Author: Times Of Bayaluseeme Staff
ನೀಟ್ ಪ್ರಶ್ನೆ ಪತ್ರಿಕೆ ಬಯಲಾಗುತ್ತಿರುವುದು ಕೇವಲ ಪರೀಕ್ಷಾ ವೈಫಲ್ಯವಲ್ಲ, ಇದು ಇಡೀ ವ್ಯವಸ್ಥೆಯ ನೈತಿಕ ಪತನ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಆರೋಪ-ಪ್ರತ್ಯಾರೋಪಗಳ ನಡುವೆ ಸಾಮಾನ್ಯ ವಿದ್ಯಾರ್ಥಿಯ ಭವಿಷ್ಯ ಏನಾಗುತ್ತಿದೆ? ಬದಲಾವಣೆಯ ಮೂಲವನ್ನು ಹುಡುಕುವ ವಿವೇಕಾನಂದ ಎಚ್. ಕೆ. ಅವರ ವಿಶೇಷ ಲೇಖನ. ನನಗೆ ಇದೇನು ದೊಡ್ಡ ಆಶ್ಚರ್ಯವಲ್ಲ. ಇಡೀ ಸಮಾಜದ ನಡೆಯುತ್ತಿರುವುದೇ ಮುಖವಾಡಗಳ ಮರೆಯಲ್ಲಿ. ಎಲ್ಲವೂ ಬಟಾ ಬಯಲಾಗುತ್ತಿದೆ. ಇದು ಕಳ್ಳರ ಸಂತೆ. ಆದರೆ ಸಿಕ್ಕಿಹಾಕಿಕೊಂಡವನು ಮಾತ್ರ ಕಳ್ಳ ಎಂದು ನಾವು ಭ್ರಮಿಸಿದ್ದೇವೆ . ಇಡೀ ವ್ಯವಸ್ಥೆಯೇ ತೂತು ಬಿದ್ದಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎಂದರೇನು ? ಎರಡೂ ಸರ್ಕಾರಿಗಳಿಗೆ ಮತದಾನ ಮಾಡಿ ಆಯ್ಕೆ ಮಾಡುವುದು ನಾವೇ ತಾನೆ. ಎರಡೂ ಸರ್ಕಾರದ ಖಜಾನೆ ತುಂಬಲು ತೆರಿಗೆ Implementation ನಾವೇ ಹೌದೇ. ಎರಡೂ ಸರ್ಕಾರಗಳು ನಡೆಯುತ್ತಿರುವುದು ಒಂದೇ ಸಂವಿಧಾನದ ಅಡಿಯಲ್ಲಿ ಅಲ್ಲವೇ. ಹಾಗಾದರೆ ಸರ್ಕಾರಗಳ ನಡುವೆ ಭಿನ್ನತೆ ಏಕೆ. ಒಬ್ಬರಿಗೊಬ್ಬರು ನಾನು ಸರಿ, ನೀನು ತಪ್ಪು ಎಂದು…
15 ಮೇ 2026ರ ಇಂದಿನ ರಾಶಿಭವಿಷ್ಯ: ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳ ಫಲ ಇಲ್ಲಿದೆ. ಉದ್ಯೋಗ, ಆರೋಗ್ಯ, ಮತ್ತು ಹಣಕಾಸಿನ ಸ್ಥಿತಿಗತಿ ತಿಳಿಯಲು ಈಗಲೇ ಓದಿ. ಇಂದಿನ ಶುಭ ಬಣ್ಣ ಮತ್ತು ಸಂಖ್ಯೆಯ ಮಾಹಿತಿ ಇಲ್ಲಿದೆ. ಮೇಷ (Aries): ಇಂದು ಹೊಸ ಕೆಲಸಗಳಿಗೆ ಚಾಲನೆ ನೀಡಲು ಉತ್ತಮ ದಿನ. ಕುಟುಂಬದಲ್ಲಿ ಸಣ್ಣ ಮಾತಿನ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ವೃಷಭ (Taurus): ಕೆಲಸದ ಒತ್ತಡ ಇದ್ದರೂ ಫಲಿತಾಂಶ ತೃಪ್ತಿಕರವಾಗಿರುತ್ತದೆ. ಆರೋಗ್ಯದ ಕಡೆ ಗಮನ ಕೊಡಿ. ಹಳೆಯ ಸ್ನೇಹಿತರ ಭೇಟಿ ಸಂತೋಷ ತರಬಹುದು. ಮಿಥುನ (Gemini): ಹೊಸ ಪರಿಚಯಗಳು ಜೀವನದಲ್ಲಿ ಉಪಯುಕ್ತವಾಗಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಅನಗತ್ಯ ಖರ್ಚು ತಪ್ಪಿಸಿ. ಕಟಕ (Cancer): ಕುಟುಂಬದವರ ಸಹಕಾರ ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣಬಹುದು. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಿಂಹ (Leo): ನಿಮ್ಮ ನಾಯಕತ್ವ ಗುಣಕ್ಕೆ ಮೆಚ್ಚುಗೆ ಸಿಗಬಹುದು. ವ್ಯವಹಾರದಲ್ಲಿ ಲಾಭದ ಸೂಚನೆ ಇದೆ. ಮಾತಿನಲ್ಲಿ ಸಮತೋಲನ ಇರಲಿ.…
ನಟ ವಿಜಯ್ ಅವರ ಪ್ರಮಾಣವಚನ ಸ್ವೀಕಾರದ ಹಿನ್ನೆಲೆಯಲ್ಲಿ ದೈವಶಕ್ತಿ ಮತ್ತು ಜನಶಕ್ತಿಯ ನಡುವಿನ ಸಂಘರ್ಷವನ್ನು ಈ ಲೇಖನ ವಿಶ್ಲೇಷಿಸುತ್ತದೆ. ಕಣ್ಣಿಗೆ ಕಾಣದ ದೇವರಿಗಿಂತ, ಕಣ್ಣೆದುರಿರುವ ಮನುಷ್ಯ ಮತ್ತು ಸಂವಿಧಾನ ಹೇಗೆ ಶ್ರೇಷ್ಠ ಎಂಬುದನ್ನು ಲೇಖಕ ವಿವೇಕಾನಂದ ಎಚ್.ಕೆ. ಅವರು ಇಲ್ಲಿ ತಾರ್ಕಿಕವಾಗಿ ಚರ್ಚಿಸಿದ್ದಾರೆ. ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲಾ ಸಮಾನರು ಎಂಬುದು ನಮಗೆ ಮುಖ್ಯವಲ್ಲ, ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂಬುದು ನಮಗೆ ಬಹಳ ಮುಖ್ಯ… ” ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ತಮಿಳುನಾಡಿನ ಹೊಸ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ದೇವರ ಹೆಸರಿನಲ್ಲಿ ( ಆಂಡವನ್ ) ಪ್ರಮಾಣ ಮಾಡಿ ಮುಖ್ಯಮಂತ್ರಿ ಪದವಿ ಸ್ವೀಕರಿಸಿದರು. ಅದು ಅವರ ನಂಬಿಕೆ, ಅವರ ಆಯ್ಕೆಗೆ ಬಿಟ್ಟಿದ್ದು. ಪೆರಿಯಾರ್ ಅವರನ್ನು ಆಗಾಗ ಸ್ಮರಿಸುವ ವಿಜಯ್ ಅವರು ರಾಜಕಾರಣಿಯೋ, ಸಿನಿಮಾ ನಟರೋ, ವೈಚಾರಿಕ ಚಿಂತಕರೋ, ಸಂಪ್ರದಾಯವಾದಿ ವ್ಯಕ್ತಿಯೋ, ಎಲ್ಲವೂ ಮುಖವಾಡವೋ ಎಂಬುದೆಲ್ಲಾ ಮುಂದಿನ ದಿನಗಳು ನಿರ್ಧರಿಸುತ್ತದೆ. ಏಕೆಂದರೆ ವಿಜಯ್ ಅವರಿಗೆ ಜನ್ಮ…
ಬೆಂಗಳೂರು: ಕರ್ನಾಟಕದ ಮತದಾರರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಭಾರತದ ಚುನಾವಣಾ ಆಯೋಗವು (ECI) ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಲ್ಲಿ ಮೂರನೇ ಹಂತದ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ನಡೆಸಲು ಅಧಿಕೃತ ಆದೇಶ ಹೊರಡಿಸಿದೆ. ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಮತ್ತು ಅರ್ಹ ಮತದಾರರನ್ನು ಸೇರ್ಪಡೆಗೊಳಿಸಲು ಈ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿ ಅಕ್ಟೋಬರ್ 1, 2026 ಅನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಲಾಗಿದ್ದು, ಅದರಂತೆ ಪ್ರಕ್ರಿಯೆಗಳು ನಡೆಯಲಿವೆ. ಪ್ರಮುಖ ಹಂತಗಳು ಮತ್ತು ದಿನಾಂಕಗಳು: ಚುನಾವಣಾ ಆಯೋಗದ ಆದೇಶದಂತೆ ಕರ್ನಾಟಕದಲ್ಲಿ ಪರಿಷ್ಕರಣಾ ಕಾರ್ಯವು ಈ ಕೆಳಗಿನಂತೆ ನಡೆಯಲಿದೆ: ಪೂರ್ವ ಸಿದ್ಧತೆ: ಜೂನ್ 20 ರಿಂದ ಜೂನ್ 29 ರವರೆಗೆ ಅಗತ್ಯ ಫಾರ್ಮ್ಗಳ ಸಿದ್ಧತೆ ಮತ್ತು ತರಬೇತಿ ನಡೆಯಲಿದೆ. ಮನೆ ಮನೆಗೆ ಭೇಟಿ: ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಬಿಎಲ್ಎಗಳು (BLA) ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು…
ಬಳ್ಳಾರಿ,ಮೇ 14: ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕರ ಜೀವ ರಕ್ಷಣೆಗಾಗಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನಾಗರಿಕರ ಪ್ರಾಣ ರಕ್ಷಣೆಯು ಕಾನೂನಿನ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು. ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆ, ಸಂಚಾರಿ ಪೊಲೀಸ್ ಠಾಣೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ, ಹೆಲ್ಮೆಟ್ ವಿತರಣೆ ಹಾಗೂ ಬೈಕ್ ರ್ಯಾಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾನೂನು ಎಂಬುದು ಸಾರ್ವಜನಿಕರ ಹಿತರಕ್ಷಣೆಗಾಗಿ ನಾವೇ ಮಾಡಿಕೊಂಡಿರುವುದು ಎಂಬ ಅರಿವು ಎಲ್ಲರಲ್ಲಿ ಇರಬೇಕು. ಹೆಲ್ಮೆಟ್ ಕಡ್ಡಾಯದಿಂದ ವಿನಾಯಿತಿ ನೀಡುವಂತೆ ಯಾರೂ ಮನವಿ ಮಾಡಬಾರದು. ವಿನಾಯಿತಿ ಕೇಳುವುದು ಎಂದರೆ ‘ಜನರ ಪ್ರಾಣ ರಕ್ಷಣೆ ಮಾಡಬೇಡಿ’ ಮತ್ತು ‘ಕುಟುಂಬದ ಬಗ್ಗೆ ಕಾಳಜಿ ಇಲ್ಲ’ ಎಂದು ಹೇಳಿದಂತೆ ಎಂದು ಅವರು ತಿಳಿಸಿದರು. ಬಳ್ಳಾರಿಯ ಜನರು ಈಗಾಗಲೇ ಸಕಾಲ ಸೇವೆ ಮತ್ತು ಜನಗಣತಿ ಕಾರ್ಯಗಳಲ್ಲಿ ರಾಜ್ಯದಲ್ಲೇ…
14 /05/ 2026ರ ಗುರುವಾರ ನಿತ್ಯ ಭವಿಷ್ಯ. ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಫಲಗಳು, ಶುಭ ಬಣ್ಣ, ಶುಭ ಸಂಖ್ಯೆ ಮತ್ತು ಇಂದಿನ ವಿಶೇಷತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮೇಷ – ಹೊಸ ಕಾರ್ಯಗಳಿಗೆ ಶುಭಾರಂಭದ ದಿನ. ಉದ್ಯೋಗದಲ್ಲಿ ಒತ್ತಡ ಇದ್ದರೂ ನಿಮ್ಮ ಪರಿಶ್ರಮಕ್ಕೆ ಮೆಚ್ಚುಗೆ ಸಿಗಬಹುದು. ಕುಟುಂಬದವರ ಜೊತೆ ಮಾತಿನಲ್ಲಿ ಸಹನೆ ಇರಲಿ. ಆರೋಗ್ಯದ ಕಡೆ ಸ್ವಲ್ಪ ಗಮನ ಅಗತ್ಯ. ವೃಷಭ – ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಹಳೆಯ ಸ್ನೇಹಿತರಿಂದ ಶುಭ ಸುದ್ದಿ ಸಿಗಬಹುದು. ವ್ಯಾಪಾರದಲ್ಲಿ ನಿಧಾನವಾದ ಲಾಭ ಕಂಡುಬರಬಹುದು. ಅನಾವಶ್ಯಕ ಖರ್ಚು ತಪ್ಪಿಸಿ. ಮಿಥುನ – ಆತ್ಮವಿಶ್ವಾಸ ಹೆಚ್ಚಾಗುವ ದಿನ. ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯೋಗಕ್ಕೆ ಬರಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ತಮ ಪ್ರಗತಿ. ಕುಟುಂಬದಲ್ಲಿ ಸಂತೋಷದ ವಾತಾವರಣ. ಕಟಕ – ಭಾವನಾತ್ಮಕವಾಗಿ ಸ್ವಲ್ಪ ಅಸ್ಥಿರತೆ ಕಾಣಬಹುದು. ಕೆಲಸಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಹಿರಿಯರ ಸಲಹೆ ಉಪಯುಕ್ತವಾಗಲಿದೆ. ಆರೋಗ್ಯದಲ್ಲಿ ವಿಶ್ರಾಂತಿ ಅಗತ್ಯ. ಸಿಂಹ – ಗೌರವ…
ಅಕ್ಷರ ಕಲಿಕೆ ಎನ್ನುವುದು ಜೀವನದ ಒಂದು ಸಾಧನವಷ್ಟೇ ಹೊರತು ಅದು ಜ್ಞಾನದ ಅಂತಿಮ ರೂಪವಲ್ಲ. ಇಂದಿನ ಆಧುನಿಕ ಸಮಾಜದಲ್ಲಿ ಅಕ್ಷರಸ್ಥರಲ್ಲೇ ಹೆಚ್ಚಾಗುತ್ತಿರುವ ಕ್ರೌರ್ಯ ಮತ್ತು ಅಮಾನವೀಯತೆಯನ್ನು ವಿಶ್ಲೇಷಿಸುತ್ತಾ, ನಿಜವಾದ ಜ್ಞಾನವು ವಿಶಾಲವಾದ ಹೃದಯದಲ್ಲಿ ಮಾತ್ರ ನೆಲೆಸುತ್ತದೆ ಎಂಬ ಸತ್ಯವನ್ನು ಪ್ರತಿಪಾದಿಸುವ ಲೇಖನ ಅನಕ್ಷರಸ್ಥರ ಬುದ್ದಿವಂತಿಕೆ ಪ್ರಶ್ನಿಸುವವರು ಅಕ್ಷರಸ್ಥರ ಮಾನವೀಯತೆಯನ್ನು ಪ್ರಶ್ನಿಸಬೇಕಲ್ಲವೇ…….. ……ಒಂದು ಟ್ವೀಟ್… ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ ಜೀವನ ಕೌಶಲ್ಯದ ಸಾಧನವೇ ಹೊರತು ಅದೇ ಜ್ಞಾನವಲ್ಲ, ಅರಿವಲ್ಲ, ಮೌಲ್ಯವಲ್ಲ, ಬದುಕಲ್ಲ. ಅಕ್ಷರ ಕಲಿಕೆ ಎಂಬುದು ಅಡುಗೆ ಮಾಡುವ, ಹೊಲಿಗೆ ಮಾಡುವ, ವಾಹನ ಚಾಲನೆ ಮಾಡುವ, ಮನೆ ಕಟ್ಟುವ, ಭೇಟೆಯಾಡುವ ರೀತಿಯ ಒಂದು ಕೌಶಲವೇ ಹೊರತು ಅದು ಎಲ್ಲವನ್ನೂ ಒಳಗೊಂಡ ವಿಶೇಷ ಅತಿಮಾನುಷ ಶಕ್ತಿಯೇನು ಅಲ್ಲ. ಅಕ್ಷರ ಕಲಿಯದೆಯೂ ವ್ಯಕ್ತಿತ್ವವಿದೆ, ಜ್ಞಾನವಿದೆ, ನಾಗರೀಕತೆಯಿದೆ ಬದುಕಿದೆ, ಹಾಗೆಯೇ ಅಕ್ಷರ ಕಲಿತೂ ಅಜ಼್ಞಾನವಿದೆ, ಮೋಸವಿದೆ, ಅಮಾನವೀಯತೆಯಿದೆ, ಅನಾಗರಿಕತೆ ಇದೆ…… ಅಕ್ಷರಸ್ಥರ ಈಗಿನ ಮೋಸ ವಂಚನೆ…
13 ಮೇ 2026 ಬುಧವಾರದ ನಿಮ್ಮ ರಾಶಿ ಫಲ ಇಲ್ಲಿದೆ. ಸಿಂಹ ರಾಶಿಯವರಿಗೆ ಧನ ಲಾಭ, ಮೇಷ ರಾಶಿಯವರಿಗೆ ಹೊಸ ಉದ್ಯೋಗದ ಅವಕಾಶ ಹಾಗೂ ಮಿಥುನ ರಾಶಿಯವರಿಗೆ ಮಿತ್ರರ ಸಹಕಾರ ದೊರೆಯಲಿದೆ. ನಿಮ್ಮ ಇಂದಿನ ಶುಭ ಸಂಖ್ಯೆ, ಬಣ್ಣ ಮತ್ತು ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ. ಮೇಷ – ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು ದೊರೆಯಬಹುದು. ಆರ್ಥಿಕ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದವರ ಜೊತೆ ಸಮಯ ಕಳೆಯುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ವೃಷಭ – ಹಳೆಯ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭದ ಸೂಚನೆ. ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ಮಿಥುನ – ಸ್ನೇಹಿತರಿಂದ ಸಹಕಾರ ಸಿಗಲಿದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಲು ಅನುಕೂಲಕರ ದಿನ. ಅನಗತ್ಯ ವಾದಗಳಿಂದ ದೂರವಿರಿ. ಕಟಕ – ಮನಸ್ಸಿನಲ್ಲಿ ಆತಂಕ ಹೆಚ್ಚಾಗಬಹುದು. ಕುಟುಂಬದಲ್ಲಿ ಸಣ್ಣ ಭಿನ್ನಾಭಿಪ್ರಾಯಗಳು ಕಂಡುಬರಬಹುದು. ಧೈರ್ಯ ಮತ್ತು ಸಮಾಧಾನದಿಂದ ನಡೆದುಕೊಳ್ಳಿ ಸಿಂಹ – ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ.…
12 ಮೇ 2026ರ ಇಂದಿನ ದಿನ ಭವಿಷ್ಯ: ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಫಲ ಇಲ್ಲಿದೆ. ಇಂದು ನಿಮ್ಮ ಉದ್ಯೋಗ, ಆರ್ಥಿಕ ಸ್ಥಿತಿ ಮತ್ತು ಕುಟುಂಬ ಜೀವನ ಹೇಗಿರಲಿದೆ? ಪೂರ್ಣ ಮಾಹಿತಿ ಇಲ್ಲಿದೆ ನೋಡಿ ಮೇಷ – ಕೆಲಸಗಳಲ್ಲಿ ಚುರುಕು ಕಾಣಿಸಿಕೊಳ್ಳುತ್ತದೆ. ಆರ್ಥಿಕ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಕುಟುಂಬದವರ ಜೊತೆ ಸಮಯ ಕಳೆಯುವ ಅವಕಾಶ ಸಿಗಬಹುದು. ವೃಷಭ – ಹೊಸ ಯೋಜನೆಗಳಿಗೆ ಚಾಲನೆ ನೀಡಲು ಒಳ್ಳೆಯ ದಿನ. ಉದ್ಯೋಗ ಕ್ಷೇತ್ರದಲ್ಲಿ ಮೆಚ್ಚುಗೆ ದೊರೆಯಬಹುದು. ಆರೋಗ್ಯದ ಕಡೆ ಗಮನ ಕೊಡಿ. ಮಿಥುನ – ಮಾತಿನ ಮೇಲೆ ನಿಯಂತ್ರಣ ಇರಲಿ. ಸ್ನೇಹಿತರ ಸಹಾಯದಿಂದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಹಣಕಾಸಿನಲ್ಲಿ ಜಾಗ್ರತೆ ಉತ್ತಮ. ಕಟಕ – ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಹಳೆಯ ನೆನಪುಗಳು ಮನಸ್ಸನ್ನು ಕಾಡಬಹುದು. ಕೆಲಸದಲ್ಲಿ ಸಹನೆ ಮುಖ್ಯ. ಸಿಂಹ – ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೊಸ ಪರಿಚಯಗಳು ಉಪಯುಕ್ತವಾಗಬಹುದು. ಅನಗತ್ಯ ಖರ್ಚು ತಪ್ಪಿಸಿ. ಕನ್ಯಾ – ದಿನದ ಆರಂಭ…
ನವೆಂಬರ್ 6, 2025…..ಒಂಬತ್ತು ತಿಂಗಳ ಹಿಂದೆ ಅಗಲಿದ ತಾಯಿಯ ನೆನಪು ಹಾಗೂ ತಾಯ್ತನದ ಬಗೆಗಿನ ಸಾಂಪ್ರದಾಯಿಕ ಆರಾಧನಾ ಮನೋಭಾವವನ್ನು ಮೀರಿ, ವಾಸ್ತವ ನೆಲೆಯಲ್ಲಿ ತಾಯಿಯ ವ್ಯಕ್ತಿತ್ವವನ್ನು ವಿಶ್ಲೇಷಿಸುವ ವಿವೇಕಾನಂದ ಎಚ್.ಕೆ. ಅವರ ವಿಶೇಷ ಲೇಖನ. ಎಂದಿನಂತೆ ಬೆಳಗ್ಗೆ ಬೇಗ ಎದ್ದು ಲೇಖನ ಸಿದ್ಧಪಡಿಸಿ ಪೋಸ್ಟ್ ಮಾಡಿ ಕ್ರೀಡಾಂಗಣಕ್ಕೆ ಹೋಗಲು ಸಿದ್ದನಾದೆ. ಈ ಮಧ್ಯೆ ಸುಮಾರು ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದ 95 ವರ್ಷದ ಅಮ್ಮನಿಗಾಗಿ ಕಾಫಿ ಮಾಡಿ, ನನಗಾಗಿ ಸಿರಿಧಾನ್ಯದ ಗಂಜಿ ಮಾಡಿ ಟೇಬಲ್ ಮೇಲೆ ಇಟ್ಟು ಅಮ್ಮನಿಗೆ ಕಾಫಿ ಕುಡಿಸಲು ಹೋದೆ. ಒಂದು ವರ್ಷದಿಂದ ಸ್ವಲ್ಪ ಮಾತ್ರ ಆಹಾರ ತೆಗೆದುಕೊಳ್ಳುತ್ತಿದ್ದ ಅವರು ಕೆಲವು ತಿಂಗಳಿನಿಂದ ಕೇವಲ ದ್ರವಾಹಾರ ಮಾತ್ರ ಸೇವಿಸುತ್ತಿದ್ದರು. ಆರೋಗ್ಯ ದಿನದಿಂದ ದಿನಕ್ಕೆ ಕುಸಿಯುತ್ತಿತ್ತು. ಆದ್ದರಿಂದ ವಾರಕ್ಕೊಮ್ಮೆ ಗ್ಲುಕೋಸ್ ಹಾಕಿಸುತ್ತಿದ್ದೆ. ಈ ಬಾರಿ ಮೂರು ದಿನದ ಹಿಂದೆ ಹಾಕಿಸಿದ್ದೆ. ಆದರೂ ಅಷ್ಟೇನು ಚೇತರಿಕೆ ಕಂಡು ಬಂದಿರಲಿಲ್ಲ. ಹಿಂದಿನ ದಿನ ಕಾಫಿ ಕೊಡಲು ಹೋದಾಗ ಬೇಡವೆಂದು ನಿರಾಕರಿಸಿದ್ದರು. ಬೆಳಗ್ಗೆ ಏನಾದರೂ…
Subscribe to Updates
Get the latest creative news from FooBar about art, design and business.