Author: Times Of Bayaluseeme Staff
ಬೆಂಗಳೂರು: ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರ ವಿರುದ್ಧ ಹೊರಬಿದ್ದಿದ್ದ ವಿವಾದಾತ್ಮಕ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ರಾಸಲೀಲೆ ಆರೋಪದ ಹಿನ್ನೆಲೆ ಹಿಂದೆ ನೀಡಲಾಗಿದ್ದ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಐಜಿಪಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಲೇ, ಕಚೇರಿಯಲ್ಲಿಯೇ ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ನಡೆಸಿದರೆಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಯಿತು. ಈ ಹಿನ್ನೆಲೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡು ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಿತ್ತು. ಆದರೆ, ಈಗ ಸರ್ಕಾರ ತನ್ನ ಹಿಂದಿನ ಆದೇಶವನ್ನು ಹಿಂತೆಗೆದುಕೊಂಡಿದೆ. ಇದರ ಹಿಂದೆ ಪ್ರಮುಖ ಕಾರಣವಾಗಿ ಅವರ ಸೇವಾ ನಿವೃತ್ತಿ ಸಮೀಪಿಸುತ್ತಿರುವುದು ಹೇಳಲಾಗುತ್ತಿದೆ. ಇದೇ ತಿಂಗಳ 31ರಂದು ಅವರು ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಮಾನತು ಆದೇಶವನ್ನು ಹಿಂಪಡೆಯುವ…
ಇಂದು ದಿನಾಂಕ 07-05-2026, ಗುರುವಾರದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ. ಮೇಷ ರಾಶಿಯವರಿಗೆ ಹೊಸ ಅವಕಾಶ, ಕುಂಭ ರಾಶಿಯವರಿಗೆ ಸೃಜನಾತ್ಮಕ ಯಶಸ್ಸು ಹಾಗೂ ವೃಷಭ ರಾಶಿಯವರಿಗೆ ಆರ್ಥಿಕ ಎಚ್ಚರಿಕೆ ಅಗತ್ಯ. ನಿಮ್ಮ ರಾಶಿಯ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಓದಿ. ♈ ಮೇಷ (Aries) ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಕೆಲಸದಲ್ಲಿ ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಕುಟುಂಬದ ಜೊತೆ ಸಮಯ ಕಳೆಯಲು ಪ್ರಯತ್ನಿಸಿ. ♉ ವೃಷಭ (Taurus) ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿ. ಆರೋಗ್ಯದ ಕಡೆ ಗಮನ ಹರಿಸಿ. ♊ ಮಿಥುನ (Gemini) ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ಹೊಸ ಯೋಜನೆಗಳಿಗೆ ಶುಭಾರಂಭ ಮಾಡುವ ಉತ್ತಮ ದಿನ. ಮನಸ್ಸಿಗೆ ಸಂತೋಷ ಉಂಟಾಗುತ್ತದೆ. ♋ ಕರ್ಕ (Cancer) ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಶಾಂತ ಮನಸ್ಸಿನಿಂದ ನಿರ್ಧಾರ ತೆಗೆದುಕೊಳ್ಳಿ. ಕುಟುಂಬದಿಂದ ಬೆಂಬಲ ಸಿಗುತ್ತದೆ. ♌ ಸಿಂಹ (Leo) ನಿಮ್ಮ ನಾಯಕತ್ವ ಗುಣಗಳು ಮೆರೆದೇಳುತ್ತವೆ. ಉದ್ಯೋಗದಲ್ಲಿ ಮೆಚ್ಚುಗೆ ಸಿಗಬಹುದು. ಪ್ರಯಾಣ…
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದು ಮಾತ್ರವಲ್ಲದೆ, ತೂಕ ಇಳಿಕೆ ಮತ್ತು ಚರ್ಮದ ಕಾಂತಿಗೂ ಸಹಕಾರಿ. ಈ ಪುಟ್ಟ ಅಭ್ಯಾಸದ ದೊಡ್ಡ ಲಾಭಗಳ ಬಗ್ಗೆ ಇಲ್ಲಿ ಓದಿ. ಇಂದಿನ ಧಾವಂತದ ಬದುಕಿನಲ್ಲಿ ನಾವು ನಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದು ಬಹಳ ಕಡಿಮೆ. ಆದರೆ, ನಮ್ಮ ಹಿರಿಯರು ಹೇಳುವ ಒಂದು ಸಣ್ಣ ಅಭ್ಯಾಸ ನಮ್ಮ ದೇಹದ ಮೇಲೆ ಅದ್ಭುತ ಪರಿಣಾಮ ಬೀರಬಲ್ಲದು. ಹೌದು, ಅದೇ “ಉಗುರುಬೆಚ್ಚಗಿನ ನೀರಿನ ಮಹಿಮೆ”. ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ನಿಮಗಿದ್ದರೆ, ಈ ಲೇಖನ ಓದಿದ ಮೇಲೆ ಅದನ್ನು ಖಂಡಿತ ಬದಲಿಸಿಕೊಳ್ಳುತ್ತೀರಿ. ಬೆಚ್ಚಗಿನ ನೀರಿನಿಂದ ಆಗುವ ಪ್ರಮುಖ ಲಾಭಗಳು: 1. ಜೀರ್ಣಕ್ರಿಯೆ ಸುಧಾರಣೆ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ರಾತ್ರಿಯಿಡೀ ಸಂಗ್ರಹವಾದ ವಿಷಕಾರಿ ಅಂಶಗಳು (Toxins) ದೇಹದಿಂದ ಹೊರಹೋಗುತ್ತವೆ. ಇದು ಜೀರ್ಣಾಂಗವ್ಯೂಹವನ್ನು ಸ್ವಚ್ಛಗೊಳಿಸಿ, ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಿಸುತ್ತದೆ. 2. ತೂಕ ಇಳಿಕೆಗೆ ಸಹಕಾರಿ: ನೀವು…
06 ಮೇ 2026, ಬುಧವಾರದ ನಿತ್ಯ ಭವಿಷ್ಯ: ಮೇಷ ರಾಶಿಯವರಿಗೆ ಆರ್ಥಿಕ ಲಾಭ, ಸಿಂಹ ರಾಶಿಯವರಿಗೆ ಕೆಲಸದಲ್ಲಿ ಪ್ರಶಂಸೆ ಹಾಗೂ ತುಲಾ ರಾಶಿಯವರಿಗೆ ವ್ಯವಹಾರದಲ್ಲಿ ಲಾಭದ ಸೂಚನೆ ಇದೆ. ನಿಮ್ಮ ರಾಶಿಯ ಇಂದಿನ ಫಲ ತಿಳಿಯಲು ಪೂರ್ಣ ವರದಿ ಓದಿ. ಮೇಷ (Aries) ಇಂದು ಹೊಸ ಅವಕಾಶಗಳು ನಿಮ್ಮತ್ತ ಬರುತ್ತವೆ. ಕೆಲಸದಲ್ಲಿ ಚುರುಕುತನ ಹೆಚ್ಚುತ್ತದೆ. ಆರ್ಥಿಕವಾಗಿ ಲಾಭದ ಸೂಚನೆ ಇದೆ. ಕುಟುಂಬದ ಜೊತೆ ಸಮಯ ಕಳೆಯುವುದು ಸಂತೋಷ ನೀಡುತ್ತದೆ. ವೃಷಭ (Taurus) ನೀವು ಯೋಜಿಸಿದ ಕೆಲಸಗಳು ನಿಧಾನವಾಗಿ ಯಶಸ್ಸಿನತ್ತ ಸಾಗುತ್ತವೆ. ಆರೋಗ್ಯದ ಬಗ್ಗೆ ಗಮನ ಕೊಡಿ. ಅನಾವಶ್ಯಕ ಖರ್ಚುಗಳನ್ನು ತಪ್ಪಿಸುವುದು ಒಳಿತು. ಮಿಥುನ (Gemini) ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಕಾಣಬಹುದು. ಮಾತಿನಲ್ಲಿ ಎಚ್ಚರಿಕೆ ಇರಲಿ. ಕರ್ಕಾಟಕ (Cancer) ಕುಟುಂಬದ ವಿಷಯಗಳಲ್ಲಿ ಸ್ವಲ್ಪ ಒತ್ತಡ ಕಂಡುಬರಬಹುದು. ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿದರೆ ಪರಿಹಾರ ಸಿಗುತ್ತದೆ. ಹಣಕಾಸು ವಿಚಾರದಲ್ಲಿ ಜಾಗ್ರತೆ ಅಗತ್ಯ. ಸಿಂಹ (Leo) ನಿಮ್ಮ ನಾಯಕತ್ವ ಗುಣಗಳು ಬೆಳಗುವ…
ಗೆಲ್ಲುತ್ತಿರುವ ರಾಜಕಾರಣಿಗಳು, ಸೋಲುತ್ತಿರುವ ಮತದಾರರು – ನಮ್ಮ ಸಮಾಜದ ಈ ವಿಷಮ ಪರಿಸ್ಥಿತಿಯ ಬಗ್ಗೆ ವಿವೇಕಾನಂದ ಎಚ್. ಕೆ. ಅವರ ಮಾರ್ಮಿಕ ಲೇಖನ. ಅಧಿಕಾರ, ಸಂಪತ್ತು ಮತ್ತು ಅಸಮಾನತೆಯ ನಡುವೆ ಸಿಲುಕಿದ ಸಾಮಾನ್ಯ ಜನರ ನೈಜ ದೃಷ್ಟಿಕೋನ ಇಲ್ಲಿದೆ. ಗೆಲ್ಲುತ್ತಲೇ ಇರುವ ರಾಜಕಾರಣಿಗಳು, ಸೋಲುತ್ತಲೇ ಇರುವ ಮತದಾರರು, ಕನಸು ಕಾಣುತ್ತಲೇ ಇರುವ ಬಡ, ಮಧ್ಯಮ ವರ್ಗದವರು, ಅಧಿಕ ಪ್ರಸಂಗಿಗಳಂತೆ ಚುನಾವಣಾ ಫಲಿತಾಂಶ ವಿಮರ್ಶಿಸುತ್ತಲೇ ಇರುವ ಮಾಧ್ಯಮದವರು, ತಮಗೆ ತೋಚಿದಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಲೇ ಇರುವ ಸಾಮಾಜಿಕ ಜಾಲತಾಣಗಳು……. ಹೊಟ್ಟೆ ತುಂಬಿದವರಿಗೆ ” ಮೇರಾ ಭಾರತ್ ಮಹಾನ್ ” ಹಸಿದ ಹೊಟ್ಟೆಯವರಿಗೆ ? ಸಾಮಾಜಿಕವಾಗಿ ಮೇಲಿನ ಸ್ಥಾನದಲ್ಲಿರುವವರಿಗೆ ” ನಮ್ಮ ಸಂಸ್ಕೃತಿ ಮಹಾನ್ ” ಮುಟ್ಟಿಸಿಕೊಳ್ಳದವರಿಗೆ ? ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರಿಗೆ ” A county of luxury ” ಬಡತನದಲ್ಲಿರುವವರಿಗೆ ? ಧರ್ಮಾಧಿಕಾರಿಗಳಿಗೆ ” ಇದು ಪವಿತ್ರ ಭೂಮಿ ” ಜಾಗೃತ ಮನಸ್ಥಿತಿಯವರಿಗೆ ? ಬಹುರಾಷ್ಟ್ರೀಯ ಕಂಪನಿಗಳಿಗೆ ” ಬಹು ದೊಡ್ಡ ಮಾರುಕಟ್ಟೆ…
ಚುನಾವಣೆ ಎಂದರೆ ಯುದ್ಧವಲ್ಲ, ಅದು ನಮ್ಮ ನಡುವಿನ ಒಂದು ಸಣ್ಣ ಸ್ಪರ್ಧೆ ಮಾತ್ರ. ಗೆದ್ದವರ ಅಟ್ಟಹಾಸ, ಸೋತವರ ಮೇಲಿನ ಅವಹೇಳನಕ್ಕಿಂತ ಮಿಗಿಲಾದ ಮಾನವೀಯ ಮೌಲ್ಯಗಳು ನಮ್ಮ ಸಮಾಜಕ್ಕೆ ಬೇಕಿದೆ. ಚುನಾವಣಾ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆ ಮತ್ತು ಮಾಧ್ಯಮಗಳ ಜವಾಬ್ದಾರಿಯ ಬಗ್ಗೆ ವಿವೇಕಾನಂದ ಎಚ್.ಕೆ. ಅವರ ಸಮಾಜಮುಖಿ ಚಿಂತನೆ ಇಲ್ಲಿದೆ ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ ಕಂಡು ಮುಸಿ ಮುಸಿ ನಗುತ್ತಾ…….. ಚುನಾವಣೆಯನ್ನು ಮೌಲ್ಯಗಳ ಮೇಲೆ ಅಳೆಯಬೇಕೆ, ಸಂಖ್ಯೆಗಳ ಮೇಲೆ ಅಳೆಯಬೇಕೆ, ಫಲಿತಾಂಶಗಳ ಮೇಲೆ ಅಳೆಯಬೇಕೆ, ಅಧಿಕಾರ ವಹಿಸಿಕೊಂಡರ ಸಾಮರ್ಥ್ಯದ ಮೇಲೆ ಅಳೆಯಬೇಕೆ ಒಮ್ಮೆ ಮುಕ್ತವಾಗಿ ಆಲೋಚಿಸಿ. ಇದು ವಿದೇಶದ ಶತ್ರುಗಳ ಮೇಲಿನ ವಿಜಯವಲ್ಲ. ನಮ್ಮ ನಡುವಿನ ಒಂದು ಸಣ್ಣ ಸ್ಪರ್ಧೆ ಮಾತ್ರ…. ಇಲ್ಲಿಯವರೆಗೆ ಬಹುತೇಕ ಮಾಧ್ಯಮಗಳು ಮತ್ತು ರಾಜಕೀಯ ಆಸಕ್ತರು ಮತಗಳು ಮತ್ತು ಪಕ್ಷಗಳ ಆಧಾರದ ಮೇಲೆ ಫಲಿತಾಂಶವನ್ನು ವಿಮರ್ಶಿಸಿದ್ದಾರೆ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು…
ಮೇ 5, 2026ರ ಇಂದಿನ ರಾಶಿಫಲ: ಮೇಷ ರಾಶಿಯವರಿಗೆ ಇಂದು ಅದೃಷ್ಟದ ದಿನವೇ? ವೃಷಭ ಮತ್ತು ತುಲಾ ರಾಶಿಯವರು ಎಚ್ಚರದಿಂದಿರಬೇಕಾದ ವಿಷಯಗಳೇನು? 12 ರಾಶಿಗಳ ಇಂದಿನ ಸಂಪೂರ್ಣ ಭವಿಷ್ಯವನ್ನು ಇಲ್ಲಿ ಓದಿ. ಮೇಷ (Aries) ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ವೃಷಭ (Taurus) ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಹೊಸ ಹೂಡಿಕೆಗಳಿಗೆ ತಾಳ್ಮೆ ವಹಿಸಿ. ಆರೋಗ್ಯದ ಕಡೆ ಗಮನ ಕೊಡಿ. ಮಿಥುನ (Gemini) ಸ್ನೇಹಿತರ ಸಹಾಯದಿಂದ ಕಾರ್ಯಗಳು ಸುಗಮವಾಗುತ್ತವೆ. ಹೊಸ ಅವಕಾಶಗಳು ನಿಮ್ಮತ್ತ ಬರುತ್ತವೆ. ಪ್ರಯಾಣ ಸಾಧ್ಯತೆ ಇದೆ. ಕಟಕ (Cancer) ಮನಸ್ಸಿನಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು. ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಕುಟುಂಬದ ಬೆಂಬಲ ನಿಮಗೆ ಸಿಗುತ್ತದೆ. ಸಿಂಹ (Leo) ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿ. ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕನ್ಯಾ (Virgo) ಹೊಸ ಯೋಜನೆಗಳಿಗೆ ಉತ್ತಮ ಸಮಯ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ತುಲಾ (Libra)…
ಚಿತ್ರದುರ್ಗ.ಮೇ 4: ರಾಜ್ಯದಲ್ಲಿ ನುಡಿದಂತೆ ನಡೆಯುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದತ್ತ ಮತದಾರರ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆಯಲ್ಲಿನ ಗೆಲುವೇ ಸಾಕ್ಷಿ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದ್ದಾರೆ. ರಾಜ್ಯದ ಎರಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಸಿದ್ದರಾಮಯ್ಯ ಅವರ ಆಡಳಿತದ ಹಿರಿಮೆಗೆ ಬಹುದೊಡ್ಡ ಗರಿ ಆಗಿದೆ. ಗ್ಯಾರೆಂಟಿ ಯೋಜನೆಗಳನ್ನು ಘೋಷಿಸಿದ ಸಂದರ್ಭ ಇದು ಸಾಧ್ಯವೇ ಇಲ್ಲವೆಂದು ಸುದ್ದಿ ಹರಡಿದರು. ಬಳಿಕ ಅನುಷ್ಠಾನಕ್ಕೆ ತರುತ್ತಿದ್ದಂತೆ ರಾಜ್ಯ ದಿವಾಳಿ ಆಗಲಿದೆ ಎಂದು ಬೊಬ್ಬೆ ಹಾಕಿದರು. ಆದರೆ, ದೇಶದಲ್ಲಿಯೇ ಅತ್ಯಂತ ಶಿಸ್ತುಬದ್ಧ ಆರ್ಥಿಕ ಸ್ಥಿತಿಯಲ್ಲಿ ರಾಜ್ಯವೇ ನಂ. 1 ಆಗಿದೆ. ಇದಕ್ಕೆ ಮತದಾರರು ಈಗ ಮುದ್ರೆ ಒತ್ತಿದ್ದಾರೆ ಎಂದಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಎಲ್ಲ ರಾಜಕೀಯ ಶತ್ರುಗಳು ಒಗ್ಗೂಡಿದ್ದರು. ಪಕ್ಷದಿಂದ ಉಚ್ಛಾಟಿಸಿದ್ದ ಯತ್ನಾಳ್ ಅವರನ್ನು ಬಿಜೆಪಿ ಪ್ರಚಾರಕ್ಕೆ ಕರೆತಂದಿತು. ಜಾತಿಗಳ ಮಧ್ಯೆ ಕಂದಕ ಹುಟ್ಟುಹಾಕುವ ಕೆಲಸ ಮಾಡಿತು. ಆದರೆ, ಆ…
ಚಿತ್ರದುರ್ಗ: ಚಿತ್ರದುರ್ಗ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಉಪಕರಣಗಳ ಬದಲಾಯಿಸುವ ತುರ್ತು ನಿರ್ವಹಣಾ ಕಾಮಗಾರಿಗೆ ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ 66/11 ಕೆ.ವಿ ಚಿತ್ರದುರ್ಗ ವಿ.ವಿ ಕೇಂದ್ರದ ಮಾರ್ಗಗಳ ಮಾರ್ಗ ಮುಕ್ತತೆ ನೀಡಬೇಕಾಗಿರುವುದರಿಂದ ಈ ಮಾರ್ಗಗಳ ನಗರ, ಎನ್.ಜೆ.ವೈ , ವಾಟರ್ ವಕ್ರ್ಸ ಮಾರ್ಗಗಳಿಗೆ ಇದೇ ಮೇ 05ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಗಾಂಧಿ ನಗರ, ಐಯುಡಿಪಿ ಲೇಔಟ್, ಟೀಚರ್ಸ್ ಕಾಲೋನಿ, ಪ್ರಶಾಂತ್ ನಗರ, ಕೆಳಗೋಟೆ, ಆಕಾಶವಾಣಿ ಹಿಂಭಾಗ, ಬ್ಯಾಂಕ್ ಕಾಲೋನಿ, ಮದಕರಿಪುರ, ಜೆ.ಸಿ.ಆರ್, ಚಂದ್ರವಳ್ಳಿ, ಮಾರುತಿ ನಗರ, ಮೇದೇಹಳ್ಳಿ ರಸ್ತೆ, ಬುರುಜನಹಟ್ಟಿ, ಪ್ರೈವೇಟ್ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ರಾಜೇಂದ್ರಸ್ವಾಮಿ ದೇವಸ್ಥಾನ, ನೀಲಕಂಠೇಶ್ವರ ದೇವಸ್ಥಾನ, ಸಂತೆ ಮೈದಾನ, ಸಂತೇಹೋಂಡ, ದವಳಗಿರಿ ಬಡಾವಣೆ, ದಿ.ವಿ.ಕೆ.ಎಸ್ ಲೇಔಟ್, ಎಸ್.ಜೆ.ಎಮ್.ಕಾಲೇಜ್, ಮಾಳಪ್ಪನಹಟ್ಟಿ ರಸ್ತೆ, ಹೊಳಲ್ಕೆರೆ ಮುಖ್ಯ ರಸ್ತೆ, ಮಲ್ಲಾಪುರ, ಕನಕನಗರ, ಮಲ್ಲಾಪುರ ಗೊಲ್ಲರಹಟ್ಟಿ, ತಮಟಕಲ್ಲು, ಮೇದೇಹಳ್ಳಿ, ವಿದ್ಯಾನಗರ , ಪಿಳ್ಳೆಕೆರೆನಹಳ್ಳಿ, ಎ.ಪಿ.ಎಮ್.ಸಿ, ಪೈರ್…
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಅಭೂತಪೂರ್ವ ಮುನ್ನಡೆ ಸಾಧಿಸಿದೆ. ರಾಜಕೀಯಕ್ಕೆ ಕಾಲಿಟ್ಟ ಮೊದಲ ಪ್ರಯತ್ನದಲ್ಲೇ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ವಿಜಯ್ ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಸದ್ಯದ ಟ್ರೆಂಡ್ ಗಮನಿಸಿದರೆ ಟಿವಿಕೆ ಪಕ್ಷ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ವಿಜಯ್ ಅವರ ಈ ಭರ್ಜರಿ ಯಶಸ್ಸಿಗೆ ಅವರು ನೀಡಿದ 7 ಪ್ರಮುಖ ಭರವಸೆಗಳೇ ಅಡಿಪಾಯ ಎಂದು ವಿಶ್ಲೇಷಿಸಲಾಗುತ್ತಿದೆ. ಆ ಭರವಸೆಗಳು ಇಲ್ಲಿವೆ: 1. ಮಹಿಳೆಯರಿಗೆ ಮಾಸಿಕ ₹2,500 ನೆರವು: ’ಮದಿಪ್ಪುಮಗು ಮಗಳಿರ್ ತಿಟ್ಟಂ’ ಯೋಜನೆಯಡಿ 60 ವರ್ಷದೊಳಗಿನ ಮಹಿಳಾ ಗೃಹಿಣಿಯರಿಗೆ ಪ್ರತಿ ತಿಂಗಳು ₹2,500 ನೀಡುವ ಭರವಸೆ ನೀಡಲಾಗಿತ್ತು. ಇದು ಮಹಿಳಾ ಮತದಾರರನ್ನು ಸೆಳೆಯುವಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರಿದೆ. 2. ವರ್ಷಕ್ಕೆ 6 ಉಚಿತ ಎಲ್ಪಿಜಿ ಸಿಲಿಂಡರ್: ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ‘ಅನ್ನಪೂರ್ಣಿ ಸೂಪರ್ ಸಿಕ್ಸ್’ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ…
Subscribe to Updates
Get the latest creative news from FooBar about art, design and business.