Author: Times Of Bayaluseeme Staff

24 ಏಪ್ರಿಲ್ 2026 ರ ನಿತ್ಯ ಭವಿಷ್ಯ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಫಲಗಳು. ನಿಮ್ಮ ಉದ್ಯೋಗ, ಆರ್ಥಿಕತೆ ಮತ್ತು ಕುಟುಂಬ ಜೀವನದ ವಿವರವಾದ ಮಾಹಿತಿ ಇಲ್ಲಿದೆ. ♈ ಮೇಷ (Aries) ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಪ್ರಗತಿ ಕಾಣಬಹುದು. ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ದಿನ. ಕುಟುಂಬದಲ್ಲಿ ಸಂತೋಷದ ವಾತಾವರಣ. ♉ ವೃಷಭ (Taurus) ಆರ್ಥಿಕ ವಿಷಯಗಳಲ್ಲಿ ಜಾಗ್ರತೆ ಅಗತ್ಯ. ಅತಿಯಾದ ಖರ್ಚು ತಪ್ಪಿಸಿ. ಉದ್ಯೋಗದಲ್ಲಿ ಸಣ್ಣ ಒತ್ತಡ ಇದ್ದರೂ ಸಹನಶೀಲತೆ ಉಳಿಸಿಕೊಳ್ಳಿ. ♊ ಮಿಥುನ (Gemini) ಸಂಪರ್ಕಗಳು ಮತ್ತು ಸ್ನೇಹಗಳು ಇಂದು ನಿಮಗೆ ಲಾಭ ತರುತ್ತವೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಸಹಾಯ ಮಾಡಬಹುದು. ♋ ಕರ್ಕಾಟಕ (Cancer) ಮನಸ್ಸಿಗೆ ಶಾಂತಿ ಅಗತ್ಯ. ಅನಾವಶ್ಯಕ ಚಿಂತನೆಗಳಿಂದ ದೂರವಿರಿ. ಆರೋಗ್ಯದ ಕಡೆ ಗಮನ ಕೊಡಿ. ♌ ಸಿಂಹ (Leo) ನಿಮ್ಮ ನಾಯಕತ್ವ ಗುಣಗಳು ಮೆರೆದಾಡುತ್ತವೆ. ಕೆಲಸದ ಜಾಗದಲ್ಲಿ ಪ್ರಶಂಸೆ ಸಿಗಬಹುದು. ಹೊಸ ಅವಕಾಶಗಳು ಬರಬಹುದು. ♍ ಕನ್ಯಾ (Virgo) ಇಂದು…

Read More

2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಏಪ್ರಿಲ್‌ 23ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಿಸಲ್ಟ್​​ ಸಂಬಂಧಿತ ಮಾಹಿತಿ ನೀಡಿದ್ದಾರೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1 ಮಂದಿ ಪಾಸ್​​ ಆಗಿದ್ದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು. ದಕ್ಷಿಣ ಕನ್ನಡ ಫಸ್ಟ್​​, ಕಲಬುರಗಿ ಲಾಸ್ಟ್​​ ಈ ಬಾರಿಯ ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಜಿಲ್ಲಾವಾರು ಫಲಿತಾಂಶ ದಕ್ಷಿಣ ಕನ್ನಡ ಜಿಲ್ಲೆ- 98.40% ಉಡುಪಿ – 98.18% ಉತ್ತರ ಕನ್ನಡ- 98.09% ಹಾಸನ- 97.51% ಮಂಡ್ಯ- 97.45% ಶಿರಸಿ- 97.21%…

Read More

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ರಾಜ್ಯದಲ್ಲಿ ಹೊಸ ಇತಿಹಾಸ ಬರೆದಿದೆ. ಈ ಬಾರಿ ಶೇ 94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿ ದಾಖಲೆಯ ಸಾಧನೆ ಮಾಡಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಚೇರಿಯಲ್ಲಿ ಫಲಿತಾಂಶ ಪ್ರಕಟಿಸಿ ವಿವರಗಳನ್ನು ಹಂಚಿಕೊಂಡರು. ಒಟ್ಟು 7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 7,24,794 ಮಂದಿ ಯಶಸ್ಸು ಸಾಧಿಸಿದ್ದಾರೆ. ಈ ಬಾರಿ ಏಳು ಮಂದಿ ವಿದ್ಯಾರ್ಥಿಗಳು 625ರಲ್ಲಿ 625 ಅಂಕಗಳನ್ನು ಪಡೆದು ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ. ದಾವಣಗೆರೆಯ ಭರತ್, ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರದ ಧನುಷ್, ಉಡುಪಿಯ ಪ್ರೀತಂ, ಚಿಕ್ಕೋಡಿಯ ಪ್ರಾರ್ಥನಾ, ವಿಜಯಪುರದ ಸೌಜನ್ಯಾ ಹಾಗೂ ರಾಯಚೂರಿನ ಸುಖದೇವ್ ಪೂರ್ಣ ಅಂಕ ಪಡೆದ ಸಾಧಕರಾಗಿದ್ದಾರೆ. ಹಾಗೆಯೇ ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 96.18ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದು, ಬಾಲಕರ ಪಾಸ್ ಪ್ರಮಾಣ ಶೇ 91.94ರಷ್ಟಿದೆ. 3,92,922 ಬಾಲಕಿಯರ ಪೈಕಿ 3,77,922 ಮಂದಿ ಹಾಗೂ 3,77,287 ಬಾಲಕರ…

Read More

ಬೇಸಿಗೆ ಸಮಯದಲ್ಲಿ ಕರ್ಬುಜ ಹಣ್ಣು (Muskmelon / Cantaloupe) ಸೇವಿಸುವುದು ದೇಹಕ್ಕೆ ತುಂಬಾ ಉಪಯುಕ್ತ. ಇದು ತಂಪು ನೀಡುವುದಷ್ಟೇ ಅಲ್ಲ, ಹಲವಾರು ಆರೋಗ್ಯ ಲಾಭಗಳನ್ನು ಕೊಡುತ್ತದೆ. 🟠 ಕರ್ಬುಜ ಹಣ್ಣಿನ ಉಪಯೋಗಗಳು: 1. ದೇಹಕ್ಕೆ ತಂಪು ನೀಡುತ್ತದೆ ಕರ್ಬುಜದಲ್ಲಿ ನೀರಿನ ಅಂಶ (ಸುಮಾರು 85–90%) ಹೆಚ್ಚು ಇರುವುದರಿಂದ ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಬೇಸಿಗೆಯ ಉಷ್ಣತೆಯಿಂದ ರಕ್ಷಣೆ ನೀಡುತ್ತದೆ. 2. ಡೀಹೈಡ್ರೇಷನ್ ತಪ್ಪಿಸುತ್ತದೆ ಬೆವರು ಮೂಲಕ ದೇಹದಿಂದ ನೀರು ಕಡಿಮೆಯಾಗುವಾಗ, ಕರ್ಬುಜ ಸೇವನೆ ದೇಹದ ನೀರಿನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. 3. ಜೀರ್ಣಕ್ರಿಯೆಗೆ ಸಹಾಯಕ ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. 4. ಚರ್ಮದ ಆರೈಕೆ ವಿಟಮಿನ್ A ಮತ್ತು C ಇರುವುದರಿಂದ ಚರ್ಮ ತಾಜಾ, ಹೊಳೆಯುವಂತೆ ಮಾಡುತ್ತದೆ. 5. ತೂಕ ನಿಯಂತ್ರಣಕ್ಕೆ ಸಹಾಯಕ ಕಡಿಮೆ ಕ್ಯಾಲೊರಿಗಳಿರುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಇದು ಒಳ್ಳೆಯ ಆಹಾರ. 6. ಹೃದಯ ಆರೋಗ್ಯಕ್ಕೆ ಉತ್ತಮ ಪೊಟ್ಯಾಸಿಯಂ ಇರುವುದರಿಂದ ರಕ್ತದ ಒತ್ತಡ ನಿಯಂತ್ರಣಕ್ಕೆ…

Read More

​🔮 23 ಏಪ್ರಿಲ್ 2026ರ ನಿತ್ಯ ಭವಿಷ್ಯ: ಇಂದು ನಿಮ್ಮ ಅದೃಷ್ಟ ಹೇಗಿರಲಿದೆ? ಯಾವ ರಾಶಿಯವರಿಗೆ ಆರ್ಥಿಕ ಲಾಭ? ಮೇಷದಿಂದ ಮೀನದವರೆಗೆ ನಿಮ್ಮ ಇಂದಿನ ದಿನದ ಸಮಗ್ರ ಫಲ ಇಲ್ಲಿದೆ. ತಪ್ಪದೇ ಓದಿ. ಮೇಷ (Aries) ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಹೊಸ ಪ್ರಯತ್ನಗಳಿಗೆ ಶುಭ ಸಮಯ. ಕುಟುಂಬದ ಬೆಂಬಲ ಸಿಗುತ್ತದೆ. ವೃಷಭ (Taurus) ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅನಾವಶ್ಯಕ ಖರ್ಚು ತಪ್ಪಿಸಿ. ಆರೋಗ್ಯದ ಕಡೆ ಗಮನ ಕೊಡಿ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಸಂತೋಷ ತರಲಿದೆ. ಮಿಥುನ (Gemini) ಸಂವಹನದಲ್ಲಿ ಜಾಗರೂಕರಾಗಿರಿ. ಮಾತಿನಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಬರಬಹುದು. ಕಟಕ (Cancer) ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ದಿನ. ಮನಸ್ಸಿಗೆ ಶಾಂತಿ ಸಿಗುತ್ತದೆ. ಆರ್ಥಿಕವಾಗಿ ಲಾಭದ ಸೂಚನೆ ಇದೆ. ಸಿಂಹ (Leo) ನಿಮ್ಮ ನಾಯಕತ್ವ ಗುಣಗಳು ಹೊಳೆಯುವ ದಿನ. ಕೆಲಸದ ಜಾಗದಲ್ಲಿ ಪ್ರಶಂಸೆ ಸಿಗಬಹುದು. ಹೊಸ ಪರಿಚಯಗಳು…

Read More

ಚಿತ್ರದುರ್ಗ : ಭೋಧನೆಯಲ್ಲಿ ರಂಗಭೂಮಿಯ ಕೌಶಲ್ಯಗಳ ಮಹತ್ವದ ಅರಿವಿರಬೇಕು. ದಾರ್ಶನಿಕರ ಜೀವನ ಚರಿತ್ರೆಗಳ ಬದುಕಿನ ಮೌಲ್ಯಗಳು ಉತ್ತಮ ಶಿಕ್ಷಕನ ಸ್ವತ್ತಾಗಿರಬೇಕು.ಶಿಕ್ಷಕರಿಗೆ ಬೋಧನಾ ಪ್ರೇರಣೆ ನೀಡುವುದರಿಂದ ಶೈಕ್ಷಣಿಕ ಗುಣಮಟ್ಟದ ಉತ್ತಮ ಫಲಿತಾಂಶವನ್ನು ಕಾಣಬಹುದು ಎಂದು ಶಿಕ್ಷಣತಜ್ಞ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ತಿಳಿಸಿದರು. ನಗರದ ಕೋಟೆರಸ್ತೆಯಲ್ಲಿರುವ ರಾಘವೇಂದ್ರ ಶಿಕ್ಷಣ ವಿದ್ಯಾಲಯದಲ್ಲಿ ಬುಧವಾರ ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ದ್ವಿತೀಯ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಶಿಕ್ಷಣದಲ್ಲಿ ರಂಗಕಲೆ -2026 ತರಬೇತಿ ಕಾರ್ಯಾಗಾರ, ರಂಗಗೀತೆ, ಉಪನ್ಯಾಸ, ಕವಿಕಾವ್ಯ ಪರಿಚಯ ಮತ್ತು ನಾಟಕ ಪ್ರದರ್ಶನದಲ್ಲಿ ಶೈಕ್ಷಣಿಕ ರಂಗಕಲೆಯ ಮಹತ್ವ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಅಂಕಗಳಿಗೆ ಮಾತ್ರ ಸೀಮಿತವಾಗದೆ ಅಂತರಂಗ ಮತ್ತು ಬಹಿರಂಗದ ಸದೃಢವಾದ ಶಿಕ್ಷಣದ ಸೌಂದರ್ಯ ಪ್ರಜ್ಞೆಯನ್ನು ಸಂಪಾದಿಸಬೇಕು ಎಂದರು. ಆಳವಾದ ಅಧ್ಯಯನ ಬೋಧನೆಗೆ ಅನುಕೂಲವಾಗುತ್ತದೆ. ಮಕ್ಕಳಿಗೆ ಮುದನೀಡುವ ಶಿಕ್ಷಕರ ವಾಕ್‌ಚಾತುರ್ಯ ಪರಿಣಾಮಕಾರಿ ಕಲಿಕೆಗೆ ಸಹಾಯಕವಾಗುತ್ತದೆ. ಶಿಕ್ಷಕರ ದೇಹದ ನಿಲುವು, ಸ್ಪಷ್ಟವಾದ ಮಾತಿನ ಏರಿಳಿತ, ಪಾಠೋಪಕರಣಗಳ ಬಳಕೆ ಮತ್ತು ಭಾವಾಭಿವ್ಯಕ್ತಿ…

Read More

ಚಳ್ಳಕೆರೆ-22 ದಿನೆ,ದಿನೇ ಏರುತ್ತಿರುವ ನೆತ್ತಿ ಸುಡುವ ಬಿಸಿಲು, ಬಾನಿನಿಂದ ಧರೆಗೆ ಬೆಂಕಿ ಸುರಿಯುವಷ್ಟು ಉಷ್ಣತೆ ಪ್ರತಿನಿತ್ಯ ಭಾಸವಾಗಿತ್ತಿದೆ. ಜನರು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ತಂಪುಪಾನಿಯ, ಕಲಂಗಡಿ, ಎಳನೀರು, ತಾಳೆಕಾಯಿಯತ್ತ ಮೊರೆ ಹೋಗುತ್ತಿದ್ದಾರೆ. ಇದರ ಜೊತೆಯಲ್ಲಿ ತಾಲೂಕಿನ ಅತ್ಯಂತ 40 ಡಿಗ್ರಿ ಎಷ್ಟು ತಾಪಮಾನ ಹೆಚ್ಚಿ ಜನ, ಜಾನುವಾರುಗಳನ್ನ ಹೈರಾಣಾಗಿಸಿದೆ. ಪ್ರತಿನಿತ್ಯ ಬಿಸಿಲು ಏರಿದಂತೆ ಧರೆ ಕಾದಕಾವಲಿಯಂತಾಗಿ ಉಷ್ಣಾಂಶ ಹೆಚ್ಚಿದೆ, ಬಿಸಿಗಾಳಿಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳು ಸಹ ಬಿಸಿಲಿನ ತಾಪಕ್ಕೆ ನರಳಿ ಹೋಗಿವೆ. ಉಷ್ಟಾಂಶ ಏರಿಕೆಯಿಂದ ಆರೋಗ್ಯದ ಮೇಲೆಕೆಟ್ಟ ಪರಿಣಾಮ ಬೀರುತ್ತಿದೆ. ಸುಡುಬಿಸಿಲಿನಿಂದ ತಪ್ಪಿಸಿಕೊಳ್ಳುಲು ನೆರಳು ಹುಡುಕಾಟ ಸ್ಥಿತಿ ನಗರದಲ್ಲಿದೆ. ನೀರು, ನೆರಳಿಗೆ ಹುಡುಕಾಟ ;- ಆಂದ್ರಗಡಿಭಾಗಕ್ಕೆ ಹೊಂದಿಕೊಂಡಿರುವ ಚಳ್ಳಕೆರೆ ತಾಲ್ಲೂಕಿಗೆ ಪ್ರತಿನಿತ್ಯ ಸುತ್ತಮುತ್ತಲ 40ಗ್ರಾಮಗಳಿಂದ ನೂರಾರು ಜನರು ವಿವಿಧ ಕೆಲಸ ಕಾರ್ಯಗಳಿಗೆ, ಶಾಲಾ ಲಾಲೇಜಿಗೆ ಬರುತ್ತಾರೆ. ನಗರಕ್ಕೆ ಬರುವ ಜನರಿಗೆ ನೀರು, ನೆರಳಿನ ವ್ಯವಸ್ಥೆಯೇ ಇಲ್ಲವಾಗಿದೆ. ಬಿಸಿಲಿಂದ ಬರುವ ಪ್ರಯಾಣಿಕರಿಗೆ, ಜನರಿಗೆ ನಗರದ ಯಾವ…

Read More

ಚಿತ್ರದುರ್ಗ: ನೆರೆಯ ಆಂಧ್ರ ಪ್ರದೇಶದಲ್ಲಿ ತನ್ನದೇ ಆದ ರಾಜಕೀಯ ಪ್ರಭಾವ ಮೂಡಿಸಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಾರಥ್ಯದ ‘ಜನಸೇನಾ ಪಕ್ಷ’ ಈಗ ಚಿತ್ರದುರ್ಗದ ಮೂಲಕ ತಳಮಟ್ಟದಿಂದ ಪಕ್ಷ ಸಂಘಟನೆಗೆ ಸಜ್ಜಾಗಿದೆ ಎಂದು ಪಕ್ಷದ ಸದಸ್ಯ ಡಿ.ಬಸವರಾಜ್ (ಬಿ.ಟಿ.ರಾಜ್) ತಿಳಿಸಿದ್ದಾರೆ. ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಕೋಟೆನಾಡು ಚಿತ್ರದುರ್ಗದ ಮೂಲಕ ಪಕ್ಷವು ರಾಜ್ಯ ಪ್ರವೇಶದ ಅಧಿಕೃತ ಘೋಷಣೆ ಮಾಡುತ್ತಿದ್ದು, ಇದರೊಂದಿಗೆ ಸದಸ್ಯತ್ವ ಅಭಿಯಾನಕ್ಕೂ ಭರ್ಜರಿ ಚಾಲನೆ ನೀಡಲಾಗುತ್ತಿದೆ. ಚಿತ್ರದುರ್ಗದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್‌ಜಿ ಕನ್ವೆನ್ಶನ್ ಹಾಲ್ ನಲ್ಲಿ ಏಪ್ರಿಲ್ 25 (ಶನಿವಾರ) ರಂದು ಬೆಳಿಗ್ಗೆ 9.30ರಿಂದ ಈ ಮಹತ್ವದ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಂಧ್ರ ಪ್ರದೇಶ ವಿಧಾನ ಪರಿಷತ್ ಸದಸ್ಯ ನಾಗಬಾಬು ಹಾಗೂ ಜನಾಸೇನಾ ಪಕ್ಷದ ಆಂಧ್ರ ಪ್ರದೇಶ ಪ್ರಧಾನ ಕಾರ್ಯದರ್ಶಿ ರಾಮ್ ತಲ್ಲೂರಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪಕ್ಷದ ಸಂಘಟನೆಗೆ ಬಲ ನೀಡುವ ಪ್ರಮುಖ ಹುದ್ದೆಗಳ ಘೋಷಣೆ ನಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಆಯಾಮಗಳನ್ನು ತರುವ ಪ್ರಯತ್ನಕ್ಕೆ ಚಾಲನೆ ಸಿಗಲಿದೆ.…

Read More

ಲೇಸರ್ ಕಿರಣಗಳ ಈ ಆಧುನಿಕ ಯುಗದಲ್ಲಿ ಇನ್ನೂ ಪಟಾಕಿ ದುರಂತಗಳಿಗೆ ಬಡ ಜೀವಗಳು ಬಲಿಯಾಗುತ್ತಿರುವುದು ನಮ್ಮ ಸಮಾಜದ ಅಸಹಾಯಕತೆಯನ್ನು ತೋರಿಸುತ್ತದೆ. ಪಟಾಕಿ ನಿಷೇಧದ ಅಗತ್ಯತೆ ಮತ್ತು ಪರಿಸರ ಸ್ನೇಹಿ ಆಚರಣೆಯ ಬಗ್ಗೆ ವಿವೇಕಾನಂದ ಎಚ್. ಕೆ. ಅವರ ವಿಶೇಷ ಲೇಖನ. ಲೇಸರ್ ಗಳ ಯುಗದಲ್ಲಿ ಪಟಾಕಿಗಳಿಗಾಗಿ ಜೀವ ತೆರುತ್ತಿರುವ ಸಮಾಜದಲ್ಲಿ ನಾವಿದ್ದೇವೆ ಎಂದರೆ ಎಷ್ಟು ಅನಾಗರಿಕ ಸಮಾಜ ನಮ್ಮದು ಎಂದು ಊಹಿಸಿ. ಒಂದರ ಹಿಂದೆ ಒಂದು ಪಟಾಕಿ ದುರಂತಗಳು ದೇಶದಾದ್ಯಂತ ಸುದ್ದಿಯಾಗುತ್ತಿವೆ. ಅದನ್ನು ಕೇಳಿ ಕರುಳು ಹಿಂಡಿದಂತಾಗುತ್ತಿದೆ. ಬಹುತೇಕ ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ನಿಸ್ಸಂಶಯವಾಗಿ ಕರೆಯಬಹುದು. ಹಿಂದೆ ವಿದ್ಯುತ್ ಇಲ್ಲದಿದ್ದಾಗ ಬೆಳಕೆಂಬುದು ಅಪ್ಯಾಯಮಾನ ಆನಂದವನ್ನು ನೀಡುತ್ತಿತ್ತು. ಆಕಾಶದಲ್ಲಿಯ ಹುಣ್ಣಿಮೆಯ ಚಂದ್ರ, ಆ ಮಿಂಚಿನ ನಕ್ಷತ್ರಗಳು ನಮಲ್ಲಿ ನವೋಲ್ಲಾಸ ತುಂಬುತ್ತಿದ್ದವು. ಮನಸ್ಸು ಚೇತೋಹಾರಿ ಆಗಿರುತ್ತಿತ್ತು. ತದನಂತರ ಒಂದಷ್ಟು ರಾತ್ರಿಯ ಫೈರ್ ಕ್ಯಾಂಪ್ ಗಳು, ಬುಡ್ಡಿ ದೀಪಗಳು, ಕ್ಯಾಂಡಲ್ ಗಳು ನಮಗೆ ಬೆಳಕಿನ ಸುಂದರ ಅನುಭವ ನೀಡುತ್ತಿದ್ದವು ಅನಂತರ ವಿದ್ಯುತ್ ಸಂಶೋಧನೆಯಾಯಿತು.…

Read More

ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಹಣ್ಣು (Watermelon) ಸೇವಿಸುವುದು ದೇಹಕ್ಕೆ ತುಂಬಾ ಉಪಯುಕ್ತ. ಇದು ಕೇವಲ ತಂಪು ನೀಡುವುದಲ್ಲ, ಹಲವಾರು ಆರೋಗ್ಯ ಲಾಭಗಳನ್ನು ಕೊಡುತ್ತದೆ. 🍉 ಕಲ್ಲಂಗಡಿ ಹಣ್ಣಿನ ಉಪಯೋಗಗಳು: 1. ದೇಹಕ್ಕೆ ತಂಪು ನೀಡುತ್ತದೆ ಕಲ್ಲಂಗಡಿಯಲ್ಲಿ ಸುಮಾರು 90% ಕ್ಕಿಂತ ಹೆಚ್ಚು ನೀರಿನ ಅಂಶವಿರುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಡಿಹೈಡ್ರೇಶನ್ ತಪ್ಪಿಸಲು ಸಹಾಯಕ. 2. ನೀರಿನ ಕೊರತೆ ನಿವಾರಣೆ ಬೆವರು ಮೂಲಕ ಕಳೆದುಹೋಗುವ ನೀರನ್ನು ಪೂರೈಸುತ್ತದೆ. ದೇಹ ಹೈಡ್ರೇಟ್ ಆಗಿರಲು ಉತ್ತಮ. 3. ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಇದಲ್ಲಿರುವ ವಿಟಮಿನ್ A ಮತ್ತು C ಚರ್ಮವನ್ನು ಆರೋಗ್ಯಕರವಾಗಿಡುತ್ತವೆ. ಚರ್ಮದ ಹೊಳಪು ಹೆಚ್ಚುತ್ತದೆ. 4. ಹೃದಯ ಆರೋಗ್ಯಕ್ಕೆ ಸಹಾಯಕ ಕಲ್ಲಂಗಡಿಯಲ್ಲಿ ಲೈಕೋಪೀನ್ (Lycopene) ಇರುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. 5. ಜೀರ್ಣಕ್ರಿಯೆ ಸುಧಾರಣೆ ನೀರಿನ ಅಂಶ ಮತ್ತು ಫೈಬರ್ ಇರುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. 6. ತೂಕ ನಿಯಂತ್ರಣಕ್ಕೆ ಸಹಾಯ ಕ್ಯಾಲೊರಿಗಳು ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳುವವರಿಗೆ ಉತ್ತಮ ಆಹಾರ. 7.…

Read More