Close Menu
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
What's Hot

ಉಜ್ವಲ ಗ್ರಾಹಕರಿಗೆ ಬಿಗ್ ಶಾಕ್: ಇನ್ಮುಂದೆ ವರ್ಷಕ್ಕೆ ಕೇವಲ 4 ಸಿಲಿಂಡರ್‌ಗೆ ಮಾತ್ರ ಸಬ್ಸಿಡಿ!

ಬದುಕಿನ ನಿಜವಾದ ಶ್ರೀಮಂತಿಕೆ ಯಾವುದು? ಬಿ.ಆರ್.ಮಲ್ಲೇಶ್ ಅವರ ಚಿಂತನಶೀಲ ಲೇಖನ

ದಿನವೂ ‘ಅಧೋಮುಖ ಶ್ವಾನಾಸನ’ ಮಾಡುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

Facebook X (Twitter) Instagram
  • ಕ್ರೀಡೆ
  • ಕ್ರೈಂ
  • ಭವಿಷ್ಯ
  • ದೇಶ-ವಿದೇಶ
  • ವ್ಯಾಪಾರ
  • ಸಿನಿಮಾ
Facebook X (Twitter) Instagram
Times Of Bayaluseeme
  • ಮುಖಪುಟ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ರಾಜಕೀಯ
  • ರಾಜ್ಯ
  • ಸಿನಿಮಾ
Subscribe
Times Of Bayaluseeme
Home»ಮುಖಪುಟ»ಬದುಕಿನ ನಿಜವಾದ ಶ್ರೀಮಂತಿಕೆ ಯಾವುದು? ಬಿ.ಆರ್.ಮಲ್ಲೇಶ್ ಅವರ ಚಿಂತನಶೀಲ ಲೇಖನ
ಮುಖಪುಟ

ಬದುಕಿನ ನಿಜವಾದ ಶ್ರೀಮಂತಿಕೆ ಯಾವುದು? ಬಿ.ಆರ್.ಮಲ್ಲೇಶ್ ಅವರ ಚಿಂತನಶೀಲ ಲೇಖನ

Times Of Bayaluseeme StaffBy Times Of Bayaluseeme StaffJune 9, 2026No Comments3 Mins Read
Share WhatsApp Facebook Twitter Threads Telegram
Follow Us
Facebook Instagram
br-mallesh-turuvanuru-kannada-life-quotes
Share
WhatsApp Twitter Facebook Telegram

ಬದುಕು ಒಂದು ಅಪೂರ್ವ ಪಯಣ. ಇಲ್ಲಿ ಹಣ, ಅಧಿಕಾರಕ್ಕಿಂತ ಮನುಷ್ಯ ಪ್ರೀತಿ ಮತ್ತು ಕೃತಜ್ಞತೆ ಮುಖ್ಯ. ಅಹಂಕಾರ, ಕೃತಘ್ನತೆ ಮತ್ತು ಬೆನ್ನ ಹಿಂದೆ ಮಾತನಾಡುವ ಗುಣಗಳನ್ನು ಬಿಟ್ಟು, ಮನಸ್ಸನ್ನು ಬೆಳಗಿಸಿಕೊಂಡು ಬದುಕನ್ನು ಹಬ್ಬವಾಗಿಸಿಕೊಳ್ಳುವ ದಾರಿ ತೋರಿಸುವ ಬಿ.ಆರ್.ಮಲ್ಲೇಶ್ ಅವರ ವಿಶೇಷ ಲೇಖನ

ಬದುಕು ಒಂದು ಅಪೂರ್ವ ಪಯಣ. ಈ ದಾರಿಯಲ್ಲಿ ನಾವು ದಿನವೂ ಹೊಸ ಮುಖಗಳನ್ನು, ಹೊಸ ಮನಸ್ಸುಗಳನ್ನು ಕಾಣುತ್ತೇವೆ. ಕೆಲವರು ಕೈಹಿಡಿದು ನಡೆಸುತ್ತಾರೆ, ಕೆಲವರು ದಾರಿ ತೋರಿಸುತ್ತಾರೆ, ಇನ್ನು ಕೆಲವರು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾರೆ. ಆದರೆ ಈ ಪಯಣದ ನಿಜವಾದ ಸೌಂದರ್ಯ ಇರುವುದು ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರಲ್ಲಿ. ಹಣ, ಅಧಿಕಾರ, ಗೌರವ ಇವೆಲ್ಲವೂ ಇಂದು ಬಂದು ನಾಳೆ ಹೋಗುವ ಅತಿಥಿಗಳು. ಕೊನೆತನಕ ನಮ್ಮೊಂದಿಗೆ ಉಳಿಯುವುದು ನಾವು ಗಳಿಸುವ ಪ್ರೀತಿ, ವಿಶ್ವಾಸ ಮತ್ತು ಒಳ್ಳೆಯ ಹೆಸರು ಮಾತ್ರ. ಈ ಶಾಶ್ವತ ಸಂಪತ್ತನ್ನು ಕಾಪಾಡಿಕೊಳ್ಳಲು ನಮ್ಮ ಮನಸ್ಸಿನ ಕೊಳೆಯನ್ನು ಆಗಾಗ ತೊಳೆದುಕೊಳ್ಳುತ್ತಿರಬೇಕು.

ಎಲ್ಲವೂ ತನಗೇ ಬೇಕು, ತಾನು ಮಾತ್ರ ಮೇಲೆ ಬರಬೇಕು ಎಂಬ ಹಪಾಹಪಿತನ ಮನುಷ್ಯನನ್ನು ಕುರುಡನನ್ನಾಗಿ ಮಾಡುತ್ತದೆ. ಇನ್ನೊಬ್ಬರ ದೀಪ ಆರಿಸಿದರೆ ತಮ್ಮ ಮನೆ ಬೆಳಗುತ್ತದೆ ಎಂದು ಕೆಲವರು ಭ್ರಮಿಸುತ್ತಾರೆ. ಆದರೆ ನದಿಯ ನೀರನ್ನು ತಡೆದು ನಿಲ್ಲಿಸಿದರೆ ಅದು ಕೊಳಚೆಯಾಗುತ್ತದೆ, ಸಮುದ್ರ ಸೇರುವುದಿಲ್ಲ ಎಂಬ ಸತ್ಯವನ್ನು ಅವರು ಮರೆಯುತ್ತಾರೆ. ಇನ್ನೊಬ್ಬರ ಏಳಿಗೆಯನ್ನು ಸಹಿಸದೆ ಕಾಲೆಳೆಯಲು ಹೋದವರು ಕೊನೆಗೆ ತಾವೇ ನೆಲಕಚ್ಚಿದ ಕಥೆಗಳು ನಮ್ಮ ಸುತ್ತ ಸಾಕಷ್ಟಿವೆ. ಒಬ್ಬರನ್ನು ತುಳಿದು ಎತ್ತರಕ್ಕೆ ಏರಬಹುದು, ಆದರೆ ಆ ಎತ್ತರದಲ್ಲಿ ಹೆಚ್ಚು ಕಾಲ ನಿಲ್ಲಲು ಆಗುವುದಿಲ್ಲ. ನಾವೇ ನೂರಾರು ದೀಪಗಳನ್ನು ಹಚ್ಚಿದಾಗ ಕತ್ತಲು ತಾನಾಗಿಯೇ ಮರೆಯಾಗುತ್ತದೆ. ಇನ್ನೊಬ್ಬರ ಬೆಳಕಿನಲ್ಲಿ ನಮ್ಮ ಬದುಕೂ ಬೆಳಗಬಹುದು ಎಂಬ ವಿಶಾಲ ಮನೋಭಾವವೇ ನಿಜವಾದ ಶ್ರೀಮಂತಿಕೆ.

ಜೀವನದಲ್ಲಿ ಕಷ್ಟಕಾಲದಲ್ಲಿ ಕೈಹಿಡಿದವರು, ಅವಕಾಶ ಕೊಟ್ಟು ಬೆಳೆಸಿದವರು ನಮಗೆ ಸಿಕ್ಕಿರುತ್ತಾರೆ. ಆದರೆ ಎತ್ತರಕ್ಕೆ ಏರಿದ ಮೇಲೆ ಅವರನ್ನೇ ಮರೆತು, ಅವರ ವಿರುದ್ಧವೇ ನಿಲ್ಲುವ ಕೃತಘ್ನತೆ ಇಂದು ಹೆಚ್ಚಾಗಿದೆ. ಮರ ತನ್ನ ಬೇರನ್ನೇ ಕಡಿದುಕೊಂಡರೆ ಅದು ಎಷ್ಟು ದಿನ ಹಸಿರಾಗಿರಲು ಸಾಧ್ಯ? ಮಾಡಿದ ಉಪಕಾರವನ್ನು ಸಮುದ್ರದಷ್ಟು ದೊಡ್ಡದು ಮಾಡಿ ನೆನೆಯಬೇಕು ಎನ್ನುತ್ತಾರೆ ಹಿರಿಯರು. ಕೃತಜ್ಞತೆ ಇಲ್ಲದ ಮನಸ್ಸು ಬರಡು ಭೂಮಿ. ಇಂದು ನೀವು ದ್ರೋಹ ಬಗೆದವರೇ ನಾಳೆ ನಿಮಗೆ ನೀರಾಗಬೇಕಾದ ಪರಿಸ್ಥಿತಿ ಬಂದರೆ ಆಗ ಏನು ಮಾಡುವಿರಿ?

ಇನ್ನೊಂದು ಮಾರಕ ಸ್ವಭಾವವೆಂದರೆ ಬೆನ್ನ ಹಿಂದೆ ಮಾತನಾಡುವುದು. ಕೆಲವರಿಗೆ ಇನ್ನೊಬ್ಬರು ನೆಮ್ಮದಿಯಿಂದ ಇರುವುದು ಸಹಿಸಲು ಆಗುವುದಿಲ್ಲ. ಅವರ ಅನುಪಸ್ಥಿತಿಯಲ್ಲಿ ಅವರ ಬಗ್ಗೆ ಇಲ್ಲಸಲ್ಲದ್ದನ್ನು ಆಡಿ, ಚಾರಿತ್ರ್ಯವಧೆ ಮಾಡಿ ವಿಕೃತ ಆನಂದ ಪಡೆಯುತ್ತಾರೆ. *ಇಲ್ಲಿ ಒಂದು ಸತ್ಯವನ್ನು ಅರ್ಥಮಾಡಿಕೊಳ್ಳಬೇಕು: ಎದುರಿಗೆ ನಿಂತು ಒಬ್ಬರ ತಪ್ಪನ್ನು, ಸಾಮರ್ಥ್ಯದ ಕೊರತೆಯನ್ನು ಮುಕ್ತವಾಗಿ ಹೇಳುವುದು ಅವರನ್ನು ಆಡಿಕೊಳ್ಳುವುದರ ಪ್ರತೀಕವಲ್ಲ. ಅದು ಅವರ ಮೇಲಿನ ನಿಜವಾದ ಕಾಳಜಿ ಮತ್ತು ಪ್ರೀತಿಯ ಪ್ರತಿರೂಪ.* ಆದರೆ *ಒಬ್ಬರ ಅನುಪಸ್ಥಿತಿಯಲ್ಲಿ ಅವರ ಬಗ್ಗೆ ಹಗುರವಾಗಿ ಮಾತನಾಡುವವನು ಹೇಡಿ ಮತ್ತು ಕೈಲಾಗದವನು.* ಅವನಿಗೆ ಸತ್ಯವನ್ನು ಎದುರಿಸುವ ಎದೆಗಾರಿಕೆ ಇರುವುದಿಲ್ಲ. *ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ* ಎಂಬಂತೆ, ಅಂತಹವರ ಅಪಪ್ರಚಾರಕ್ಕೆ ಕಿವಿಗೊಡದೆ ನಾವು ನಮ್ಮ ಗುರಿಯತ್ತ ಸಾಗಬೇಕು. ನಿಂದನೆಯಲ್ಲಿ ವ್ಯಯಿಸುವ ಸಮಯವನ್ನು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಬಳಸಿದರೆ ನಾವೇ ಶಿಖರ ಏರಬಹುದು.

ಅಹಂಕಾರವು ಮನುಷ್ಯನನ್ನು ಮುಗಿಸುವ ಮತ್ತೊಂದು ವಿಷ. ಸಾಮರ್ಥ್ಯವಿಲ್ಲದಿದ್ದರೂ ‘ನಾನೇ ಸರ್ವಜ್ಞ’ ಎಂದು ಬೀಗುವವರು, ಕೆಲಸ ಮಾತ್ರ ಶೂನ್ಯವಾದರೂ ಮಾತಿನಲ್ಲಿ ಮನೆ ಕಟ್ಟುವವರು ನಮ್ಮ ನಡುವೆ ಇದ್ದಾರೆ. ಭತ್ತ ತುಂಬಿದ ತೆನೆ ಯಾವಾಗಲೂ ತಲೆಬಾಗಿರುತ್ತದೆ, ಖಾಲಿ ತೆನೆ ಕೊಬ್ಬಿ ನಿಮಿರಿ ನಿಲ್ಲುತ್ತದೆ. ನಿಜವಾದ ಜ್ಞಾನ, ಶಕ್ತಿ ಇರುವವನು ವಿನಯವಂತನಾಗಿರುತ್ತಾನೆ. ಖಾಲಿ ಕೊಡ ಎಷ್ಟೇ ಕುಣಿದಾಡಿದರೂ ಅದರಲ್ಲಿ ನೀರು ನಿಲ್ಲುವುದಿಲ್ಲ. ಜನರ ಕಣ್ಣಿಗೆ ಮಣ್ಣೆರಚಬಹುದು ಎಂದುಕೊಂಡರೆ ಅದು ಕೇವಲ ಭ್ರಮೆ. ಕಾಲವೇ ಎಲ್ಲರ ನಿಜವಾದ ಬಣ್ಣವನ್ನು ಜಗತ್ತಿಗೆ ತೋರಿಸುತ್ತದೆ.

ಹಾಗಾದರೆ ನಮ್ಮ ಬದುಕು ಅರ್ಥಪೂರ್ಣವಾಗಬೇಕಾದರೆ ನಮ್ಮ ನಡೆ ಹೇಗಿರಬೇಕು? ಇನ್ನೊಬ್ಬರ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಡುವ ಬದಲು ಮನಃಪೂರ್ವಕವಾಗಿ ಹಾರೈಸುವ ದೊಡ್ಡತನ ನಮ್ಮದಾಗಬೇಕು. ಸ್ಪರ್ಧೆ ಇರಲಿ, ಆದರೆ ಅದರಲ್ಲಿ ದ್ವೇಷದ ವಿಷ ಬೆರೆಸಬಾರದು. ಮುಂದೆ ಬರಲು ಇನ್ನೊಬ್ಬರನ್ನು ಕೆಳಗೆ ತಳ್ಳಬೇಕೆಂದಿಲ್ಲ, ನಿನ್ನೆಗಿಂತ ಇಂದು ನಾವೇ ಉತ್ತಮರಾಗಬೇಕು ಎಂಬ ಛಲವಿರಬೇಕು. ನಮಗೆ ಸಹಾಯ ಮಾಡಿದ ಪ್ರತಿಯೊಂದು ಕೈಯನ್ನು ಜೀವನಪರ್ಯಂತ ನೆನೆಯಬೇಕು. ತಪ್ಪನ್ನು ತಿದ್ದಿಕೊಳ್ಳುವ ಸೌಜನ್ಯ ಮತ್ತು ಇನ್ನೊಬ್ಬರ ತಪ್ಪನ್ನು ಎದುರಿಗೆ ನಿಂತು ಪ್ರೀತಿಯಿಂದ ತಿದ್ದುವ ಧೈರ್ಯ ನಮ್ಮದಾಗಬೇಕು. ಪ್ರತಿದಿನ ರಾತ್ರಿ ‘ಇಂದು ನನ್ನ ಮಾತಿನಿಂದ, ನಡೆಯಿಂದ ಯಾರ ಮನಸ್ಸಿಗಾದರೂ ನೋವಾಗಿದೆಯೇ’ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ರೂಢಿ ಬೆಳೆಸಿಕೊಳ್ಳಬೇಕು.

ನೆನಪಿರಲಿ, ಸ್ಥಾನಮಾನ, ಸಂಪತ್ತು, ಅಧಿಕಾರ ಯಾವುದೂ ಶಾಶ್ವತವಲ್ಲ. ಶಾಶ್ವತವಾಗಿ ಉಳಿಯುವುದು ನಾವು ಗಳಿಸುವ ಮನುಷ್ಯ ಪ್ರೀತಿ ಮತ್ತು ಸಂಬಂಧಗಳು ಮಾತ್ರ. ಇಂದು ನೀವು ಕಡೆಗಣಿಸಿದವರೇ ನಾಳೆ ನಿಮಗೆ ದಾರಿದೀಪವಾಗಬಹುದು. ಆದ್ದರಿಂದ ದ್ವೇಷದ ಮುಳ್ಳಿನ ದಾರಿ ಬಿಟ್ಟು ಪ್ರೀತಿಯ ಹೂವಿನ ಹಾದಿಯಲ್ಲಿ ನಡೆಯೋಣ. ‘ನಾನು’ ಎಂಬ ಅಹಂಕಾರದ ಸಂಕುಚಿತ ಕೋಣೆಯಿಂದ ಹೊರಬಂದು ‘ನಾವು’ ಎಂಬ ವಿಶಾಲ ಜಗತ್ತನ್ನು ಅಪ್ಪಿಕೊಳ್ಳೋಣ. ಬೇರೆಯವರ ಬದುಕಿಗೆ ತಂಪು ನೆರಳಾಗೋಣ, ಸುಡುವ ಬಿಸಿಲಾಗಬಾರದು. ಮನಸ್ಸು ಬೆಳಕಾದರೆ, ಬದುಕೇ ನಿಜವಾದ ಹಬ್ಬವಾಗುತ್ತದೆ.

*– ಬಿ.ಆರ್.ಮಲ್ಲೇಶ್*
*ಕಾರ್ಯಾಧ್ಯಕ್ಷರು*
*ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತು, ಬೆಂಗಳೂರು ವಿಭಾಗ*

B R Mallesh Turuvanuru Kannada Life Motivation Article Kannada Self Improvement Articles. ಕನ್ನಡ ಪ್ರೇರಣಾದಾಯಿ ಲೇಖನಗಳು ಕೃತಜ್ಞತೆ ಮತ್ತು ಅಹಂಕಾರ ಜೀವನ ಚಿಂತನೆ ಲೇಖನ ಬಿ ಆರ್ ಮಲ್ಲೇಶ್ ತುರುವನೂರು ಮನಸ್ಸು ಬೆಳಕಾದರೆ ಬದುಕೇ ಹಬ್ಬ ವ್ಯಕ್ತಿತ್ವ ವಿಕಸನ ಕನ್ನಡ
Follow on Facebook Follow on Instagram
Share. Facebook Twitter WhatsApp Telegram
Previous Articleದಿನವೂ ‘ಅಧೋಮುಖ ಶ್ವಾನಾಸನ’ ಮಾಡುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!
Next Article ಉಜ್ವಲ ಗ್ರಾಹಕರಿಗೆ ಬಿಗ್ ಶಾಕ್: ಇನ್ಮುಂದೆ ವರ್ಷಕ್ಕೆ ಕೇವಲ 4 ಸಿಲಿಂಡರ್‌ಗೆ ಮಾತ್ರ ಸಬ್ಸಿಡಿ!
Times Of Bayaluseeme Staff
  • Website

Related Posts

ಉಜ್ವಲ ಗ್ರಾಹಕರಿಗೆ ಬಿಗ್ ಶಾಕ್: ಇನ್ಮುಂದೆ ವರ್ಷಕ್ಕೆ ಕೇವಲ 4 ಸಿಲಿಂಡರ್‌ಗೆ ಮಾತ್ರ ಸಬ್ಸಿಡಿ!

June 9, 2026

ದಿನವೂ ‘ಅಧೋಮುಖ ಶ್ವಾನಾಸನ’ ಮಾಡುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

June 9, 2026

ಖಾಲಿ ಹೊಟ್ಟೆಯಲ್ಲಿ ಹಸಿ ಬೆಳ್ಳುಳ್ಳಿ ತಿಂದರೆ ಜ್ವರ, ಬೊಜ್ಜು ಮಾಯ! ಇಲ್ಲಿದೆ ಆಶ್ಚರ್ಯಕರ ಆರೋಗ್ಯ ರಹಸ್ಯ

June 7, 2026
Add A Comment
Leave A Reply Cancel Reply

Advertisement
Latest Posts

ಉಜ್ವಲ ಗ್ರಾಹಕರಿಗೆ ಬಿಗ್ ಶಾಕ್: ಇನ್ಮುಂದೆ ವರ್ಷಕ್ಕೆ ಕೇವಲ 4 ಸಿಲಿಂಡರ್‌ಗೆ ಮಾತ್ರ ಸಬ್ಸಿಡಿ!

ಬದುಕಿನ ನಿಜವಾದ ಶ್ರೀಮಂತಿಕೆ ಯಾವುದು? ಬಿ.ಆರ್.ಮಲ್ಲೇಶ್ ಅವರ ಚಿಂತನಶೀಲ ಲೇಖನ

ದಿನವೂ ‘ಅಧೋಮುಖ ಶ್ವಾನಾಸನ’ ಮಾಡುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ!

09/06/2026 ರ ನಿತ್ಯ ಭವಿಷ್ಯ

Trending Posts

Subscribe to News

Get the latest sports news from NewsSite about world, sports and politics.

Facebook X (Twitter) Pinterest Vimeo WhatsApp TikTok Instagram

News

  • World
  • US Politics
  • EU Politics
  • Business
  • Opinions
  • Connections
  • Science

Company

  • Information
  • Advertising
  • Classified Ads
  • Contact Info
  • Do Not Sell Data
  • GDPR Policy
  • Media Kits

Services

  • Subscriptions
  • Customer Support
  • Bulk Packages
  • Newsletters
  • Sponsored News
  • Work With Us

Subscribe to Updates

Get the latest creative news from FooBar about art, design and business.

© 2026 ThemeSphere. Designed by ThemeSphere.
  • Privacy Policy
  • Terms
  • Accessibility

Type above and press Enter to search. Press Esc to cancel.