Author: Times Of Bayaluseeme Staff

22 ಏಪ್ರಿಲ್ 2026ರ ನಿತ್ಯ ಭವಿಷ್ಯ: ಇಂದು ನಿಮ್ಮ ರಾಶಿಫಲ ಹೇಗಿದೆ? ಮೇಷ ರಾಶಿಯವರಿಗೆ ಹೊಸ ಕೆಲಸದ ಚಾಲನೆ, ವೃಷಭಕ್ಕೆ ಆರ್ಥಿಕ ಜಾಗ್ರತೆ ಹಾಗೂ ಮೀನ ರಾಶಿಯವರಿಗೆ ಧನಲಾಭದ ಮುನ್ಸೂಚನೆ ಇದೆ. ಪೂರ್ಣ ವಿವರಗಳಿಗಾಗಿ ಓದಿ. ಮೇಷ (Aries) ಇಂದು ನಿಮ್ಮಲ್ಲಿ ಉತ್ಸಾಹ ಹೆಚ್ಚಿರುತ್ತದೆ. ಹೊಸ ಕೆಲಸಗಳಿಗೆ ಚಾಲನೆ ನೀಡಲು ಉತ್ತಮ ದಿನ. ಆದರೆ ತುರ್ತು ನಿರ್ಧಾರಗಳನ್ನು ತಪ್ಪಿಸಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ವೃಷಭ (Taurus) ಆರ್ಥಿಕವಾಗಿ ಸ್ವಲ್ಪ ಜಾಗ್ರತೆ ಅಗತ್ಯ. ಅನಾವಶ್ಯಕ ಖರ್ಚುಗಳನ್ನು ನಿಯಂತ್ರಿಸಿ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಸಹಕಾರ ಉತ್ತಮವಾಗಿರುತ್ತದೆ. ಮಿಥುನ (Gemini) ಸ್ನೇಹಿತರ ಸಹಾಯದಿಂದ ಹೊಸ ಅವಕಾಶಗಳು ದೊರೆಯಬಹುದು. ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ಪ್ರಯಾಣದ ಯೋಗವಿದೆ. ಕಟಕ (Cancer) ಮನಸ್ಸಿನಲ್ಲಿ ಸ್ವಲ್ಪ ಅಶಾಂತಿ ಕಾಣಿಸಬಹುದು. ಧೈರ್ಯದಿಂದ ಮುಂದೆ ಸಾಗಿದರೆ ಎಲ್ಲವೂ ಸರಿಯಾಗುತ್ತದೆ. ಆರೋಗ್ಯದ ಕಡೆ ಗಮನ ಕೊಡಿ. ಸಿಂಹ (Leo) ಇಂದು ನಿಮ್ಮ ನಾಯಕತ್ವ ಗುಣ ಮೆರೆದಿಡುತ್ತದೆ. ಕೆಲಸದಲ್ಲಿ ಮೆಚ್ಚುಗೆ ಸಿಗುತ್ತದೆ. ಹಿರಿಯರಿಂದ ಮಾರ್ಗದರ್ಶನ ದೊರೆಯಲಿದೆ.…

Read More

ಇಂದಿನ ರಾಶಿ ಭವಿಷ್ಯ (21/04/2026): ಮೇಷ ರಾಶಿಯವರಿಗೆ ಹೊಸ ಉತ್ಸಾಹ, ವೃಷಭ ರಾಶಿಯವರಿಗೆ ಕೌಟುಂಬಿಕ ಸುಖ ಮತ್ತು ಸಿಂಹ ರಾಶಿಯವರಿಗೆ ಉದ್ಯೋಗದಲ್ಲಿ ಮೆಚ್ಚುಗೆ! ನಿಮ್ಮ ರಾಶಿಯ ಇಂದಿನ ಭವಿಷ್ಯ ಮತ್ತು ಶುಭ-ಅಶುಭಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ. ಮೇಷ (Aries): ಇಂದು ನಿಮ್ಮಲ್ಲಿ ಹೊಸ ಉತ್ಸಾಹ ಕಾಣಿಸಿಕೊಳ್ಳಲಿದೆ. ಕೆಲಸದಲ್ಲಿ ಮುಂದಾಳತ್ವ ತೋರಿಸಿದರೆ ಯಶಸ್ಸು ನಿಮ್ಮದಾಗುತ್ತದೆ. ಹಣಕಾಸಿನಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ವೃಷಭ (Taurus): ಕುಟುಂಬದ ಜೊತೆ ಉತ್ತಮ ಸಮಯ ಕಳೆಯುವ ಅವಕಾಶ ಸಿಗಲಿದೆ. ಹಳೆಯ ಸಮಸ್ಯೆಗಳು ನಿವಾರಣೆಯಾಗುವ ಸೂಚನೆ ಇದೆ. ಆರೋಗ್ಯದ ಕಡೆ ಗಮನ ಕೊಡಿ. ಮಿಥುನ (Gemini): ನಿಮ್ಮ ಮಾತಿನ ಕೌಶಲ್ಯ ಇಂದು ನಿಮಗೆ ಸಹಾಯ ಮಾಡಲಿದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯುಕ್ತವಾಗಬಹುದು. ಸಣ್ಣ ಪ್ರಯಾಣ ಸಾಧ್ಯ. ಕಟಕ (Cancer): ಮನಸ್ಸಿನಲ್ಲಿ ಗೊಂದಲ ಇರಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆಯುವುದು ಉತ್ತಮ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಸಿಂಹ (Leo): ಉದ್ಯೋಗದಲ್ಲಿ ಮೆಚ್ಚುಗೆ ದೊರೆಯಲಿದೆ. ನಿಮ್ಮ ಪರಿಶ್ರಮಕ್ಕೆ ಫಲ…

Read More

ಬೆಂಗಳೂರು: ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಟೈಮ್ಸ್ ಆಫ್ ಬಯಲುಸೀಮೆ’ ಪತ್ರಿಕೆಯ ‘ಬಸವ ಬಯಲು – ಜನಮನದ ಬೆಳಕು’ ವಿಶೇಷಾಂಕವನ್ನು ಬಿಡುಗಡೆ ಮಾಡಿದರು. ಬಸವಣ್ಣನವರ ತತ್ವಗಳು ಮತ್ತು ಶರಣರ ಜೀವನ ಮೌಲ್ಯಗಳನ್ನು ಸಾರುವ ಈ ಸಂಚಿಕೆಯ ಪೂರ್ಣ ವಿವರ ಇಲ್ಲಿದೆ. ಬಸವ ಜಯಂತಿಯ ಪಾವನ ಕ್ಷಣಗಳಲ್ಲಿ, ಕಾಲದ ಮಡಿಲಲ್ಲಿ ಸದಾ ಹೊಸದಾಗಿ ಅರಳುವ ಜಗಜ್ಯೋತಿ ಬಸವಣ್ಣನವರ ಚಿಂತನೆಗಳಿಗೆ ನಮನ ಸಲ್ಲಿಸುವಂತೆ ಟೈಮ್ಸ್ ಆಫ್ ಬಯಲುಸೀಮೆ ಕನ್ನಡ ದಿನಪತ್ರಿಕೆ ಹೊರ ತಂದಿರುವ ‘ಬಸವ ಬಯಲು – ಜನಮನದ ಬೆಳಕ’ ವಿಶೇಷಾಂಕವು ಸೋಮವಾರ ನಗರದಲ್ಲಿ ಅನಾವರಣಗೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಯಲ್ಲಿ ಬಿಡುಗಡೆಗೊಂಡ ಈ ಸಂಚಿಕೆ, ಕೇವಲ ಒಂದು ಪ್ರಕಾಶನವಾಗಿಯೇ ಅಲ್ಲ, ಬಸವ ತತ್ವಗಳ ಬೆಳಕನ್ನು ಮತ್ತೆ ಜನಜೀವನದೊಳಗೆ ಹರಡುವ ಸಂಕೇತವಾಗಿ ಮೂಡಿಬಂದಿತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತಿ ಈ ಅನಾವರಣ ಕ್ಷಣ, ಬಸವ ಜಯಂತಿಯ ಅರ್ಥವನ್ನು ಮತ್ತಷ್ಟು ಆಳವಾಗಿ ಮನಸ್ಸಿಗೆ ಮುದ್ರಿಸುವಂತಿತ್ತು. ಪದಗಳಲ್ಲದೇ, ಆ ಕ್ಷಣದ ಮೌನವೇ…

Read More

ಅಕ್ಷಯ ತೃತೀಯದ ಕೊಳ್ಳುಬಾಕ ಸಂಸ್ಕೃತಿಯ ಅಬ್ಬರದಲ್ಲಿ ಬಸವಣ್ಣನವರ ಸಮಾನತೆಯ ಆಶಯಗಳು ಮರೆಯಾಗುತ್ತಿವೆಯೇ? ಆಧುನಿಕ ಸೌಲಭ್ಯಗಳ ನಡುವೆಯೂ ಮನುಷ್ಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆಯೇ? ವಿವೇಕಾನಂದ ಎಚ್. ಕೆ. ಅವರ ವಿಶೇಷ ಲೇಖನ ಇಲ್ಲಿದೆ. ನಮ್ಮ ಹಿಂದಿನ ತಲೆಮಾರಿನವರಿಗೆ ಹೋಲಿಸಿಕೊಂಡರೆ ಎಷ್ಟೊಂದು ಅದೃಷ್ಟವಂತರು ನಾವು. ಎಲ್ಲ ವಿಷಯದಲ್ಲೂ ಎಷ್ಟೊಂದು ಆಯ್ಕೆಗಳಿವೆ ನಮಗೆ. ಹಿಂದೆ ಒಂದು ಹೊತ್ತು ಊಟಕ್ಕೂ ಗತಿ ಇರಲಿಲ್ಲ. ಈಗ ಒಂದು ಸಣ್ಣ ಹೋಟೆಲಿನಲ್ಲಿ ಸಹ ಹಲವಾರು ರೀತಿಯ ಭಕ್ಷ್ಯ ಭೋಜನಗಳ ಪಟ್ಟಿಯೇ ಇರುತ್ತದೆ. ಆಹಾರದ ವೈವಿಧ್ಯತೆ ಅಪಾರ. ಅನ್ನ, ಸಾರು, ಮುದ್ದೆ, ರೊಟ್ಟಿ, ಉಪ್ಪು ಸಾರಿನಿಂದ ಇಂದು ನೂರಾರು ವಿಶೇಷ ಖಾದ್ಯಗಳ ಆಹಾರ ಪದ್ಧತಿ ಸಾಮಾನ್ಯ ಜನರ ಕೈಗೆ ನಿಲುಕುವಂತೆ ಆಗಿದೆ. ನಾವು ಅದೃಷ್ಟವಂತರಲ್ಲವೇ. ಕೇವಲ ಪಟಾಪಟಿ ಚಡ್ಡಿ, ಪಂಚೆ, ಪೈಜಾಮ, ಕುರ್ತಾ, ಸೀರೆ, ರವಿಕೆ ಇಷ್ಟರಲ್ಲೇ ಇಡೀ ಜೀವನ ಕಳೆಯುತ್ತಿದ್ದ ನಮ್ಮ ಹಿಂದಿನವರಿಗೂ, ಒಂದು ದೊಡ್ಡ ಉದ್ಯಮವಾಗಿ ಬೆಳೆದು ಉಡುಪೇ ಒಂದು ಅಂತಸ್ತು, ಗೌರವದ ಮಾನದಂಡದ ಸ್ವರೂಪ ಪಡೆದಿರುವ ಇಂದಿನ ಕಾಲದ…

Read More

20 ಏಪ್ರಿಲ್ 2026ರ ಇಂದಿನ ರಾಶಿ ಭವಿಷ್ಯ. ಮೇಷದಿಂದ ಮೀನ ರಾಶಿಯವರೆಗೆ 12 ರಾಶಿಗಳ ಇಂದಿನ ಫಲ ಹೇಗಿದೆ? ಯಾರಿಗೆ ಅದೃಷ್ಟ? ಸಂಪೂರ್ಣ ಮಾಹಿತಿ ಇಲ್ಲಿದೆ ಮೇಷ (Aries): ಇಂದು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಕೆಲಸಗಳಲ್ಲಿ ಮುಂದಾಳತ್ವ ತೋರಿದರೆ ಉತ್ತಮ ಫಲ ಸಿಗಲಿದೆ. ಕುಟುಂಬದಲ್ಲಿ ಸ್ವಲ್ಪ ಮಾತಿನ ಚರ್ಚೆಗಳು ಸಂಭವಿಸಬಹುದು, ಶಾಂತವಾಗಿ ನಿರ್ವಹಿಸಿ. ವೃಷಭ (Taurus): ಆರ್ಥಿಕವಾಗಿ ಲಾಭದ ದಿನ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಅನುಕೂಲಕರ ಸಮಯ. ಆರೋಗ್ಯದ ಕಡೆ ಗಮನ ಕೊಡಿ, ಅಲಸ್ಯ ಹೆಚ್ಚಾಗಬಹುದು. ಮಿಥುನ (Gemini): ಸಂವಹನ ಕೌಶಲ್ಯದಿಂದ ನೀವು ಯಶಸ್ಸು ಸಾಧಿಸುತ್ತೀರಿ. ಸ್ನೇಹಿತರ ಸಹಕಾರ ಸಿಗುತ್ತದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯೋಗವಾಗಬಹುದು. ಕಟಕ (Cancer): ಮನಸ್ಸಿನಲ್ಲಿ ಗೊಂದಲ ಹೆಚ್ಚಾಗಬಹುದು. ಮಹತ್ವದ ನಿರ್ಧಾರಗಳನ್ನು ಮುಂದೂಡಿ. ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಸಿಂಹ (Leo): ಹುದ್ದೆ, ಗೌರವ ಹೆಚ್ಚಾಗುವ ಸೂಚನೆ. ನಿಮ್ಮ ನಾಯಕತ್ವ ಗುಣಗಳು ಹೊಳೆಯುತ್ತವೆ. ಆದರೆ ಅಹಂಕಾರ ತಪ್ಪಿಸಿ. ಕನ್ಯಾ (Virgo): ಕೆಲಸದಲ್ಲಿ ಒತ್ತಡ ಇದ್ದರೂ ಫಲ ಸಿಗಲಿದೆ.…

Read More

ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನಂತರ ಮೂಡಿದ ಆಲೋಚನೆಗಳು. ದೇಶದ ವಿವಿಧ ರಾಜ್ಯಗಳಲ್ಲಿ ಲೇಖಕರು ಕಂಡ ಕಹಿ ವಾಸ್ತವಗಳು, ಬಡತನ ಮತ್ತು ವ್ಯವಸ್ಥೆಯ ಭ್ರಷ್ಟತೆಯ ಬಗ್ಗೆ ವಿವೇಕಾನಂದ ಎಚ್. ಕೆ. ಅವರ ಮಾರ್ಮಿಕ ವಿಶ್ಲೇಷಣೆ ಇಲ್ಲಿದೆ. ರಾತ್ರಿ 8 – 30 ರ ಸಮಯ……. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿನ್ನೆ ರಾತ್ರಿ 8.30 ರ ನೇರ ಪ್ರಸಾರದ ಭಾಷಣ ಕೇಳಿದ ಮೇಲೆ ನನ್ನಲ್ಲಿ ಉಂಟಾದ ಕೆಲವು ಭಾವನೆಗಳು ಈ ರೀತಿ ಇದೆ. ದ್ವೇಷ, ಅಸೂಯೆ, ಸೈದ್ಧಾಂತಿಕ ನಿಲುವು, ರಾಜಕೀಯ ಎಲ್ಲವನ್ನು ಮೀರಿ ಇದನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ….. ಅಗಾಧ ಭಾವನೆಗಳ ಅಕ್ಷಯ ಪಾತ್ರೆ ನಮ್ಮ ಮನಸ್ಸು……. ಕ್ಷಣಕ್ಷಣಕ್ಕೂ ಬದಲಾಗುತ್ತಾ ವಿಶಾಲ ಸಾಗರದ ಅಲೆಗಳಂತೆ , ಎತ್ತರದ ಪರ್ವತಗಳ ನೋಟದಂತೆ ದಟ್ಟ ಕಾನನದ ಮಾಲೆಗಳಂತೆ, ಅನಂತ ಆಕಾಶದ ಕೌತುಕದಂತೆ, ಚಲಿಸುತ್ತಲೇ ಇರುತ್ತದೆ‌. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ಇರುವಂತೆ, ಪ್ರೀತಿ, ಪ್ರೇಮ, ಕರುಣೆ, ಕ್ಷಮೆ, ಮಮತೆಗಳೆಂಬ ಭಾವಗಳೂ ತುಂಬಿ…

Read More

ಇಂದು 19 ಏಪ್ರಿಲ್ 2026, ಭಾನುವಾರ. ಸಿಂಹ ರಾಶಿಯವರಿಗೆ ಯಶಸ್ಸು, ಮಕರ ರಾಶಿಯವರಿಗೆ ಧನಲಾಭ! ನಿಮ್ಮ ರಾಶಿಯ ಇಂದಿನ ಫಲವೇನು? ಕುಟುಂಬ, ವೃತ್ತಿ ಮತ್ತು ಆರ್ಥಿಕ ಸ್ಥಿತಿಗತಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮೇಷ ರಾಶಿ (Aries) ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಹೊಸ ಕೆಲಸಗಳಿಗೆ ಚಾಲನೆ ನೀಡಲು ಉತ್ತಮ ದಿನ. ಕುಟುಂಬದ ಸಹಕಾರ ದೊರೆಯುತ್ತದೆ. ಹಣಕಾಸಿನಲ್ಲಿ ಜಾಗ್ರತೆ ಇರಲಿ. ವೃಷಭ ರಾಶಿ (Taurus) ಕೆಲಸಗಳಲ್ಲಿ ಸ್ವಲ್ಪ ವಿಳಂಬ ಉಂಟಾಗಬಹುದು. ಸಹನೆ ಇರಲಿ. ಆರೋಗ್ಯದ ಕಡೆ ಗಮನ ಹರಿಸಿ. ಸ್ನೇಹಿತರೊಂದಿಗೆ ಮಾತುಕತೆ ಸಂತೋಷ ನೀಡುತ್ತದೆ. ಮಿಥುನ ರಾಶಿ (Gemini) ಇಂದು ನಿಮಗೆ ಹೊಸ ಅವಕಾಶಗಳು ಸಿಗಬಹುದು. ವೃತ್ತಿಯಲ್ಲಿ ಪ್ರಗತಿ ಸಾಧ್ಯ. ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸಾಧ್ಯತೆ ಇದೆ. ಕರ್ಕಾಟಕ ರಾಶಿ (Cancer) ಮನಸ್ಸಿನಲ್ಲಿ ಚಿಂತೆ ಹೆಚ್ಚಾಗಬಹುದು. ಶಾಂತವಾಗಿರಿ. ಕುಟುಂಬದ ವಿಷಯಗಳಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಹಣಕಾಸಿನಲ್ಲಿ ಸಮತೋಲನ ಕಾಯ್ದುಕೊಳ್ಳಿ. ಸಿಂಹ ರಾಶಿ (Leo) ಇಂದು ನೀವು ಕೈಗೊಂಡ ಕೆಲಸಗಳು ಯಶಸ್ವಿಯಾಗುತ್ತವೆ. ಅಧಿಕಾರಿಗಳ ಮೆಚ್ಚುಗೆ…

Read More

ಮತದಾರರ ಪಟ್ಟಿ ಪರಿಷ್ಕರಣೆ, ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮಹಿಳಾ ಮೀಸಲಾತಿಯಂತಹ ಪ್ರಮುಖ ನಿರ್ಧಾರಗಳು ಭಾರತವನ್ನು ಬಲಿಷ್ಠಗೊಳಿಸುತ್ತವೆಯೇ ಅಥವಾ ವಿಭಜನೆಯತ್ತ ಕೊಂಡೊಯ್ಯುತ್ತವೆಯೇ? ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಮತ್ತು ದೇಶದ ಭವಿಷ್ಯದ ಕುರಿತಾದ ಒಂದು ವಸ್ತುನಿಷ್ಠ ವಿಶ್ಲೇಷಣೆ ಇಲ್ಲಿದೆ. ಮತದಾರರ ಪಟ್ಟಿ ಪರಿಷ್ಕರಣೆ, ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ, ಶೇಕಡ 33% ರಷ್ಟು ಮಹಿಳಾ ಮೀಸಲಾತಿ…… ಈ ಮೂರೂ ವಿಷಯಗಳು ಭಾರತದ ಪ್ರಜಾಸತ್ತಾತ್ಮಕ ಗಣರಾಜ್ಯಗಳ ಒಕ್ಕೂಟದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ತೀರ್ಮಾನಗಳು. ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಳಿವು ಉಳಿವಿನ, ಚುನಾವಣಾ ರಾಜಕೀಯ ಮತ್ತು ಅಧಿಕಾರದ ದೃಷ್ಟಿಯಿಂದ ಅತ್ಯಂತ ಮುಖ್ಯವಾದದ್ದು….. ಏಕ್ ಭಾರತ್ ಶ್ರೇಷ್ಠ್ ಭಾರತ್, ಬಹುತ್ವ ಭಾರತ್ ಬಲಿಷ್ಠ ಭಾರತ್, ಒಂದೇ ದೇಶ ಒಂದೇ ಭಾಷೆ ಒಂದೇ ಚುನಾವಣೆ, ವೈವಿಧ್ಯಮಯ ಭಾರತ ವೈಶಿಷ್ಟ್ಯ ಪೂರ್ಣ ಭಾರತ….. ಈ ಮಸೂದೆಗಳು ಭಾರತವನ್ನು ಮುಂದಿನ ದಿನಗಳಲ್ಲಿ ಅತ್ಯಂತ ಆಧುನಿಕ, ಮುಂದುವರಿದ, ಬಲಿಷ್ಠ ದೇಶವನ್ನಾಗಿ, ಐಕ್ಯತೆಯ ದೇಶವನ್ನಾಗಿ ರೂಪಿಸುತ್ತದೆಯೇ ಅಥವಾ ಭಾರತವನ್ನು ಜಾತಿ, ಧರ್ಮ,…

Read More

18 ಏಪ್ರಿಲ್ 2026ರ ನಿತ್ಯ ಭವಿಷ್ಯ: ಇಂದು ಮೇಷ ರಾಶಿಯವರಿಗೆ ಕಾರ್ಯದಕ್ಷತೆ, ವೃಷಭಕ್ಕೆ ಆರ್ಥಿಕ ಲಾಭ! ನಿಮ್ಮ ರಾಶಿಯ ಫಲ ಹೇಗಿದೆ? ಮಿಥುನ ಮತ್ತು ವೃಶ್ಚಿಕ ರಾಶಿಯವರು ಇಂದು ಯಾವ ಎಚ್ಚರಿಕೆ ವಹಿಸಬೇಕು? ದ್ವಾದಶ ರಾಶಿಗಳ ಸಂಪೂರ್ಣ ರಾಶಿಫಲ ಇಲ್ಲಿದೆ. 🐐 ಮೇಷ (Aries) ಇಂದು ನಿಮ್ಮ ಕೆಲಸಗಳಲ್ಲಿ ಚುರುಕು ಕಾಣಿಸಿಕೊಳ್ಳುತ್ತದೆ. ಹೊಸ ಯೋಜನೆಗಳನ್ನು ಆರಂಭಿಸಲು ಸೂಕ್ತ ದಿನ. ಕುಟುಂಬದ ಸಹಕಾರ ದೊರೆಯುತ್ತದೆ. 🐂 ವೃಷಭ (Taurus) ಆರ್ಥಿಕವಾಗಿ ಲಾಭದ ದಿನ. ಹೂಡಿಕೆ ಮಾಡುವ ಅವಕಾಶಗಳು ಬರುತ್ತವೆ. ಆದರೆ ಅತಿವಿಶ್ವಾಸ ತಪ್ಪಿಸಿ. 👬 ಮಿಥುನ (Gemini) ಸಂವಹನದಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರೊಂದಿಗೆ ಸಣ್ಣ ಗೊಂದಲಗಳು ಸಂಭವಿಸಬಹುದು. ಶಾಂತವಾಗಿ ವರ್ತಿಸಿ. 🦀 ಕಟಕ (Cancer) ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಬಹುದು. 🦁 ಸಿಂಹ (Leo) ನಿಮ್ಮ ನಾಯಕತ್ವ ಗುಣಗಳು ಮೆರೆದಾಡುತ್ತವೆ. ಕೆಲಸದ ಸ್ಥಳದಲ್ಲಿ ಪ್ರಶಂಸೆ ಸಿಗುತ್ತದೆ. 👧 ಕನ್ಯಾ (Virgo) ಸಣ್ಣ ಸಮಸ್ಯೆಗಳು ನಿಮ್ಮ ಗಮನವನ್ನು ಬೇರೆಡೆ…

Read More

ಚಿತ್ರದುರ್ಗ : ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಮನುಷ್ಯನ ಅರೋಗ್ಯ ದಿನ ದಿನಕ್ಕೂ ಕ್ಷಿಣಿಸುತ್ತಿದೆ. ನಾನಾ ನಮೂನೆಯ ಖಾಯಿಲೆಗಳಿಗೆ ತುತ್ತಾಗುವ ಮುನ್ನ ಎಚ್ಚರ ವಹಿಸುವುದು ಅನಿವಾರ್ಯ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಅಭಿಪ್ರಾಯ ಪಟ್ಟರು ಇಲ್ಲಿನ ರೋಟರಿ ಕ್ಲಬ್ ಸಭಾಂಗಣದಲ್ಲಿ ಗೋಡೆಮನೆ ಅರೋಗ್ಯ ಮತ್ತು ರಸ್ತೆ ಜಾಗೃತಿ ಟ್ರಸ್ಟ್, ರೋಟರಿ ಕ್ಲಬ್ ಚಿನ್ಮೂಲದ್ರಿ, ರೆಡ್ ಕ್ರಾಸ್ ಸಂಸ್ಥೆ ಹಾಗೂ ಬೆಂಗಳೂರು ಸಪ್ತಗಿರಿ ಆಸ್ಪತ್ರೆ ಸಹಯೋದಲ್ಲಿ ಗೋಡೆಮನೆ ವಿನಯ್ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಬೃಹತ್ ಅರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು ಮನುಷ್ಯ ಒತ್ತಡದ ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ತುಂಬಾ ಗಟ್ಟಿಮುಟ್ಟಿಯಾಗಿ ಇರುತ್ತಿದ್ದರು. ಅವರ ಕಾಲದಲ್ಲಿ ಈಗಿನಷ್ಟು ಭಯಂಕರ ರೋಗ ಖಾಯಿಲೆಗಳು ಬರುತ್ತಿರಲಿಲ್ಲ. ಅವರು ಅನುಸರಿಸುತ್ತಿದ್ದ ಜೀವನ ಶೈಲಿಯೇ ಅವರ ಅರೋಗ್ಯದ ಗುಟ್ಟು ಎಂದು ಹೇಳಿದರು ಇಗೀಗ ಎಲ್ಲವೂ ಕಲುಷಿತವಾಗುತ್ತಿದೆ,ನಾವು ತಿನ್ನುವ ಅನ್ನ, ನೀರು, ಸೇವಿಸುವ ಗಾಳಿಯೂ ಸಹ ಶುದ್ಧವಿಲ್ಲ.…

Read More