ಬಂದ್ರು ನಿಂತ್ರು ಹೋದರು ; ಇಂದಿರಾ ಕಾಂಪ್ಲೆಕ್ಸ್ ನೆಲಸಮಕ್ಕೆ ಇಟ್ಟಿದ್ದ ಮೂರ್ತ ಈಗಲೂ ಮಿಸ್.
ಬುಧವಾರ ಬೆಳ್ಳಂಬೆಳಗ್ಗೆ ನಗರದ ಬೆಂಗಳೂರು ರಸ್ತೆಯ ಇಂದಿರಾ ಕಾಂಪ್ಲೆಕ್ಸ್, ಚಿತ್ರದುರ್ಗ, ಪಾವಗಡ ಮತ್ತು ಮಹದೇವ ರಸ್ತೆಯ ನಗರಸಭೆ ಸುಪರ್ದಿಗೆ ಒಳಪಡುವ ಸುಮಾರು 94 ಮಳಿಗೆಗಳನ್ನು ಜಿಲ್ಲೆಯ 200ಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್ ನಲ್ಲಿ ಐದಾರು ಜೆಸಿಬಿಗಳು ನೆಲಸಮ ಮಾಡಲು ಮುಂದಾದಾಗ ಹೈಡ್ರಾಮವೇ ನಡೆಯಿತು, ಬಂದ್ರು, ನಿಂತ್ರು ಹೋದ್ರು ಎಂಬತಾಯಿತು.
ನಗರದ ಮಹದೇವಿ ರಸ್ತೆಯಲ್ಲಿ ಎರಡು ಮಳಿಗೆ ನೆಲಸಮ, ಚಿತ್ರದುರ್ಗ ರಸ್ತೆಯಲ್ಲಿ ಮೂರು ಅಂಗಡಿಯ ಮುಂದಿನ ಸೆಡ್ ಗೆ ಜೆಸಿಬಿ ಘರ್ಜಿಸುತ್ತಲೇ ಜನರು ಹೌಹಾರಿದರು. ಮಳಿಗೆಗಳನ್ನು ಒಡೆಯುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೆಟ್ ಹಾಕಿ ಬಂದೋಬಸ್ತ್ ಮಾಡಿ, ಪೊಲೀಸ್ ನಿಯೋಜಿಸಿದರು. ವಿಶೇಷವೆಂದರೆ ನಗರಸಭೆ ಎಷ್ಟೇ ಸೂಚನೆ ನೀಡಿದರೂ 94 ಮಳಿಗೆ ಅಲ್ಲೊಬ್ಬರು, ಇಲ್ಲೊಬ್ಬರು ಖಾಲಿಮಾಡಿಕೊಂಡಿದ್ದು ಬಿಟ್ಟರೇ ಯಾರೊಬ್ಬರೂ ಅಂಗಡಿಗಳನ್ನು ಖಾಲಿಮಾಡದೆ ತಮ್ಮ ಎಲ್ಲಾ ವಸ್ತುಗಳನ್ನ ಅಂಗಡಿಯಲ್ಲೇ ಬಿಟ್ಟುಕೊಂಡಿದ್ದರು. ಜೆಸಿಬಿ ಸ್ಥಳಕ್ಕೆ ಬರುತ್ತಲೇ ಬಾಡಿಗೆದಾರರಲ್ಲಿ ಆತಂಕವು ಮನೆ ಮಾಡಿತು. ಕೆಲ ಅಂಗಡಿ ಮಾಲೀಕರು ನಮ್ಮ ವಸ್ತುಗಳನ್ನು ತಗೆದುಕೊಳ್ಳಲು ಬಿಡುವರೋ, ಇಲ್ಲವೋ ಎಂಬ ಗೊಂದಲವು ಸೃಷ್ಠಿಯಾಯಿತು. ಮುಂಜಾನೆ 7ರ ಸಮಯಕ್ಕೆ ಸುಮಾರು 200 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ನಗರಸಭೆ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಸೈನಿಕರಂತೆ ಪೆರೆಡ್ಮೂಲಕ ಇಂದಿರಾಕಾಂಪ್ಲೆಕ್ಸ್ ಬಳಿ ಬಂದಾಗ ಬಾಡಿಗೆದಾರರು ಕೆಲಕಾಲ ಮೌನಕ್ಜೆ ಜಾರಿದ ದೃಶ್ಯಕಂಡುಬಂತು.
ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತೆ ಡಾ.ನಾಗಮಣಿ ಹಾಗೂ ಆಧಿಕಾರಿಗಳ ತಂಡದೊಂದಿಗೆ ಬಿಜೆಪಿ ಮುಖಂಡರು, ಬಾಡಿಗೆದಾರರು ಪ್ರಶ್ನೆಗಳೊಂದಿಗೆ ಹೌಹಾರಿದರು. ನಮಗೆ ಯಾವುದೇ ಸೂಚನೆ ನೀಡಿದೆ ನೀವು ಮಳಿಗೆ ಒಡೆಯಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು ಹಲವಾರು ಬಾರಿ ನಿಮಗೆ ಮಾಹಿತಿ ನೀಡಿದರೂ ನೀವು ತರುವ ಗೊಳಿಸಿದ, ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಬಿಜೆಪಿ ಮುಖಂಡರು ಹಾಗೂ ಪೌರಾಯುಕ್ತರ ನಡುವೆ ಮಾತುಕತೆಯ ಬಳಿಕ ಐದು ದಿನಗಳ ಕಾಲ ಕಾಲಾವಕಾಶವನ್ನು ನೀಡಲಾಯಿತು. ಆ ಮಾತು ಕೇಳಿದ ಬಾಡಿಗೆದಾರರು ನಿಟ್ಟಿಸಿರು ಬಿಟ್ಟರು. ಅಷ್ಟರಲ್ಲಿ ಎಲ್ಲಾ ಬಾಡಿಗೆದಾರರು ಖಾಲಿ ಮಾಡಿ ಸಹಕರಿಸಿ ಎಂದರು ತಿಳಿಸಿದರು.
ಬಾಕ್ಸ್ ಮಾಡಿ ;-
ನಮಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿಯಾಗಿ ಬಂದು ಮಳಿಗೆಳನ್ನು ಹೊಡೆಯಲು ನಗರಸಭೆ ಮುಂದಾಗಿರುವುದು ಅಮಾನವೀಯ. ಸಾಲಮಾಡಿ ಅಂಗಡಿಗಳನ್ನು ನಡೆಸುತ್ತಿದ್ದೇವೆ, ಯಾವುದೇ ಮುನ್ಸೂಚನೆ ನೀಡಿಲ್ಲ, ಅಂಗಡಿಗಳಲ್ಲಿ ನಮ್ಮ ವಸ್ತುಗಳು ಇದ್ದರೂ ಕೂಡ ಜೆಸಿಬಿಗಳನ್ನು ತರಿಸಿ ಮಳಿಗೆ ನೆಲಸಮಕ್ಕೆ ಮುಂದಾಗಿದ್ದಾರೆ. ನಮಗೆ ಪರ್ಯಾಯವಾಗಿ ವ್ಯವಸ್ಥೆಯೂ ಮಾಡಿಲ್ಲ, ಈ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ, ಆದರೂ ನಗರಸಭೆ ಮುಂದಾಗಿರುವುದು ಎಷ್ಟು ಸರಿ. 94 ಮಳೆಯ ಕೇವಲ 36 ಮಳಿಗೆ ಮಾತ್ರ ನೋಟಿಸ್ ನೀಡಿದೆ. ಉಳಿದವರಿಗೆ ಮೌಖಿಕವಾಗಿ ಹೇಳಿದ್ದಾರೆ ಅಷ್ಟೇ.
ಮುಬೀನ್ ಭಾಷ ಬಾಡಿಗೆದಾರರು.
ನಗರಸಭೆ ಆಡಳಿತ ಈಗಾಗಲೇ ಹಲವಾರು ಬಾರಿ ನೋಟಿಸ್ ಗಳನ್ನು ನೀಡಿ ಖಾಲಿ ಮಾಡಲು ಸೂಚನೆ ನೀಡಿಯೇ 94 ಮಳಿಗೆಗಳನ್ನು ನೆಲಸಮ ಮಾಡಲು ಮುಂದಾಗಿದೆ. ಎಷ್ಟೇ ಸೂಚನೆ ನೀಡಿದರೂ ಬಾಡಿಗೆದಾರರು ನಗರಸಭೆ ಆಡಳಿತಕ್ಕೆ ಸ್ಪಂದಿಸದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಹಾಗಾಗಿ ಸೂಚನೆ ನೀಡಿಯೇ ಮಳಿಗೆಗಳನ್ನು ಒಡೆಯಲು ಮುಂದಾಗಿದೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿಲ್ಲ, ನಗರಸಭೆಯೊಂದಿಗೆ ಬಾಡಿಗೆದಾರರು ಸಹಕಾರ ನೀಡಿ.
ಡಾ.ನಾಗಮಣಿ ಪೌರಾಯುಕ್ತರು
