Author: Times Of Bayaluseeme Staff

ಬೆಂಗಳೂರು: ಬಹುಚರ್ಚಿತ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಮಂದಿಯನ್ನು ದೋಷಿಗಳೆಂದು ಘೋಷಿಸಿದೆ. ಪ್ರಮುಖ ಆರೋಪಿ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಇತರ 16 ಮಂದಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಒಬ್ಬ ಆರೋಪಿಗೆ ಮಾತ್ರ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಎ1ರಿಂದ ಎ17ರವರೆಗೆ ಒಟ್ಟು 17 ಮಂದಿ ದೋಷಿಗಳಾಗಿದ್ದು, ಬಸವರಾಜ್ ಮುತ್ತಗಿ ಅಪ್ರೂವರ್ ಆಗಿ ಪರಿವರ್ತಿತರಾಗಿದ್ದಾರೆ. ಉಳಿದವರಲ್ಲಿ ವಿಕ್ರಂ ಬಳ್ಳಾರಿ, ಕೀರ್ತಿ ಕುಮಾರ್, ಸಂದೀಪ್ ಸೌದತ್ತಿ, ವಿನಾಯಕ್ ಕಾಟಗಿ, ಮಹಾಬಲೇಶ್ವರ ಹೊನಗಲ್, ಸಂತೋಷ್ ಸೌದತ್ತಿ, ದಿನೇಶ್, ಅಶ್ವಥ್, ಸುನೀಲ್, ನಜೀರ್ ಅಹ್ಮದ್, ಶಾಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ್ ಇಂಡಿ ಹಾಗೂ ಶಿವಾನಂದ್ ಬಿರಾದಾರ್ ಸೇರಿದ್ದಾರೆ. ವಿನಯ್ ಕುಲಕರ್ಣಿ ಪಾತ್ರ ಸಿಬಿಐ ತನಿಖೆ ಹಾಗೂ ನ್ಯಾಯಾಲಯದ ತೀರ್ಪಿನ ಪ್ರಕಾರ, ಯೋಗೀಶ್ ಗೌಡ ಹತ್ಯೆಯ ಹಿಂದಿನ…

Read More

ಲವ್ ಜಿಹಾದ್ ಎಂಬುದು ವ್ಯವಸ್ಥಿತ ಜಾಲವೇ ಅಥವಾ ಪ್ರೀತಿಯ ಹೆಸರಿನಲ್ಲಿ ನಡೆಯುವ ರಾಜಕೀಯವೇ? ನಾಸಿಕ್ ಮತ್ತು ಕರ್ನಾಟಕದ ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ವಿವೇಕಾನಂದ ಎಚ್. ಕೆ. ಅವರ ವಿಶೇಷ ಆತ್ಮಾವಲೋಕನ ಲೇಖನ.” ನಿಜ ಪ್ರೀತಿಯನ್ನು ಅನುಮಾನದಿಂದ ನೋಡುವ ಅತ್ಯಂತ ಕೆಟ್ಟ, ದುಷ್ಟ ಸಮಾಜ ನಿರ್ಮಾಣವಾಗದಿರಲಿ, ಹಾಗೆಯೇ ಪ್ರೀತಿಯ ಮುಗ್ಧತೆ ಧರ್ಮದ ಹೆಸರಿನಲ್ಲಿ ನಾಶವಾಗದಿರಲಿ…… ಈಗಿನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಟಿಸಿಎಸ್ ಕಂಪನಿಯ ಲವ್ ಜಿಹಾದ್ ಪ್ರಕರಣ, ಹಾಗೆಯೇ ಕರ್ನಾಟಕದ ಹುಬ್ಬಳ್ಳಿ ಸೇರಿ ಕೆಲವು ಜಿಲ್ಲೆಗಳ ಘಟನೆಗಳು, ಕೇರಳ ಸೇರಿ ಕೆಲವು ರಾಜ್ಯಗಳ ಕಡೆ ಒಂದಷ್ಟು ಪ್ರಕರಣಗಳು ಹೀಗೆ ಆಗಾಗ ಸುದ್ದಿಗಳು ಬರುತ್ತಿರುತ್ತವೆ. ಲವ್ ಜಿಹಾದ್ ಮತ್ತೊಮ್ಮೆ ಇಡೀ ದೇಶಾದ್ಯಂತ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಹಾಗೆಯೇ ನಾಸಿಕ್ ಘಟನೆ ಪೊಲೀಸ್ ತನಿಖೆಯ ಹಂತದಲ್ಲಿದೆ. ದಿನದಿಂದ ದಿನಕ್ಕೆ ಒಂದಷ್ಟು ಆತಂಕಕಾರಿ ಸುದ್ದಿಗಳು ಹೊರ ಬರುತ್ತಿವೆ. ಇದರ ಸತ್ಯಾಸತ್ಯತೆಯ ಬಗ್ಗೆ ಚರ್ಚಿಸಲು ಇನ್ನೊಂದಿಷ್ಟು ಸಮಯ ಬೇಕಾಗುತ್ತದೆ. ಆದರೂ ಮೂಲಭೂತವಾಗಿ ಲವ್ ಜಿಹಾದ್ ಬಗ್ಗೆ ಒಂದಷ್ಟು ಆತ್ಮಾವಲೋಕನ ಮತ್ತು…

Read More

ಬೆಂಗಳೂರು, ಏಪ್ರಿಲ್ 17 :ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆಡಳಿತ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ‘ಕರ್ನಾಟಕ ಲೋಕಾಯುಕ್ತ’ ಸಂಸ್ಥೆಯು ತನ್ನ ಯಶಸ್ವಿ ನಾಲ್ಕು ದಶಕಗಳ ಪಯಣವನ್ನು ಪೂರೈಸಿದ್ದು, ಈ ಅಂಗವಾಗಿ 2026ರ ಏಪ್ರಿಲ್ 18, ಶನಿವಾರದಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ. ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ಲೋಕಾಯುಕ್ತರಾದ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತರುಗಳಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರ ಘನ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಜರುಗಲಿದೆ. ಈ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಅವರು ಲೋಕಾಯುಕ್ತ ನಿಯತಕಾಲಿಕೆಯನ್ನು ಬಿಡುಗಡೆ ಮಾಡುವ ಜೊತೆಗೆ ಚುನಾಯಿತ ಪ್ರತಿನಿಧಿಗಳ ಆಸ್ತಿ ಮತ್ತು ಹೊಣೆಗಾರಿಕೆಗಳ ಹೊಸ ಪೋರ್ಟಲ್ ಹಾಗೂ ಆನ್‍ಲೈನ್ ತನಿಖಾ ಮಾಡ್ಯೂಲ್‍ಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ…

Read More

17 ಏಪ್ರಿಲ್ 2026 ರ ಶುಕ್ರವಾರದ ದ್ವಾದಶ ರಾಶಿಗಳ ಫಲಗಳು ಇಲ್ಲಿವೆ. ಮೇಷದಿಂದ ಮೀನದವರೆಗೆ ಇಂದಿನ ನಿಮ್ಮ ವೃತ್ತಿಜೀವನ, ಹಣಕಾಸು ಮತ್ತು ಆರೋಗ್ಯದ ಸಂಪೂರ್ಣ ವಿವರಗಳನ್ನು ಓದಿ. ♈ ಮೇಷ ಇಂದು ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮಕ್ಕೆ ಒಳ್ಳೆಯ ಫಲ ಸಿಗಲಿದೆ. ಹಿರಿಯರಿಂದ ಮೆಚ್ಚುಗೆ ದೊರೆಯಬಹುದು. ಆರ್ಥಿಕವಾಗಿ ಮಧ್ಯಮ ಸ್ಥಿತಿ. ಮನೆಯವರ ಜೊತೆ ಸಮಯ ಕಳೆಯುವುದು ಮನಸ್ಸಿಗೆ ಶಾಂತಿ ನೀಡುತ್ತದೆ. ♉ ವೃಷಭ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರಬಹುದು, ಆದ್ದರಿಂದ ವಿಶ್ರಾಂತಿ ಅಗತ್ಯ. ವ್ಯವಹಾರದಲ್ಲಿ ಹೊಸ ಅವಕಾಶಗಳು ಲಾಭ ತರುತ್ತವೆ. ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಇರಲಿ. ♊ ಮಿಥುನ ಇಂದು ಮಾತಿನ ಮೂಲಕವೇ ಕೆಲಸಗಳನ್ನು ಸಾಧಿಸುವ ದಿನ. ಹೊಸ ಜವಾಬ್ದಾರಿಗಳು ಬರಬಹುದು. ಸ್ನೇಹಿತರೊಂದಿಗೆ ಸಣ್ಣ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ♋ ಕಟಕ ಮನಸ್ಸಿನಲ್ಲಿ ಗೊಂದಲ ಇರಬಹುದು. ಪ್ರಮುಖ ನಿರ್ಧಾರಗಳನ್ನು ಮುಂದೂಡುವುದು ಉತ್ತಮ. ಕುಟುಂಬದ ಬೆಂಬಲ ನಿಮಗೆ ಧೈರ್ಯ ನೀಡುತ್ತದೆ. ♌ ಸಿಂಹ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ದಿನ. ಉದ್ಯೋಗದಲ್ಲಿ ಉತ್ತೇಜನಕಾರಿ…

Read More

ಚಿತ್ರದುರ್ಗ:  ನಗರದ ಅಭಿವೃದ್ಧಿ ದೃಷ್ಟಿಯಿಂದ ಮುಖ್ಯರಸ್ತೆ ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ನಿಯಮ ಉಲ್ಲಂಘಿಸಿದ ಕಟ್ಟಡ ಮಾಲೀಕರ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ನಗರ ಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮುಖ್ಯರಸ್ತೆ ಒತ್ತುವರಿ ತೆರವು ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಚಿತ್ರದುರ್ಗ ಜಿಲ್ಲಾ ಕೇಂದ್ರವಾಗಿದ್ದು, ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಉನ್ನತಿಕರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಗರದ ಮುಖ್ಯ ರಸ್ತೆ ಸೇರಿದಂತೆ, ವಾಣಿಜ್ಯ ಚಟುವಟಿಕೆಗಳು ನಡೆಯುವ ರಸ್ತೆಗಳಲ್ಲಿ ನಿಯಮ ಮೀರಿ ನಿರ್ಮಿಸಿದ ಕಟ್ಟಡಗಳಿಂದಾಗಿ ರಸ್ತೆ ಕಿರಿದಾಗಿವೆ. ಇದರಿಂದ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತಿದೆ. ನಗರದ ಮುಖ್ಯ ರಸ್ತೆಯ 373 ವಾಣಿಜ್ಯ ಮಳಿಗೆಗಳ ಪೈಕಿ ಬಹುತೇಕ ಕಟ್ಟಡ ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸಿದ್ದಾರೆ. ಈಗಾಗಲೇ ನೋಟಿಸ್ ನೀಡಿರುವ ಕಟ್ಟಡ ಮಾಲೀಕರ ಪ್ರಕರಣಗಳನ್ನು ಒಂದು ತಿಂಗಳ ಒಳಗಾಗಿ ಆಲಿಸಿ, ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ…

Read More

ಇಸ್ರೇಲ್ ತನ್ನ ಭದ್ರತೆ ಮತ್ತು ರಕ್ಷಣೆಯ ನೆಪವೊಡ್ಡಿ ಇಡೀ ವಿಶ್ವಕ್ಕೆ ಬೆಂಕಿ ಹಾಕುತ್ತಿದೆ. ತನ್ನ ವಿರೋಧಿಗಳನ್ನೆಲ್ಲಾ ಸರ್ವನಾಶ ಮಾಡಿ ತಾನು ಮಾತ್ರ ಅತ್ಯಂತ ಸುರಕ್ಷಿತವಾಗಿ ಇರಬೇಕು ಎನ್ನುವ ಸ್ವಾರ್ಥ ಮತ್ತು ಮಹತ್ವಕಾಂಕ್ಷೆ ಹೊಂದಿದೆ. ಅಂದರೆ ಸುಮಾರು ಒಂದು ಕೋಟಿ ಜನರ ಹಿತಕ್ಕಾಗಿ ಉಳಿದ ಸುಮಾರು 699 ಕೋಟಿ ಜನ ಕಷ್ಟ ಪಡಬೇಕಾಗಿದೆ. ಇದು ಕ್ರೌರ್ಯದ ಪರಾಕಾಷ್ಟೇ. ಹೋಗಲಿ, ಇಸ್ರೇಲ್ ತನ್ನ ಸುರಕ್ಷತೆಗಾಗಿ ಮಾಡುತ್ತಿರುವ ಕಸರತ್ತುಗಳು ಶಾಂತಿ, ಸೌಹಾರ್ದತೆ, ಮಾತುಕತೆಯಿಂದಲ್ಲ, ಬದಲಾಗಿ ತನ್ನಲ್ಲಿರುವ ಬಾಂಬು, ಬಂದೂಕು, ದ್ರೋಣ್, ಮಿಸ್ಸೈಲ್, ಹಣ, ಆಧುನಿಕ ತಂತ್ರಜ್ಞಾನ ಮತ್ತು ಮೊಸಾದ್ ಎಂಬ ತನ್ನದೇ ಅತ್ಯಂತ ಬುದ್ಧಿವಂತ ಬೇಹುಗಾರಿಕೆ ಸಂಸ್ಥೆಯನ್ನು ಉಪಯೋಗಿಸಿಕೊಂಡು ತಾನು ಉಳಿಯಲು ಇತರರನ್ನು ನಾಶಪಡಿಸುತ್ತಿದೆ. ಒಂದು ದೇಶ ಒಂದು ಹಂತಕ್ಕೆ ತನ್ನ ಭದ್ರತೆಗಾಗಿ ಮಾಡಿಕೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ಒಪ್ಪಿಕೊಳ್ಳಬಹುದೇನೋ, ಆದರೆ ಅದು ತುಂಬಾ ಅತಿರೇಕಕ್ಕೆ ಹೋಗಿ ವಿಶ್ವದ ಬುಡಕ್ಕೇ ಬಂದಾಗ ಅದನ್ನು ಖಂಡಿಸಬೇಕಾಗಿರುವುದು ನಮ್ಮ ಕರ್ತವ್ಯವಲ್ಲವೇ. ಈಗ ಯುದ್ಧಕ್ಕಿಂತ ಮಾತುಕತೆ ಮತ್ತು ಹೊಂದಾಣಿಕೆ ಅನಿವಾರ್ಯವಲ್ಲವೇ. ತನ್ನ…

Read More

ನಿತ್ಯ ಭವಿಷ್ಯ 16/04/2026: ಇಂದಿನ ಗುರುವಾರದ ರಾಶಿಭವಿಷ್ಯದಲ್ಲಿ ಮೇಷದಿಂದ ಮೀನದವರೆಗೆ ನಿಮ್ಮ ರಾಶಿಯ ಫಲ ಹೇಗಿದೆ? ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸ್ಥಿತಿಗತಿ ತಿಳಿಯಿರಿ. ಇಂದಿನ ಶುಭ ಸಂಖ್ಯೆ ಮತ್ತು ಬಣ್ಣದ ಸಂಪೂರ್ಣ ಮಾಹಿತಿ ಇಲ್ಲಿದೆ. 🔮 ಮೇಷ (Aries) ಇಂದು ಹೊಸ ಅವಕಾಶಗಳು ನಿಮ್ಮತ್ತ ಬರುತ್ತವೆ. ಉದ್ಯೋಗದಲ್ಲಿ ಪ್ರಗತಿ ಸಾಧ್ಯ. ಹಣಕಾಸಿನಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ಕುಟುಂಬದಲ್ಲಿ ಸಂತೋಷದ ವಾತಾವರಣ. 🔮 ವೃಷಭ (Taurus) ಮನಸ್ಸಿಗೆ ಶಾಂತಿ ದೊರೆಯುತ್ತದೆ. ವ್ಯವಹಾರದಲ್ಲಿ ಲಾಭದ ಸೂಚನೆ. ಹಳೆಯ ಸ್ನೇಹಿತರ ಭೇಟಿ ಸಂತೋಷ ತರುತ್ತದೆ. ಆರೋಗ್ಯ ಉತ್ತಮ. 🔮 ಮಿಥುನ (Gemini) ಕೆಲಸಗಳಲ್ಲಿ ಸ್ವಲ್ಪ ಅಡಚಣೆ ಎದುರಾಗಬಹುದು. ತಾಳ್ಮೆ ಇಟ್ಟು ಕಾರ್ಯ ನಿರ್ವಹಿಸಿ. ಹಣ ವ್ಯಯ ಹೆಚ್ಚಾಗಬಹುದು. 🔮 ಕಟಕ (Cancer) ಕುಟುಂಬದ ಬೆಂಬಲ ದೊರೆಯುತ್ತದೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗಬಹುದು. ಪ್ರಯಾಣ ಸಾಧ್ಯತೆ ಇದೆ. 🔮 ಸಿಂಹ (Leo) ನೀವು ತೆಗೆದುಕೊಳ್ಳುವ ನಿರ್ಧಾರಗಳು ಲಾಭಕರ. ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ. ಆರೋಗ್ಯದ ಕಡೆ ಗಮನ ಕೊಡಿ.…

Read More

ವಿಜಯನಗರ, ಏ.15: ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಿಪಿಐ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತರನ್ನು ಕೊಪ್ಪಳ ಜಿಲ್ಲೆಯ ಡಿಸಿಆರ್‌ಇ ಘಟಕದ ಸಿಪಿಐ ರಘುನಾಥ್ ಎಂದು ಗುರುತಿಸಲಾಗಿದೆ. ಅವರು ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಡಿಸಿಆರ್‌ಇ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿಜಯನಗರ–ದಾವಣಗೆರೆ ಗಡಿಭಾಗದ ಮುಸ್ಟೂರು–ಕಡಬನಕಟ್ಟೆ ಮಧ್ಯೆ ಈ ಅಪಘಾತ ಸಂಭವಿಸಿದೆ. ರಘುನಾಥ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೂಲ ನಿವಾಸಿಯಾಗಿದ್ದ ರಘುನಾಥ್ ಅವರು ಹೊಸಪೇಟೆಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಇತ್ತೀಚೆಗೆ ಅವರಿಗೆ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಆದೇಶ ಹೊರಡಿಸಲಾಗಿತ್ತು. ಆದರೆ ಅವರು ಇನ್ನೂ ಹೊಸ ಹುದ್ದೆಗೆ ವರದಿ ಮಾಡಿಕೊಳ್ಳುವ ಮುನ್ನವೇ ಸಾವನ್ನಪ್ಪಿರುವುದು ವಿಷಾದನೀಯ ಸಂಗತಿಯಾಗಿದೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More

15 ಏಪ್ರಿಲ್ 2026 ರ ನಿತ್ಯ ಭವಿಷ್ಯ: ಮೇಷ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾದರೆ, ವೃಷಭ ರಾಶಿಯವರಿಗೆ ಹೊಸ ಉದ್ಯೋಗದ ಅವಕಾಶಗಳು ಬರಲಿವೆ. ನಿಮ್ಮ ರಾಶಿಯ ಇಂದಿನ ಫಲ ಮತ್ತು ಕೈಗೊಳ್ಳಬೇಕಾದ ಜಾಗ್ರತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಮೇಷ (Aries) ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಚುರುಕು ತೋರಿಸುತ್ತೀರಿ. ಆರ್ಥಿಕವಾಗಿ ಸ್ವಲ್ಪ ಲಾಭ ಸಾಧ್ಯ. ಕುಟುಂಬದವರ ಜೊತೆ ಸಣ್ಣ ಮಾತಿನ ಭೇದ ಉಂಟಾಗಬಹುದು. ವೃಷಭ (Taurus) ಹೊಸ ಅವಕಾಶಗಳು ನಿಮ್ಮತ್ತ ಬರುತ್ತವೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ಕೊಡಿ. ಅನಗತ್ಯ ಖರ್ಚು ತಪ್ಪಿಸಿ. ಮಿಥುನ (Gemini) ಇಂದು ನಿಮ್ಮ ಮಾತುಗಳಿಗೆ ಮಹತ್ವ ಸಿಗುತ್ತದೆ. ಸ್ನೇಹಿತರಿಂದ ಸಹಾಯ ಲಭ್ಯ. ವ್ಯಾಪಾರದಲ್ಲಿ ನಿಧಾನ ಪ್ರಗತಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಕಟಕ (Cancer) ಭಾವನಾತ್ಮಕವಾಗಿ ಸ್ವಲ್ಪ ಅಶಾಂತಿ ಇರಬಹುದು. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು. ಹಿರಿಯರ ಸಲಹೆ ನಿಮಗೆ ಉಪಯೋಗವಾಗುತ್ತದೆ. ಸಿಂಹ (Leo) ನಿಮ್ಮ ನಾಯಕತ್ವ ಗುಣ ಮೆರೆದಾಡುತ್ತದೆ. ಉದ್ಯೋಗದಲ್ಲಿ…

Read More

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕಳೆದ ತಿಂಗಳು ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣವಾಗಿದ್ದ ಹೆಣ್ಣು ನೀರಾನೆ ಹಂಸಿಣಿ (12) ಅನಾರೋಗ್ಯದಿಂದ ಸಾವನ್ನಪ್ಪಿದೆ. ಗರ್ಭಿಣಿಯಾಗಿದ್ದ ಹಂಸಿಣಿಗೆ ಮರಿ ಹಾಕುವ ಅವಧಿ ಮುಗಿದಿದ್ದರೂ ಪ್ರಸವವಾಗಿರಲಿಲ್ಲ. ಈ ಹಿನ್ನೆಲೆ ಏಪ್ರಿಲ್ 10ರಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಹಾಗೂ ಮೈಸೂರು ವನ್ಯಜೀವಿ ಪಶುವೈದ್ಯರ ವಿಶೇಷ ತಂಡ ಆರೋಗ್ಯ ತಪಾಸಣೆ ನಡೆಸಿತ್ತು. ರಕ್ತ ಸೇರಿದಂತೆ ವಿವಿಧ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಹಂಸಿಣಿಯ ಗರ್ಭಾಶಯದಲ್ಲಿ ಗಂಭೀರ ಸೋಂಕು ಇರುವುದು ದೃಢಪಟ್ಟಿದ್ದು, ಗರ್ಭದಲ್ಲಿದ್ದ ಭ್ರೂಣ ಮೃತಪಟ್ಟಿರುವ ಸಾಧ್ಯತೆಯೂ ವ್ಯಕ್ತವಾಗಿತ್ತು. ಸೋಂಕು ತೀವ್ರಗೊಂಡ ಪರಿಣಾಮ ಪ್ರಮುಖ ಅಂಗಾಂಗಗಳ ಕಾರ್ಯ ಸ್ಥಗಿತಗೊಂಡಿದ್ದು, ಇಂದು ಮಧ್ಯಾಹ್ನ 3.30ರ ಸುಮಾರಿಗೆ ಹಂಸಿಣಿ ಕೊನೆಯುಸಿರೆಳೆದಿದೆ ಎಂದು ಹುಲಿ ಮತ್ತು ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅಮರಾಕ್ಷರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ನೀರಾನೆ ಕಳೆದ ಮಾರ್ಚ್ 19ರ ರಾತ್ರಿ 11.45ರ ವೇಳೆಗೆ ಯುವ…

Read More