆ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದ್ದು, ಕಣ್ಣೀರಿನ ಜಲಪಾತವೇ ಹರಿದಿದೆ. ಸ್ಥಳೀಯರಿಂದ ಮೂವರ ಸಾಹಸಮಯ ರಕ್ಷಣೆ ಲಭ್ಯವಿರುವ ಮಾಹಿತಿ ಪ್ರಕಾರ, ಗ್ರಾಮದ ಒಟ್ಟು 14 ಜನರ ತಂಡವೊಂದು ಭಾನುವಾರ ವೆಂಕಟಾಪುರ ನದಿಯಲ್ಲಿ ಕಪ್ಪೆಚಿಪ್ಪುಗಳನ್ನು ತೆಗೆಯಲು ನೀರಿಗಿಳಿದಿತ್ತು. ಈ ವೇಳೆ ನದಿಯ ತೀವ್ರ ಆಳ ಹಾಗೂ ನೀರಿನ ಭಾರಿ ಸೆಳೆತ ಉಂಟಾದ ಕಾರಣ ಜನರು ನಿಯಂತ್ರಣ ತಪ್ಪಿ ಕೊಚ್ಚಿ ಹೋಗಲಾರಂಭಿಸಿದರು. ಘಟನೆಯನ್ನು ಗಮನಿಸಿದ ತೀರದ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂವರನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರನ್ನು ತಕ್ಷಣವೇ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೀವ್ರಗೊಂಡ ಶೋಧ ಕಾರ್ಯ ನದಿ ಪಾಲಾಗಿರುವ…

Read More

SBI Recruitment 2026: ಪ್ರಮುಖ ವಿವರಗಳು ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಒಟ್ಟು ಹುದ್ದೆಗಳು: 7,150 ಹುದ್ದೆಯ ಹೆಸರು: ಅಪ್ರೆಂಟಿಸ್ (Apprentice) ವಿದ್ಯಾರ್ಹತೆ: ಯಾವುದೇ ಪದವಿ (Degree Pass) ಮಾಸಿಕ ಸ್ಟೈಫಂಡ್: ರೂ. 15,000/- ಪ್ರತಿ ತಿಂಗಳು ಕೊನೆಯ ದಿನಾಂಕ: ಜೂನ್ 8, 2026 ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುವ ದೇಶದ ಪದವೀಧರ ಅಭ್ಯರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಉದ್ಯೋಗಾವಕಾಶವನ್ನು ನೀಡಿದೆ. ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 7,150 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಬಿಡುಗಡೆಯಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಜೂನ್ 8, 2026 ರೊಳಗಾಗಿ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ. ಅರ್ಹತಾ ಮಾನದಂಡಗಳು (Eligibility Criteria) 1.…

Read More

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಭಾರತೀಯ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಸಜ್ಜಾಗಿವೆ. ಹೌದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಎಲ್ಲಾ ಮುನ್ಸೂಚನೆಗಳು ಕಾಣಿಸುತ್ತಿವೆ. 🔴 ಜಾಗತಿಕ ಬಿಕ್ಕಟ್ಟು ಮತ್ತು ಕಚ್ಚಾ ತೈಲದ ಕೊರತೆ ಜಾಗತಿಕವಾಗಿ ಪ್ರಮುಖ ತೈಲ ಸಾಗಣೆಯ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ (Strait of Hormuz) ಸದ್ಯ ಮುಚ್ಚಲ್ಪಟ್ಟಿದೆ. ಇದರಿಂದಾಗಿ ಜಗತ್ತಿನಾದ್ಯಂತ ಕಚ್ಚಾ ತೈಲ (Crude Oil) ಸರಬರಾಜಿನಲ್ಲಿ ಭಾರಿ ಅಡ್ಡಿಯಾಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿವೆ. ಭಾರತವು ತನ್ನ ಬಳಕೆಯ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಈ ಜಾಗತಿಕ ಬಿಕ್ಕಟ್ಟು ನೇರವಾಗಿ ನಮ್ಮ ದೇಶದ ಮೇಲೆಯೂ ಪರಿಣಾಮ ಬೀರಲಾರಂಭಿಸಿದೆ. 📉 ತೈಲ ಕಂಪನಿಗಳಿಗೆ ಭಾರಿ ನಷ್ಟ ಕಚ್ಚಾ ತೈಲದ ಬೆಲೆ ಹೆಚ್ಚಿದ್ದರೂ ಭಾರತದಲ್ಲಿ ಸದ್ಯ ಇಂಧನ ದರಗಳನ್ನು ಸ್ಥಿರವಾಗಿಡಲಾಗಿದೆ. ಇದರಿಂದಾಗಿ ದೇಶೀಯ ತೈಲ ಕಂಪನಿಗಳು ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ. ಪ್ರಸಿದ್ಧ ಹಣಕಾಸು ಸಂಸ್ಥೆ ಎಮ್ಕೆ…

Read More